ಚಿತ್ರದುರ್ಗ: ಆತ್ಮಹತ್ಯೆಗೆ ಶರಣಾದ ಪುರಸಭೆ ಅಧ್ಯಕ್ಷನ ಪತ್ನಿ
ಚಿತ್ರದುರ್ಗ, ಜೂನ್ 17: ಪುರಸಭೆ ಅಧ್ಯಕ್ಷರ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಲ್ಲೇಶ್ವರ ಬಡಾವಣೆಯಲ್ಲಿ ನಡೆದಿದೆ.
ಚಿತ್ರದುರ್ಗ ಪುರಸಭೆಯ ಅಧ್ಯಕ್ಷರ ಪತ್ನಿ ಹೇಮಾವತಿ (50) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೂರು ತಿಂಗಳ ಹಿಂದೆ ಇವರ ತಂಗಿ ಅನಾರೋಗ್ಯದಿಂದ ಸಾವಿಗೀಡಾದಾಗಿನಿಂದ ಹೇಮಾವತಿ ಖಿನ್ನತೆ ಅನುಭವಿಸುತ್ತಿದ್ದರು.

ತಂಗಿಯ ಸಾವಿನಿಂದ ಮನನೊಂದು ಇವರು ಕಲ್ಲೇಶ್ವರ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯಬೇಕಿದೆ.












Click it and Unblock the Notifications