ಕುವೆಂಪು ಅವಹೇಳನ ಮಾಡಿದರೆ ಶಿಕ್ಷಾರ್ಹ ಅಪರಾಧ ಆಗುತ್ತೆ: ಹನುಮಂತರಾಯ
ಬೆಂಗಳೂರು, ಜೂ. 3: ಮಹಾಕವಿ ಕುವೆಂಪು, ನಾರಾಯಣಗುರು, ಬಸವಣ್ಣ ಅವರು ಕನ್ನಡಿಗರ ದೃಷ್ಟಿಯಲ್ಲಿ ದೈವಾಂಶ ಸಂಭೂತರು. ಅವರ ಬಗ್ಗೆ ಅವಹೇಳನ ಮಾಡುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 505 ಪ್ರಕಾರ ಸಾರ್ವಜನಿಕ ಕಿಡಿಗೇಡಿತನ ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಅವರ ಹೋರಾಟ ಸಮಿತಿ ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಒಂದು ವಾರದಿಂದ ಕಾನೂನು ಅಧ್ಯಯನ ಮಾಡಿದ್ದೇನೆ. ನನ್ನಾ ಎಲ್ಲಾ ಕೆಲಸಗಳನ್ನು ಬಿದಿಗಿಟ್ಟು ಕುವೆಂಪು ಅವರನ್ನು ಅವಹೇಳನ ಹಾಗೂ ಪಠ್ಯ ಪುಸ್ತಕದ ಸುತ್ತ ಮುತ್ತ ನಡೆಯುತ್ತಿರುವ ಬೆಳವಣಿಗಳನ್ನು ಗಮನಿಸಿ ಕಾನೂನು ದುಷ್ಠಿಕೋನದಲ್ಲಿ ಅಧ್ಯಯನ ನಡೆಸಿದ್ದೇನೆ. ಒಂದು ಸಮುದಾಯಕ್ಕೆ ಒಬ್ಬ ವ್ಯಕ್ತಿ ದೈವಾಂಶ ಸಂಭೂತ ಎನಿಸಿದರೆ, ಅವರನ್ನು ಒಂದು ಸಮುದಾಯ ಸರ್ವಸೇಷ್ಠ ಎಂಬ ನಂಬಿಕೆ ಇಟ್ಟುಕೊಂಡಿದ್ದರೆ, ಅಂತಹ ವ್ಯಕ್ತಿಯ ಬಗ್ಗೆ ಅವಾಚ್ಯ ಪದ ಬಳಿಸುವುದು ಐಪಿಸಿ ಸೆಕ್ಷನ್ 505 ಅಡಿ ಸಾರ್ವಜನಿಕ ಕಿಡಿಗೇಡಿತನ. ಆ ಕೃತ್ಯ ಎಸಗಿದವರು ನೋಡಲಿಕ್ಕೆ ಕಿಡಿಗೇಡಿಗಳು ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯಪ್ಪ ಹೇಳಿದ್ದಾರೆ.

ಯಾರೇ ಆಗಲಿರಿ, ದೈವಾಂಶ ಸಂಭೂತ ಎನಿಸಿದರೆ, ಆ ಸ್ಥಾನ ಗಳಿಸಿದ್ದರೆ, ಅವರ ಬಗ್ಗೆ ಯಾವುದೇ ಹೇಳಿಕೆ ನೀಡುವುದು, ವದಂತಿ ಹಬ್ಬಿಸುವುದು, ಪ್ರಚೋದನೆ ಕೊಡುವಂತಹ ವರದಿ ಮಾಡುವುದು, ವರದಿ ಪ್ರಸಾರ ಮಾಡುವುದು, ಪ್ರಚೋದಿಸುವ ಉದ್ದೇಶದಿಂದ ಹೇಳಿಕೆ ಕೊಡುವುದು ಕೂಡ ಕಾನೂನು ಅಡಿ ತಪ್ಪಾಗುತ್ತದೆ ಎಂದು ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ಕುವೆಂಪು ಅವರಿಗೆ ಎಸಗಿರುವ ಅವಮಾನ ಸಾರ್ವಜನಿಕ ಕಿಡಿಗೇಡಿತನ ಎಂದು ನುಡಿದರು.

ಎಸ್.ಎಲ್. ಭೈರಪ್ಪ ಅವರ ಮಾತುಗಳು ಕೇಳಿ ಗಾಬರಿ ಆಗುತ್ತದೆ. ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಬಗ್ಗೆ ಉಲ್ಲೇಖಿಸಿ, ಶಿಕ್ಷಣ ಸಚಿವರನ್ನೇ ಮುಗಿಸಿ ಬಿಡುತ್ತಿದ್ದರು ಎಂಬ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಪಮಾನ ಮಾಡಿದವರನ್ನು ಸರ್ಕಾರ ರಕ್ಷಣೆ ನಿಂತರೆ, ಅಪಮಾನ ಮಾಡುವರನ್ನು ಉತ್ಸವ ಮೂರ್ತಿಗಳನ್ನು ಮಾಡುವ ಕೀಳು ಮಟ್ಟಕ್ಕೆ ಇಳಿಯವುದು ತೀರಾ ಅಪಾಯಕಾರಿ ಬೆಳವಣಿಗೆ ಎಂದು ಸಿ.ಎಚ್. ಹನುಮಂತರಾಯಪ್ಪ ಅಭಿಪ್ರಾಯಪಟ್ಟರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications