ಮೆಡಿಕಲ್ ಶಾಪ್ ಗಳಲ್ಲಿ ಔಷಧಿ ಕೊರತೆ: ಏಕೆ? ಹೇಗೆ? ಏನು ಪರಿಹಾರ?
ಜಿಎಸ್ ಟಿ ಅಡಿಯಲ್ಲಿ ಔಷಧಗಳ ಮೇಲೆ ಬೀಳುವ ಕರಭಾರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಹಾಗಾಗಿ, ಔಷಧ ವಿತರಕರು ಗೊಂದಲದಲ್ಲಿದ್ದು, ಹೊಸ ಸ್ಟಾಕ್ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು, ರಾಜ್ಯದ ಔಷಧ ಮಳಿಗೆಗಳಲ್ಲಿ
ಬೆಂಗಳೂರು, ಜೂನ್ 26: ಮುಂದಿನ ತಿಂಗಳ 1ರಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ ಟಿ) ದೇಶದ ಔಷಧ ಮಾರಾಟ ವಲಯಕ್ಕೆ ಬಿಸಿ ಮುಟ್ಟಿಸಿದೆ.
ಇದರ ಪರಿಣಾಮವಾಗಿ, ರಾಜ್ಯದ ಔಷಧಿ ಅಂಗಡಿಗಳಲ್ಲಿ ಔಷಧಗಳ ಕೊರತೆ ಕಂಡು ಬಂದಿದ್ದು, ಜನರು ಔಷಧಿಗಳಿಗಾಗಿ ಪರದಾಡುವಂತಾಗಿದೆ.
ಮೂಲಗಳ ಪ್ರಕಾರ, ಈಗಿರುವ ಔಷಧಿಗಳಲ್ಲಿ ಶೇ. 50ರಷ್ಟು ಕೊರತೆ ಕಾಡಲಾರಂಭಿಸಿದೆ. ಇದರ ಪರಿಣಾಮವಾಗಿ, ವೈದ್ಯರು ತಮಗೆ ಬರೆದುಕೊಟ್ಟ ಔಷಧಿಗಳು ಸಿಗದೇ ಪರದಾಡುವಂತಾಗಿದೆ.
ಪರಿಸ್ಥಿತಿ ಹೀಗೇ ಮುಂದುವರಿಸಿದರೆ, ರಾಜ್ಯದಲ್ಲಿ ಔಷಧ ಕ್ಷೋಭೆ ತಲೆದೋರುವುದು ಖಚಿತವೆಂದು ಕೆಲ ಮೂಲಗಳು ತಿಳಿಸಿವೆ. ಆದರೆ, ಇದಕ್ಕೆಲ್ಲಾ ಕೇಂದ್ರ ಸರ್ಕಾರದ ಹೊಸ ಜಿಎಸ್ ಟಿಯೇ ಕಾರಣವಾಗಿರುವುದರಿಂದ ಕೇಂದ್ರವೇ ಈಗ ಮುಂದೆ ಬಂದು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ಕೇಂದ್ರ ಸರ್ಕಾರವೇ ಮೂಲ ಕಾರಣವೇ?
ಜಿಎಸ್ ಟಿಯಲ್ಲಿ ಯಾವ ಯಾವ ಔಷಧಿಗಳಿಗೆ ಏನೇನು ತೆರಿಗೆ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ಖಚಿತಪಡಿಸಿಲ್ಲದಿರುವುದೇ ಈ ಕೊರತೆಯ ಹಿಂದಿರುವ ಮೂಲ ಕಾರಣ.

ಬೇರೆಯ ಔಷಧಿಗಳಿಗೆ ಏಕೆ ದರ ನಿಗದಿಯಾಗಿಲ್ಲ
ಇನ್ಸುಲಿನ್ ಗೆ ಮಾತ್ರ ಶೇ. 5ರಷ್ಟು ತೆರಿಗೆ (ಜಿಎಸ್ ಟಿ ಅಡಿಯಲ್ಲಿ) ನಿಗದಿಗೊಳಿಸಿರುವ ಕೇಂದ್ರ ಸರ್ಕಾರ, ಯಾವ್ಯಾವ ಔಷಧಿಗಳಿಗೆ ಎಷ್ಟೆಷ್ಟು ತೆರಿಗೆ ಎಂಬುದನ್ನೂ ಇನ್ನೂ ಖಚಿತಗೊಳಿಸಿಲ್ಲ. ಇದು ಔಷಧಿಗಳ ಡಿಸ್ಟ್ರಿಬ್ಯೂಟರ್ ಗಳನ್ನು ಗೊಂದಲಕ್ಕೀಡು ಮಾಡಿದೆ. ಹಾಗಾಗಿ, ಇದು ಔಷಧ ಸರಬರಾಜು ಮೇಲೂ ಪರಿಣಾಮ ಬೀರಿದೆ.

ಸಿ ಆ್ಯಂಡ್ ಎಫ್ ಮೂಲಕೇ ಎಲ್ಲಾ ವ್ಯವಹಾರ
ಔಷಧ ತಯಾರಿಕಾ ಕಂಪನಿಗಳಲ್ಲಿ ಔಷಧಗಳು ತಯಾರಾಗಿ, ಅವು ಗ್ರಾಹಕರ ಕೈ ಸೇರುವ ನಡುವೆ ಮೂರು ಹಂತಗಳನ್ನು ಅವು ದಾಟಿ ಬರಬೇಕಿದೆ. ಔಷಧಿ ತಯಾರಿಸುವ ಕಂಪನಿಗಳು ನೇರವಾಗಿ ಮೆಡಿಕಲ್ ಶಾಪ್ ನವರಿಗೆ ಔಷಧ ಮಾರುವ ಹಾಗಿಲ್ಲ. ಹಾಗಾಗಿ, ಅವು ಸಿ ಆ್ಯಂಡ್ ಎಫ್ (carry and forward agents) ಎಂಬ ಪ್ರತ್ಯೇಕ ಸಂಸ್ಥೆಗಳ ಜತೆ ನಿಕಟ ನಂಟು ಹೊಂದಿರುತ್ತವೆ.

ಅಲ್ಲಿಂದ ಇಲ್ಲಿಗೆ ಸಾಗಿ ಬರಬೇಕು
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಈ ಸಿ ಆ್ಯಂಡ್ ಎಫ್ ಕಂಪನಿಗಳು, ಔಷಧ ತಯಾರಿಕಾ ಕಂಪನಿಗಳ ರಾಯಭಾರಿಗಳಿದ್ದಂತೆ. ಪ್ರತಿಯೊಂದು ಔಷಧ ಕಂಪನಿಯೂ ತನ್ನದೇ ಆದ ಸಿ ಆ್ಯಂಡ್ ಎಫ್ ಗಳನ್ನು ಹೊಂದಿರುವುದರಿಂದ ದೇಶದಲ್ಲಿ ನಾನಾ ರೀತಿಯ ಸಿ ಆ್ಯಂಡ್ ಎಫ್ ಸಂಸ್ಥೆಗಳಿವೆ. ಹೀಗೆ, ಸಿ ಆ್ಯಂಡ್ ಎಫ್ ಗಳಿಂದ ಔಷಧಿಗಳು ಡಿಸ್ಟ್ರಿಬ್ಯೂಟರ್ ಗಳ (ವಿತರಕರು) ಬಳಿಗೆ ಬರುತ್ತವೆ. ಅಲ್ಲಿಂದ ಇವು ಮೆಡಿಕಲ್ ಶಾಪ್ ಗಳನ್ನು ಸೇರುತ್ತವೆ. ಆನಂತರವೇ ಅವು ನಮ್ಮ ಕೈ ಸೇರುವುದು.

ಹಣ ಕಳೆದುಕೊಳ್ಳೋದು ಯಾರಿಗೆ ಬೇಕು ಸ್ವಾಮಿ?
ಇಲ್ಲಿರುವ ಅಸಲಿ ಸಮಸ್ಯೆಯೇನೆಂದರೆ, ಔಷಧ ಕಾರ್ಖಾನೆಗಳಲ್ಲಿ ಈಗಾಗಲೇ ತಯಾರಾಗಿರುವ ಔಷಧ ಸರಕುಗಳನ್ನು ಯಾವ ರೀತಿಯಲ್ಲಿ ಕೊಳ್ಳಬೇಕೆಂಬ ಗೊಂದಲದಲ್ಲಿ ವಿತರಕರು ಇದ್ದಾರೆ. ಅಂದರೆ, ಸದ್ಯಕ್ಕೆ ಈಗಿರುವ ತೆರಿಗೆ ಪದ್ಧತಿ ಪ್ರಕಾರ, ಔಷಧಿಗಳ ಮೇಲೆ ಶೇ. 5.3ರಷ್ಟು ತೆರಿಗೆಯನ್ನು ಡಿಸ್ಟ್ರಿಬ್ಯೂಟರ್ ಗಳು ಕಟ್ಟಬೇಕಿದೆ. ಈ ತೆರಿಗೆಯ ಆಧಾರದಲ್ಲೇ ಸಿ ಆ್ಯಂಡ್ ಎಫ್ ಗಳ ಕಡೆಯಿಂದ ಔಷಧಿ ಕೊಂಡುಕೊಳ್ಳುತ್ತಾರೆ ಎಂದಿಟ್ಟುಕೊಳ್ಳೋಣ. ಜುಲೈ 1ರಿಂದ ಜಾರಿಗೊಳ್ಳುವ ಈ ಜಿಎಸ್ ಟಿ ಅನ್ವಯ ಔಷಧ ವಿತರಕರ ಮೇಲೆ ಶೇ. 8 ಅಥವಾ ಅದಕ್ಕಿಂತ ಹೆಚ್ಚು (ಉದಾಹರಣೆಗೆ ಮಾತ್ರ) ತೆರಿಗೆ ಬಿತ್ತೆಂದರೆ, ಡಿಸ್ಟ್ರಿಬ್ಯೂಟರ್ ಗಳು ಲಕ್ಷಾಂತರ ರು.ಗಳಷ್ಟು ಹಣ ಕಳೆದುಕೊಳ್ಳುತ್ತಾರೆ.

ಹಾಗಾಗಿಯೇ ತೊಂದರೆ
ಹಳೆ ತೆರಿಗೆ ದರದಲ್ಲಿ ಔಷಧಿ ಕೊಂಡು, ಜಿಎಸ್ ಟಿ ಅಡಿಯಲ್ಲಿ ದುಬಾರಿ ತೆರಿಗೆ ಕಟ್ಟುವ ಪ್ರಮೇಯಕ್ಕೆ ಸಿಲುಕುತ್ತಾರೆ. ಹಾಗಾಗಿಯೇ, ಸದ್ಯದ ಮಟ್ಟಿಗೆ ಯಾವುದೇ ಸಿ ಆ್ಯಂಡ್ ಎಫ್ ಕಡೆಯಿಂದ ಔಷಧಿ ಕೊಳ್ಳುವ ಉಸಾಬರಿಯೇ ಬೇಡೆಂದು ಅವರು ಕೈ ಕಟ್ಟಿ ಕುಳಿತಿದ್ದಾರೆ. ಹಾಗಾಗಿಯೇ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ.

ಮೆಡಿಕಲ್ ಶಾಪ್ ಗಳಿಗೂ ಕ್ಲಿಯರೆನ್ಸ್ ಗೆ ಸೂಚನೆ
ಇದಕ್ಕೆ ಪರಿಹಾರವೇನೆಂದರೆ, ಜಿಎಸ್ ಟಿ ಜಾರಿಗೆ ಬರುವ ಮುನ್ನ ಆದಷ್ಟು ಹಳೆಯ ಸ್ಟಾಕ್ ಗಳನ್ನು ಮಾರಾಟ ಮಾಡಲು ಡಿಸ್ಟ್ರಿಬ್ಯೂಟರ್ ಗಳು ನಿರ್ಧರಿಸಿದ್ದು, ಎಲ್ಲಾ ಮೆಡಿಕಲ್ ಶಾಪ್ ಗಳಿಗೂ ಅದೇ ರೀತಿ ತಾಕೀತು ಮಾಡಿದ್ದಾರೆ. ಜಿಎಸ್ ಟಿ ಜಾರಿಯಾದರೂ ಹಳೆಯ ಸ್ಟಾಕ್ ಇದ್ದರೂ ಅದನ್ನು ಸಂಪೂರ್ಣವಾಗಿ ಖಾಲಿ ಮಾಡಲು ಇನ್ನೂ ಎರಡು ತಿಂಗಳು ಕಾಲಾವಕಾಶವಿದೆ. ಹಾಗಾಗಿ, ಈಗಿರುವ ಸ್ಟಾಕ್ ಕ್ಲಿಯರೆನ್ಸ್ ಗೆ ಸೂಚಿಸಲಾಗಿದೆ. ಹಾಗಾಗಿಯೇ ಔಷಧಿಗಳ ಹೊಸ ಸ್ಟಾಕ್ ಬರುತ್ತಿಲ್ಲ.

ಇಲ್ಲೊಂದಿದೆ ಉಚಿತ ಸಲಹೆ!
ಈಗ ನಿಜಕ್ಕೂ ತೊಂದರೆಗೆ ಸಿಲುಕಿರುವುದು ಗ್ರಾಹಕರೇ. ಹಾಗಾಗಿ, ಯಾವ ಯಾವ ಮೆಡಿಕಲ್ ಶಾಪ್ ಗಳಲ್ಲಿ ಗ್ರಾಹಕರಿಗೆ ಬೇಕಾದ ಏನು ಔಷಧಿ ಸಿಗುತ್ತದೆಯೋ ಅದನ್ನು ಹಿಂದು ಮುಂದು ನೋಡದೇ ಖರೀದಿಸಬೇಕಷ್ಟೇ ಎನ್ನುತ್ತಾರೆ ಔಷಧ ಮಳಿಗೆಗಳವರು.

ಸಿಗಲಾರದ್ದರ ಬಗ್ಗೆ ಇನ್ನೊಂದೆಡೆ ಹುಡುಕಿ
ಉದಾಹರಣೆಗೆ, ಒಬ್ಬ ರೋಗಿಗೆ ವೈದ್ಯರು ಎರಡು- ಮೂರು ರೀತಿಯ ಗುಳಿಗೆ, ಒಂದು ಟಾನಿಕ್ ಬಾಟಲಿ ಬರೆದಿದ್ದಾರೆಂದಿಟ್ಟುಕೊಳ್ಳೋಣ. ಆ ರೋಗಿ ಅಥವಾ ಆತನ ಕಡೆಯವರು ಮೆಡಿಕಲ್ ಶಾಪ್ ಗೆ ಬಂದಾಗ ಗುಳಿಗೆಗಳು ಮಾತ್ರ ಇವೆ. ಟಾನಿಕ್ ಇಲ್ಲ ಎಂದು ಅಂಗಡಿಯವರು ಹೇಳಿದರೆ, ಎಲ್ಲಾ ಒಂದೇ ಕಡೆ ಲಭ್ಯವಿರುವ ಕಡೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳುವ ಬದಲು, ಗುಳಿಗೆಗಳನ್ನು ಅಲ್ಲಿ ಕೊಂಡುಕೊಳ್ಳಬೇಕು. ಟಾನಿಕ್ ಗಳನ್ನು ಮತ್ತೊಂದೆಡೆ ಪಡೆಯಬೇಕು. ಏಕೆಂದರೆ, ಒಂದೇ ಕಡೆ ಎಲ್ಲಾ ಔಷಧಿ ಸಿಗುವ ಪರಿಸ್ಥಿತಿ ಸದ್ಯಕ್ಕಂತೂ ಇಲ್ಲ ಎನ್ನುತ್ತಾರೆ ಔಷಧಿ ಅಂಗಡಿಗಳವರು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications