ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಎದುರಾದ ವಿಚಿತ್ರ ಸಮಸ್ಯೆಗಳು
ಬೆಂಗಳೂರು, ಆಗಸ್ಟ್ 4: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಚಿತ್ರ ವಿಚಿತ್ರ ಸಮಸ್ಯೆಗಳು ಅವರ ಮನೆಯಲ್ಲಿ ಎದುರಾಗಿದ್ದವು.
ದಾಳಿ ನಡೆಸಿದ ಅಧಿಕಾರಿಗಳಿಗೆ ಡಿಕೆಶಿ ತಮ್ಮ ಮನೆಯ ಏರ್ ಕಂಡಿಷನರ್ ನಲ್ಲಿ ಹಣವನ್ನು ಸಂಗ್ರಹಿಸಿಟ್ಟಿರಬಹುದು ಎಂಬ ಅನುಮಾನ ಕಾಡತೊಡಗಿತು. ತಕ್ಷಣ ಐಟಿ ಇಲಾಖೆಯ ಅಧಿಕಾರಿಗಳು ಎಸಿ ತೆರೆಯಲು ಎಲೆಕ್ಟ್ರಿಷಿಯನ್ ಕರೆಸಿದರು.
ಇದಾದ ನಂತರ ಐಟಿ ಇಲಾಖೆಗೆ ಮನೆಯಲ್ಲಿ ಲಾಕರ್ ಗಳು ಸಿಕ್ಕಿದವು. ಅಧಿಕಾರಿಗಳು ಪೇಚಾಡಿ ಪೇಚಾಡಿ ಎರಡು ಲಾಕರ್ ಗಳನ್ನು ತೆರೆದರು. ಉಳಿದ ಮೂರನ್ನು ತೆರಯಲು ಸಾಧ್ಯವಾಗಲೇ ಇಲ್ಲ.
ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಪಾಸ್ವರ್ಡ್ ನೀಡದ ಡಿಕೆಶಿ
ಡಿಜಿಟಲ್ ಲಾಕರ್ ತೆರೆಯಲು ಅಧಿಕಾರಿಗಳು ಪಾಸ್ವರ್ಡ್ಗಾಗಿ ಶಿವಕುಮಾರ್ ರನ್ನು ಕೇಳಿದರು. ಆದರೆ ಅವರೋ ನನಗೆ ನೆನಪಿಲ್ಲ; ಮರೆತು ಹೋಗಿದೆ ಎಂದು ಬಿಟ್ಟರು. ಅಂತಿಮವಾಗಿ ಕಮ್ಮಾರನಿಗೆ ಕರೆ ಹೋಯಿತು. ನಕಲಿ ಬೀಗದ ಕೀಲಿ ತಯಾರಿಸುವವ ಬಂದು ಬೀಗ ತಯಾರಿಸಿ ಲಾಕರ್ ಮುರಿಯಲಾಯಿತು. ಅಲ್ಲಿ ಐಟಿ ಇಲಾಖೆಯ ಅಧಿಕಾರಿಗಳಿಗೆ ಹಲವು ಹೂಡಿಕೆಯ ದಾಖಲೆಗಳು ಸಿಕ್ಕಿದವು.

ಲಾಕರ್ ನಲ್ಲಿ ಮಹತ್ವದ ದಾಖಲೆ
ಸಿಂಗಾಪುರ್ ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡಿದ ದಾಖಲೆಗಳು ಅಲ್ಲಿದ್ದವು. ಇವನ್ನೆಲ್ಲಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯ ಮಗನೊಂದಿಗಿನ ಒಪ್ಪಂದಕ್ಕೆ ಸಂಬಂಧಿಸಿದ ಒಂದು ದಾಖಲೆ ಕೂಡ ಐಟಿಗೆ ಸಿಕ್ಕಿದೆ.

ವಿದೇಶಗಳಲ್ಲಿ ಹೂಡಿಕೆ
ಬರ್ಮಿಂಗ್ ಹ್ಯಾಮ್ ಆಸ್ತಿಯ ಹೊರತಾಗಿ ದುಬೈ ಮತ್ತು ಸಿಂಗಪುರದಲ್ಲಿ ಶಾಪಿಂಗ್ ಸಂಕೀರ್ಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡ ಬಗ್ಗೆ ಅಧಿಕಾರಿಗಳನ್ನು ಕೇಳಲಾಯಿತು. ಆದರೆ ಅಧಿಕಾರಿಗಳು ಸುದ್ದಿಯನ್ನು ಖಚಿತಪಡಿಸಲೂ ಇಲ್ಲ ಅತ್ತ ನಿರಾಕರಿಸಿಯೂ ಇಲ್ಲ.

ಡಿಕೆಶಿ ವಿಚಾರಣೆ
ಇದೇ ವೇಳೆ ಸೌರ ವಿದ್ಯುತ್ ಉಪಕರಣ ಸಂಸ್ಥೆಗಳೊಂದಿಗೆ ನಡೆಸಿದ ಡೀಲ್ ಗೆ ಸಂಬಂಧಿಸಿದಂತೆ ಶಿವಕುಮಾರ್ ರನ್ನು ಸುಮಾರು ಎರಡು ಗಂಟೆಗಳ ಕಾಲ ಪ್ರಶ್ನಿಸಲಾಯಿತು. ಈ ವೇಳೆ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಮೂರನೇ ದಿನವೂ ಮುಂದುವರಿದ ದಾಳಿ
ಡಿಕೆಶಿ ಮತ್ತು ಅವರ ಆಪ್ತರ ಮೇಲೆ ಮೂರನೇ ದಿನವೂ ದಾಳಿ ಮುಂದುವರಿದಿದೆ. ದೆಹಲಿಯ ಸಫ್ದರ್ ಜಂಗ್ ನಲ್ಲಿರುವ ಮನೆ, ಸದಾಶಿವನಗರದಲ್ಲಿರುವ ಮನೆ, ಮೈಸೂರಿನಲ್ಲಿರುವ ಮಾವ ತಿಮ್ಮಯ್ಯ ಮನೆ ಹಾಗೂ ಹಾಸನದಲ್ಲಿರುವ ಆಪ್ತ ಸಚಿನ್ ನಾರಾಯಣ್ ಸಹೋದರನ ಮನೆಯಲ್ಲಿ ಐಟಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications