ಮುನಿಸಿಕೊಂಡ ಕೃಷ್ಣರ ಮನವೊಲಿಸುತ್ತೇವೆ: ಪರಮೇಶ್ವರ

ಕಾಂಗ್ರೆಸ್ ಪಕ್ಷದಲ್ಲಿಯೂ ಭಿನ್ನಮತ ಮನೆ ಮಾಡಿದ್ದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಮುನಿಸಿಕೊಂಡು ಕುಳಿತಿರುವ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ಅವರನ್ನು ಗೃಹಸಚಿವ ಜಿ.ಪರಮೇಶ್ವರ್ ಅವರು ಮನವೊಲಿಸಲು ಮುಂದಾಗಿದ್ದಾರೆ.

ಚಿಕ್ಕಮಗಳೂರು, ಫೆಬ್ರವರಿ 3: ಕಾಂಗ್ರೆಸ್ಸಿಗೆ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ರಾಜೀನಾಮೆ ನೀಡಿರುವ ಹಿನ್ನೆಲೆ ಪಕ್ಷದಲ್ಲಿ ಬಾರಿ ಭಿನ್ನಮತ ಮನೆಮಾಡಿದ್ದು, ಎಸ್ಸೆಂ ಕೃಷ್ಣ ರವರ ಮನವೊಲಿಸುವುದಾಗಿ ಶುಕ್ರವಾರ ಗೃಹಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನು ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ಅವರ ಮನವೊಲಿಸುವುದಾಗಿ ತಿಳಿಸಿದರು.[ಎಸ್.ಎಂ ಕೃಷ್ಣ ಸುದ್ದಿಗೋಷ್ಠಿ: ಉಳಿದವರು ಕಂಡಂತೆ..]

We will change Former CM S.M.Krishna's mind says Home Minister Dr.G.Parameshwara

ಪಕ್ಷದಲ್ಲಿ ಹಿರಿಯರಿಗೆ ಅಗೌರವ ಹಾಗೂ ಕಡೆಗಣನೆ ಕಾರಣಕ್ಕಾಗಿ ಎಸ್ಸೆಂ ಕೃಷ್ಣ ಅವರು ನೊಂದು ರಾಜೀನಾಮೆ ನೀಡಿದ್ದರು. ಅದರೆ ನಾನು ಪಕ್ಷದಿಂದ ನಿವೃತ್ತಿ ಹೊಂದುತ್ತಿದ್ದೇನೆ ರಾಜಕೀಯದಿಂದಲ್ಲ ಎಂಬ ಹೇಳಿಕೆ ಹಲವು ಅನುಮಾನ ಮತ್ತು ಕುತೂಹಲವನ್ನು ಉಂಟುಮಾಡಿತ್ತು.

ಇದರ ಬೆನ್ನಲ್ಲೇ ಅನೇಕ ಕಾಂಗ್ರೆಸ್ ಹಿರಿಯ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ಕಿಡಿಕಾರಿ ಎಸ್ಸೆಂ ಕೃಷ್ಣ ಅವರೊಂದಿಗೆ ಚರ್ಚೆಯನ್ನೂ ಮಾಡಿದ್ದರು.[ಎಸ್ ಎಂ ಕೃಷ್ಣ ಅಂದ್ರೆ ನೆನಪಾಗುವ ಈ ಐದು ವಿಚಾರ]

ಪ್ರಸ್ತುತ ಎಸ್ಸೆಂ ಕೃಷ್ಣ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಗೃಹಸಚಿವ ಮತ್ತು ಇಂಧನ ಸಚಿವ ಮುಂದಾಗಿರುವುದು ಯಾವ ಆಯಾಮವನ್ನು ಪಡೆಯುತ್ತದೆ ಎಂಬುದು ಮುಂದೆ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+