ಪಾತ್ರದ ಒಳಗೆ ಪರಕಾಯಪ್ರವೇಶ ಮಾಡುವ ಶಕ್ತಿ ಚಿಟ್ಟಾಣಿಗಿತ್ತು
ಏಕವ್ಯಕ್ತಿ ಯಕ್ಷಗಾನಕ್ಕೆ ಕಾರಣ, ಸ್ಪೂರ್ತಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ಪಾತ್ರದ ಒಳಗೆ ಪರಕಾಯಪ್ರವೇಶ ಮಾಡಿ ಅದನ್ನು ಅಭಿವ್ಯಕ್ತಪಡಿಸುತ್ತಿದ್ದ ಕಲೆ ಚಿಟ್ಟಾಣಿಯವರಿಗಿತ್ತು, ಮಂಟಪ ಪ್ರಭಾಕರ ಉಪಾಧ್ಯಾಯ ಅಭಿಪ್ರಾಯ.
ಬೆಂಗಳೂರು, ಅ 15: ಏಕವ್ಯಕ್ತಿ ಯಕ್ಷಗಾನಕ್ಕೆ ಕಾರಣ ಹಾಗೂ ಸ್ಪೂರ್ತಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಾಗಿದ್ದಾರೆ. ಪಾತ್ರದ ಒಳಗೆ ಪರಕಾಯಪ್ರವೇಶ ಮಾಡಿ ಅದನ್ನು ಅಭಿವ್ಯಕ್ತಪಡಿಸುತ್ತಿದ್ದ ಕಲೆ ಚಿಟ್ಟಾಣಿಯವರಿಗಿತ್ತು ಎಂದು ಖ್ಯಾತ ಕಲಾವಿದರಾದ ಮಂಟಪ ಪ್ರಭಾಕರ ಉಪಾಧ್ಯಾಯ ಹೇಳಿದರು.
ಭಾನುವಾರ (ಅ 15) ನಗರದ ಮಲ್ಲೇಶ್ವರಂ ನಲ್ಲಿರುವ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆದ "ಚಿಟ್ಟಾಣಿ ನಮನ" ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಟಪ ಪ್ರಭಾಕರ ಉಪಾಧ್ಯಾಯ, ಮತ್ತೆಮತ್ತೆ ನೆನಪಿಸಿಕೊಳ್ಳುವಂತದ್ದೇ ಶ್ರದ್ಧಾಂಜಲಿ.
ಅಂತಹ ಕಲಾತಪಸ್ವಿಯ ಜೊತೆ ಇರಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಯಕ್ಷಗಾನದ ಕುರಿತಾಗಿ ಅವರಿಗಿದ್ದ ಬದ್ಧತೆ - ರೀತಿನೀತಿ - ಶಿಸ್ತು - ಸ್ಪರ್ಧಾಮನೋಭಾವ ಬೇರೆಯಾರಲೂ ಕಾಣಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಅವರು ಮಾತನಾಡಿ, ಚಿಟ್ಟಾಣಿ ಅವರದ್ದು ನೇರ ವ್ಯಕ್ತಿತ್ವ ಮಾತ್ರವಲ್ಲ, ಅವರದ್ದು ಮಾದರೀ ವ್ಯಕ್ತಿತ್ವ. ಸರಳ ಸಜ್ಜನಿಕೆಯವರಾದ ಅವರು ರಂಗದ ಮೇಲೆ ಹಾಗೂ ಬದುಕಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹವ್ಯಕ ಸಮಾಜದ ಹೆಮ್ಮೆಯ ಪುತ್ರರಾದ ಅವರು ಸರ್ವ ಸಮಾಜದ ಹೆಮ್ಮೆ ಎಂದು ಹೇಳಿದರು.
ಚಿಟ್ಟಾಣಿಯವರ ಆಪ್ತ ಸ್ವಭಾವ, ಅತ್ಮೀಯ ನಡವಳಿಕೆಗಳು ಅವರ ವಿಶೇಷತೆಗಳಾಗಿತ್ತು, ಅವರಿಂದ ರಂಗದ ಮೇಲೆ ಹಾಗೂ ನಿತ್ಯ ಜೀವನದಲ್ಲಿ ಕಲಿಯಬೇಕಾದ್ದು ಬಹಳಷ್ಟಿದೆ. ಆ ಮೇರು ವ್ಯಕ್ಟಿತ್ವಕ್ಕೆ ಮಾತಿನ ಬದಲು ಮೌನವಾಗಿಯೇ ನಮನ ಸಲ್ಲಿಸಲು ಬಯಸುತ್ತೇನೆ ಎಂಬು ಚಿಟ್ಟಾಣಿಯವರ ಕುರಿತಾಗಿ ಚಲನಚಿತ್ರ ನಟರಾದ ನೀರ್ನಳ್ಳಿ ರಾಮಕೃಷ್ಣ ಹೆಗಡೆ ಅವರು ಹೇಳಿದರು.
ಹವ್ಯಕ ಮಹಾಸಭೆಯ ಯಕ್ಷಗಾನ - ಜಾನಪದ ಸಂಚಾಲಕರಾದ ಸದಾನಂದ ಹೆಗಡೆ, ವಿಜಯೀಂದ್ರ ಹೊಳ್ಳ, ಗೋಪಾಲಕೃಷ್ಣ ಹುಕ್ಲಮಕ್ಕಿ, ಜಿ ಎಸ್ ಕೋಡೆ ಚಿಟ್ಟಾಣಿಯವರಿಗೆ ನುಡಿನಮನ. ಡಾ. ಶ್ರೀಪಾದ ಹೆಗಡೆ ಕಾವ್ಯನಮನ ಸಲ್ಲಿಸಿದರೆ, ಭರತ ಕಡಬ ಚಿತ್ರನಮನ ಸಲ್ಲಿಸಿದರು.

ಯಕ್ಷಗಾನ ಕಲಾವಿದರು ಯಕ್ಷನೃತ್ಯ ಹಾಗೂ ಗಾನದ ಮೂಲಕ ನಮನ ಸಲ್ಲಿಸಿದರು. ಸಭೆ ಮೌನ ಹಾಗೂ ರಾಮತಾರಕದ ಜೊತೆ ಶಾಂತಿಮಂತ್ರ ಪಠಿಸಿ ಯಕ್ಷತಪಸ್ವಿಗೆ ನಮನ ಸಲ್ಲಿಸಲಾಯಿತು.
ಮಹಾಸಭೆಯ ಉಪಾಧ್ಯಕ್ಷರಾದ ಕೆಕ್ಕರು ಶ್ರೀಧರ್ ಭಟ್, ಗೌರವ ಕಾರ್ಯದರ್ಶಿಗಳಾದ ವೇಣು ವಿಘ್ನೇಶ್, ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್, ಶ್ರೀಧರ ಭಟ್ ಸಾಲೆಕೊಪ್ಪ ಕೋಶಾಧಿಕಾರಿಗಳಾದ ಪ್ರಕಾಶ್ ಕಲಸಿ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಹಾಗೂ ಚಿಟ್ಟಾಣಿ ಅಭಿಮಾನಿಗಳು ಉಪಸ್ಥಿತರಿದ್ದರು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications