Get Updates
Get notified of breaking news, exclusive insights, and must-see stories!

ಡಿಕೆ ಶಿವಕುಮಾರ್‌ ಹುಟ್ಟುಹಬ್ಬ: ಸಿಗಲಿದಿಯಾ ಸಿಹಿ ಸುದ್ದಿ? ಡಿಕೆಶಿ ಹೇಳಿದ್ದೇನು? ಡಿಕೆಶಿಗೆ ಬೆಂಬಲ ನೀಡಿದ ಶಾಸಕರ ಪಟ್ಟಿ ಇಲ್ಲಿದೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು ಇಂದು 62ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ನಿವಾಸದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಜಮಾಯಿಸಿದ್ದಾರೆ. ಮನೆಯಿಂದ ಹೊರಬರುತಿದ್ದಂತೆ ಅವರಿಗೆ ಸಿಹಿ ತಿನಿಸಿ ಹೂವಿನ ಹಾರ ಹಾಕುವ ಮೂಲಕ ಬೆಂಬಲಿಗರು ಶುಭ ಕೋರಿದ್ದಾರೆ.

ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಇಂದು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಖುಷಿ ಒಂದೆಡೆಯಾದರೆ, ಮತ್ತೊಂದರೆಡೆ ಹೈಕಮಾಂಡ್ ಇಂದು ಸಿಎಂ ಆಗಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಘೋಷಣೆ ಮಾಡಲಿ ಎನ್ನುವ ಆಸೆಯಲ್ಲಿ ಬೆಂಬಲಿಗರಿದ್ದಾರೆ. ಹೀಗಾಗಿ ಇಂದು ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಸಿಹಿ ಸುದ್ದಿ ಕೊಡುತ್ತಾ ಎನ್ನುವ ನಿರೀಕ್ಷೆಯಲ್ಲಿ ಬೆಂಬಲಿಗರು ಆಪ್ತರು ಕಾಯುತ್ತಿದ್ದಾರೆ.

Today is DK Shivakumars birthday

ಈಗಾಗಲೇ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರೇ ಸಿಎಂ ಎನ್ನುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಹಲವೆಡೆ ಬ್ಯಾನರ್ ಗಳನ್ನು ಹಾಕಿ ಅಭಿಮಾನಿಗಳ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ದಿನ ಸಂಜೆ ನಡೆದ ಶಾಸಕಾಂಗ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎನ್ನುವ ಇಂಗಿತವನ್ನು ಕೆಲ ಶಾಸಕರು ಹೊರಹಾಕಿದ್ದಾರೆ. ಹೈಕಮಾಂಡ್ ಮುಂದಿರುವ ಸಿಎಂ ರೇಸ್ ಪಟ್ಟಿಯಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಮುಂಚುಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹೈಕಮಾಂಡ್ ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಕೊಡುವ ನಿರ್ಧಾರ ಮಾಡಿದರೆ ಇಂದು ಡಿಕೆಶಿ ಅಭಿಮಾನಿಗಳಿಗೆ ಸಂತಸಕ್ಕೆ ಪಾರವೇ ಇರೋದಿಲ್ಲ.

ಸದ್ಯ ಡಿಕೆ ಶಿವಕುಮಾರ್ ಪಕ್ಷದ ಶಾಸಕರನ್ನು ಭೇಟಿ ಮಾಡಲು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ದೆಹಲಿ ಹೋಗಬೇಕು ಅನ್ನೋದು ಇದೆ. ಆದರೆ ನಾನು ಹೋಗುವುದಿಲ್ಲ. ಯಾಕೆಂದರೆ ಇವತ್ತು ನನ್ನ ಹುಟ್ಟಿದಹಬ್ಬ ಹೀಗಾಗಿ ಪೂಜೆ, ನಂಬಿಕೆ, ಅಜ್ಜರ ಭೇಟಿ ಎಲ್ಲವೂ ಇದೆ. ಅದನ್ನು ನಾನು ಮಾಡಲೇಬೇಕು. ಹೀಗಾಗಿ ಇಂದು ನಾನು ಎಲ್ಲಿಗೂ ಹೋಗುವುದಿಲ್ಲ' ಎಂದರು.

Today is DK Shivakumars birthday

'ಹೈಕಮಾಂಡ್ಗೆ ಸಿಎಂ ವಿಚಾರ ಬಿಟ್ಟಿದ್ದೇವೆ. ಶಾಸಕರೆಲ್ಲರೂ ಅಭಿಪ್ರಾಯ ಕೊಟ್ಟಿದ್ದಾರೆ. ರಾಜ್ಯದ ಜನತೆ ನನ್ನ ಮೇಲೆ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ದೆಹಲಿಗೆ ಹೋಗುತ್ತಿಲ್ಲ. ಹಲವಾರು ಪೂಜಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ನಾನು ಎಲ್ಲಿಗೂ ಹೋಗುತ್ತಿಲ್ಲ' ಎಂದರು.

Today is DK Shivakumars birthday

ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ನೀಡಿದ ಶಾಸಕರು:-

ಭಾನುವಾರ ನಡೆದ ಶಾಸಕಾಂಗ ಸಭೆಯಲ್ಲಿ ಹಲವಾರು ಶಾಸಕರು ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಒಲವು ತೋರಿದ್ದಾರೆ. 136 ನೂತನ ಶಾಸಕರ ಪೈಕಿ ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ನೀಡಿದ ಕೆಲ ಶಾಸಕ ಹೆಸರು ಇಂತಿದೆ. ಎಸಿ ಶ್ರೀನಿವಾಸ್ ಪುಲಕೇಶಿನಗರ, ಶರತ್‌ ಬಚ್ಚೇಗೌಡ ಹೊಸಕೋಟೆ, ಲಕ್ಷ್ಮಣ ಸವದಿ ಅಧಣಿ, ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ, ರಾಜು ಕಾಗೆ ಕಾಗವಾಡ, ಇಕ್ಬಾಲ್ ಹಸೇನ್ ರಾಮನಗರ, ಬಾಲಕೃಷ್ಣ ಮಾಗಡಿ, ಬಸವರಾಜ್ ಶಿವಂಗಾ ಚನ್ನಗಿರಿ, ದೇವೇಂದ್ರಪ್ಪ ಜಗಳೂರು, ಶಾಮತಗೌಡ ಹೊನ್ನಾಳಿ, ಪ್ರಕಾಶ್ ಕೋಳಿವಾರ ರಾಣೆಬೆನ್ನೂರು, ಮಂಕಾಳ ವೈದ್ಯ ಭಟ್ಕಳ, ರವೀಂದ್ರ ಪಪ್ಪಿ ಚಿತ್ರದುರ್ಗ, ರಂಗನಾಥ್ ಕುಣಿಗಲ್, ಎಸ್ ಆರ್ ಶ್ರೀನಿವಾಸ್ ಗುಬ್ಬಿ, ರವಿ ಗಣಿಗ ಮಂಡ್ಯ, ಉದಯ್ ಗೌಡ ಮದ್ದೂರು, ತಮ್ಮಯ್ಯ ಚಿಕ್ಕಮಗಳೂರು, ರಾಜೇಗೌಡ ಶೃಗೇರಿ, ಎನ್ ಶ್ರೀನಿವಾಸ್ ನೆಲಮಂಗಲ ಶಾಸಕರು ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಬೆಂಬಲ ಸೂಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+