ಖಾಕಿ ಮತ್ತು ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ
ರಾಯಚೂರಿನ ಜಿಲ್ಲಾ ಯಾದವ ಸಮಾಜ ಮೈದಾನದಲ್ಲಿ ತಾಲೂಕು ಮಂಗಲ ಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಖಾಕಿ ಹಾಗೂ ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ ಎಂದಿದ್ದಾರೆ.
ರಾಯಚೂರು, ಡಿ.17 : ಗೋವಂಶ ನಾಶವೆಂದರೆ ದೇಶವೇ ನಾಶವಾದಂತೆ. ಖಾಕಿ ಹಾಗೂ ಖಾದಿಯ ಮೇಲೆ ಹೆಚ್ಚಿನ ಭರವಸೆ ಇನ್ನು ಬೇಕಿಲ್ಲ.
ಸಂತರ ದೃಢ ಸಂಕಲ್ಪದಿಂದ ಮಾತ್ರ ಈ ಗೋಸಂರಕ್ಷಣೆಯ ಕಾರ್ಯ ನಡೆಯಬೇಕಿದೆ. ಜೊತೆಗೆ ಸಂತರ ಹೆಜ್ಜೆಯೊಡನೆ ಜನರೂ ಜೊತೆಗೂಡಬೇಕಿದೆ, ಅದಕ್ಕಾಗಿಯೇ 'ಮಂಗಲ ಗೋಯಾತ್ರೆ' ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಶನಿವಾರ (ಡಿ 17) ರಾಯಚೂರಿನ ಜಿಲ್ಲಾ ಯಾದವ ಸಮಾಜ ಮೈದಾನದಲ್ಲಿ ತಾಲೂಕು ಮಂಗಲ ಗೋಯಾತ್ರಾ ಸಮಿತಿ ಆಯೋಜಿಸಿದ್ದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಗೋಪಾದ ಧೂಳಿಯಿಂದ ವಾತಾವರಣ ಪಾವನಮಯವಾಗುತ್ತಿದ್ದ ಗೋಧೂಳಿ ಮುಹೂರ್ತಗಳಿದ್ದ ದಿನಗಳಿದ್ದವು. (ಗೋಮಯದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ)

ವರ್ಣನೆಗೆ ಮೀರಿದ ಗುಣಗಳ ಗಣಿ ಗೋಮಾತೆ. ಯುಗಯುಗಗಳು ಕಳೆದರೂ ಮುಗಿಯದ ಗಾಥೆ ಗೋಮಾತೆ. ಇಂತಹಾ ಗೋಮಾತೆಯನ್ನು ನಾವಿಂದು ಅಕ್ಕರೆಯಿಂದ ಕಾಣುತ್ತಿಲ್ಲ.
ತಾಯಿ ಕೊಟ್ಟದ್ದನ್ನು ತಿನ್ನುವುದನ್ನು ಬಿಟ್ಟು ತಾಯಿಯನ್ನೇ ತಿನ್ನುವ ಧೂರ್ತತನಕ್ಕೆ ಮುಂದಾಗುತ್ತಿದ್ದೇವೆ ಎಂದು ಶ್ರೀಗಳು ಖೇದ ವ್ಯಕ್ತಪಡಿಸಿದರು.
ಇಂದು ಧೂಳೆಂದರೆ ಖಾಯಿಲೆ ಎನ್ನುವಂತಾಗಿದೆ. ಗೋವುಗಳೂ ಅಲ್ಲದ, ಹಂದಿಗಳೂ ಅಲ್ಲದ ಕೋಟ್ಯಾಂತರ ಕುಲಾಂತರಿ ಗೋವುಗಳು ಇಂದು ಉದ್ಭವಿಸಿವೆ. ಈ ಅಪಾಯದಿಂದ ಸಮಾಜವನ್ನು ಎಚ್ಚರಿಸುವ ಜಾಗೃತಿ ಘಂಟೆಯೇ ಮಂಗಲಗೋಯಾತ್ರೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಹೇಳಿದರು.
ಗೋವುಗಳನ್ನು ಚಿತ್ರಹಿಂಸೆ ಮಾಡಿ ಕೊಲ್ಲುವುದನ್ನು ಇಂದು ಕಾಣುತ್ತಿದ್ದೇವೆ. ಯಾರಿಗೂ ಉಪದ್ರವವನ್ನು ಕೊಡದೇ ಉಪಕಾರವನ್ನೇ ಮಾಡುವ ಗೋಮಾತೆಯನ್ನು ನಾವಿಂದು ಆದರದಿಂದ ಕಾಣಬೇಕಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ತಾಲೂಕು ಮಂಗಲಗೋಯಾತ್ರಾ ಸಮಿತಿಯವರು, ರಾಘವೇಶ್ವರ ಶ್ರೀಗಳಿಗೆ ಗೋಮಯದ ಗಣೇಶನನ್ನು ನೀಡಿ ಗೌರವಿಸಿದ್ದು ಎಲ್ಲರ ಗಮನ ಸೆಳೆಯಿತು.
ಪೂರ್ವಾಹ್ನ 11.30 ಕ್ಕೆ ರಾಯರ ಗುಡಿಯಿಂದ ರಾಯಚೂರಿಗೆ ಆಗಮಿಸಿದ ಗೋಯಾತ್ರೆಯನ್ನು ನಗರದ ಗಣ್ಯರು ಸ್ವಾಗತಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಡೋಲುವಾದನಗಳನ್ನು ಒಳಗೊಂಡು ಗೋರಥಗಳು ಸಾಗಿ, ಸೇರಿದವರಲ್ಲಿ ಗೋಜಾಗೃತಿ ಮೂಡಿಸಿದವು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications