ಉಡುಪಿ : ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ?
ಉಡುಪಿ, ಜೂನ್ 06 : ಉಡುಪಿಯಲ್ಲಿ ಖಾಸಗಿ ಬಸ್ ಪ್ರಯಾಣದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆನರಾ ಬಸ್ ಮಾಲೀಕರ ಸಂಘ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಮಣಿಪಾಲದಲ್ಲಿರುವ
ರಜತಾದ್ರಿಯ
ಅಟಲ್
ಬಿಹಾರಿ
ವಾಜಪೇಯಿ
ಸಭಾಂಗಣದಲ್ಲಿ
ಶನಿವಾರ
ನಡೆದ
ಪ್ರಾದೇಶಿಕ
ಸಾರಿಗೆ
ಪ್ರಾಧಿಕಾರದ
ಸಭೆಯಲ್ಲಿ
ಈ
ಕುರಿತು
ಚರ್ಚೆ
ನಡೆದಿದೆ.
ಜಿಲ್ಲಾಧಿಕಾರಿ
ಡಾ.ವಿಶಾಲ್
ಅವರಿಗೆ
ಬಸ್
ಮಾಲೀಕರು
ದರ
ಹೆಚ್ಚಳಕ್ಕೆ
ಅವಕಾಶ
ನೀಡಬೇಕು
ಎಂದು
ಮನವಿ
ಮಾಡಿದ್ದಾರೆ.
[ಖಾಸಗಿ
ಬಸ್
ದರ
ಏರಿಕೆಗೆ
ಬೀಳಲಿದೆ
ಕಡಿವಾಣ]
ಹಿಂದೆ ಬಸ್ ದರ ಏರಿಕೆ ಮಾಡಿದ ಬಳಿಕ ಈವರೆಗೆ ಡಿಸೇಲ್ ದರ ಲೀಟರ್ಗೆ 10 ರೂ. ಏರಿಕೆಯಾಗಿದೆ ಮತ್ತು ಶೇ.40ರಷ್ಟು ತೆರಿಗೆ ಜಾಸ್ತಿಯಾಗಿದೆ. ಆದ್ದರಿಂದ, ಪ್ರಯಾಣ ದರವನ್ನು ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಬಸ್ ಮಾಲೀಕರ ಸಂಘ ಮನವಿ ಮಾಡಿದೆ. [ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ]
ಬಸ್ ಮಾಲೀಕರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಕಡ್ಡಾಯವಾಗಿ ಸಮಯಪಾಲನೆ ಮಾಡಬೇಕು ಮತ್ತು ನಿಗದಿ ಪಡಿಸಿದ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. [ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಏರಿಕೆ]
ಕೆಎಸ್ಆರ್ಟಿಸಿಯ ವೋಲ್ವೊ ಬಸ್ಸುಗಳು ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಆರೋಪಿಸಿದರು. ಅಂಬಾಗಿಲು-ಕಲ್ಸಂಕ-ಉಡುಪಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ತಮ್ಮ ಮಾರ್ಗ ಬಿಟ್ಟು ಬೇರೆ ಮಾರ್ಗವಾಗಿ ಸಂಚರಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.