ಕರ್ನಾಟಕದ ಆದಾಯದ ಮೇಲೆ ಜಿಎಸ್ಟಿ ಪರಿಣಾಮವೇನು?
ಬೆಂಗಳೂರು, ಆಗಸ್ಟ್ 03 : ರಾಷ್ಟ್ರದಾದ್ಯಂತ ಏಕರೂಪ ತೆರಿಗೆಯನ್ನು ಜಾರಿಗೆ ತರುವ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಅಂಗೀಕಾರವದ್ದು ಇನ್ನು ಮುಂದೆ ಅನುಷ್ಠಾನಕ್ಕೆ ಬರಲಿದೆ. ಅದರೊಂದಿಗೆ ಈ ಜಿಎಸ್ ಟಿ ಕರ್ನಾಟಕದ ಆದಾಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ.[ಜಿಎಸ್ಟಿ ಪರಿಣಾಮ, ಯಾವುದು ಏರಿಕೆ? ಯಾವುದು ಇಳಿಕೆ?]
ಆರಂಭದಲ್ಲಿ ಕೆಲ ರಾಜ್ಯಗಳು ಜಿಎಸ್ ಟಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ನಿರಂತರ 9 ವರ್ಷಗಳ ಚರ್ಚೆ ನಂತರ ಜಿಎಸ್ ಟಿ ಜಾರಿಗೆ ಬಂದಿದೆ. ಹಾಗಾದರೆ ಇದು ರಾಜ್ಯಗಳ ಮೇಲೆ ಯಾವ ಪರಿಣಾಮ ಬೀರುತ್ತದೆ? ನಮ್ಮ ಕರ್ನಾಟಕದ ಮೇಲೆ ಯಾವ ಬಗೆಯ ಪರಿಣಾಮ ಬೀರಲಿದೆ ಎಂಬುದರ ಮೇಲೊಂದು ಸೂಕ್ಷ್ಮ ನೋಟ ಇಲ್ಲಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜಿಎಸ್ ಟಿ ಮಸೂದೆಯನ್ನು ಸ್ವಾಗತ ಮಾಡಿದ್ದಾರೆ. 5 ವರ್ಷಗಳವರೆಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ನಷ್ಟ ಭರಿಸುತ್ತೇನೆ ಎಂದು ಮಸೂದೆ ಮಂಡನೆಗೂ ಮುನ್ನ ಭರವಸೆಯನ್ನು ನೀಡಿತ್ತು.

ಕೇಂದ್ರ ಸರ್ಕಾರದೊಂದಿಗೆ ಹಂಚಿಕೆ
ವ್ಯಾಟ್ ಅಥವಾ ಮೌಲ್ಯವರ್ಧಿತ ತೆರಿಗೆಯಲ್ಲಿ ಅರ್ಧದದಷ್ಟು ಆದಾಯವನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಕೇಂದ್ರಕ್ಕೆ ಸಲ್ಲಿಕೆ
ಎಂಟ್ರಿ ಟ್ಯಾಕ್ಸ್: ಬೇರೆ ರಾಜ್ಯದಿಂದ ವಸ್ತುಗಳು ರಾಜ್ಯ ಪ್ರವೇಶ ಮಾಡುವ ಮುನ್ನ ಸಲ್ಲಿಕೆಯಾಗುತ್ತಿದ್ದ ಶೇ. 2 ತೆರಿಗೆ ಕೇಂದ್ರದ ಪಾಲಾಗಲಿದೆ. ಸಿ ಎಸ್ ಟಿ( ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್): ಇದು ಸಹ ಜಿಎಸ್ ಟಿ ನಿಯಮದ ಅನ್ವಯ ಕೇಂದ್ರ ಸರ್ಕಾರದ ಪಾಲಾಗುತ್ತದೆ.

ಕೇಂದ್ರದ ಪಾಲು ದೊಡ್ಡದಿದೆ
ಲಕ್ಷುರಿ ಟ್ಯಾಕ್ಸ್, ಮನರಂಜನಾ ತೆರಿಗೆ, ಬೆಟ್ಟಿಂಗ್ ತೆರಿಗೆ ಇವು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತವೆ.

ರಾಜ್ಯದ ಕೈಯಲ್ಲಿ
ಸ್ಟಾಂಪ್ಸ್ ಮತ್ತು ನೋಂದಣಿ, ಸೇಲ್ಸ್ ಟ್ಯಾಕ್ಸ್(ಮಾರಾಟ ತೆರಿಗೆ). ಪ್ರೊಫೇಶನ್ ಟ್ಯಾಕ್ಸ್ ಮತ್ತು ಎಲೆಕ್ಟ್ರಿಸಿಟಿ ಟ್ಯಾಕ್ಸ್ ರಾಜ್ಯದ ಬೊಕ್ಕಸಕ್ಕೆ ಲಭ್ಯವಾಗುತ್ತದೆ. ಅಬಕಾರಿ ಸುಂಕದ ಅಧಿಕಾರ ರಾಜ್ಯದ ಕೈಯಲ್ಲೇ ಇರುತ್ತದೆ.

ನಷ್ಟದ ಲೆಕ್ಕ
ಜಿಎಸ್ ಟಿ ಅನ್ವಯ (ಎಂಟ್ರಿ ಟ್ಯಾಕ್ಸ್, ಸಿಎಸ್ ಟಇ, ಬೆಟ್ಟಿಂಗ್, ಮನರಂಜನೆ ತೆರಿಗೆ) ಕಳೆದುಕೊಳ್ಳುವುದು- 5,835 ಕೋಟಿ ರು.

ಇನ್ನು ಇದೆ
ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಮಾಡಿಕೊಳ್ಳುವುದರಿಂದ ಕಳೆದುಕೊಳ್ಳುವುದು- 7,769 ಕೋಟಿ ರು., ತೆರಿಗೆ ಹರಿವಿನಿಂದ ರಾಜ್ಯಕ್ಕೆ ನಷ್ಟ- 8556 ಕೋಟಿ ರು.(ಒಟ್ಟು ನಷ್ಟ 22,160 ಕೋಟಿ ರು.)

ಆದಾಯದ ಲೆಕ್ಕ
ಸೇವಾ ಶುಲ್ಕ ವಿಧಿಸುವುದರಿಂದ ಆದಾಯ-5, 680 ಕೋಟಿ ರು., ವಿನಾಯಿತಿಗಳನ್ನು ತಡೆದಿದ್ದಕ್ಕೆ ಸಿಗುವ ಆದಾಯ- 8, 064 ಕೋಟಿ ರು.

ಒಟ್ಟು ಲೆಕ್ಕ
ಈ ಎಲ್ಲ ವಿವರಗಳನ್ನು ತಾಳೆ ಹಾಕಿದರೆ ಕರ್ನಾಟಕ ಜಿಎಸ್ ಟಿ ಕಾರಣಕ್ಕೆ 8,416 ಕೋಟಿ ರು. ಆದಾಯವನ್ನು ಕಳೆದುಕೊಳ್ಳಲಿದೆ.
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications