ಲೋಕಾಯುಕ್ತ ದಾಳಿ ಬಳಿಕ ತಹಶೀಲ್ದಾರ್ ಅಜಿತ್ ರೈ ಅಮಾನತು: ಆತನ ಆಸ್ತಿ ಮೌಲ್ಯದ ಬಗೆಗಿನ ಪ್ರತಿ ವಿವರ ತಿಳಿಯಿರಿ
ಬೆಂಗಳೂರು, ಜೂನ್ 01: ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕುಬಿದ್ದಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ಕರ್ನಾಟಕ ಸರ್ಕಾರ ಕೆಲಸದಿಂದ ಅಮಾನತು ಮಾಡಿದೆ. ಅವರ ಅಮಾನಿತಿಗೆ ಲೋಕಾಯುಕ್ತ ಪೊಲೀಸರು ಶಿಪಾರಸ್ಸು ಮಾಡಿದ್ದರು. ಲೋಕಾಯುಕ್ತರು ಶನಿವಾರ ನಡೆಸಿದ ದಾಳಿಯಲ್ಲಿ ನೂರಾರು ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ರೈ ಅವರನ್ನು ಸೇವೆಯಿಂದ ಅಮಾನತುಗೊಳಲಾಗಿದೆ ಎಂದು ಸರ್ಕಾರ ಹೇಳಿದೆ.
ಹುದ್ದೆಗಾಗಿ ಕಾಯುತ್ತಿದ್ದ ಗ್ರೇಡ್-2 ತಹಶೀಲ್ದಾರ್ ಅಜಿತ್ ರೈ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಲೋಕಾಯುಕ್ತರು ಜೂನ್ 28 ರಂದು ಅಜಿತ್ ಅವರ ಆಸ್ತಿಗಳ ಮೇಲೆ ದಾಳಿ ನಡೆಸಿ 40 ಲಕ್ಷ ರೂಪಾಯಿ ನಗದು ಮತ್ತು ನೂರಾರು ಕೋಟಿ ರೂಪಾಯಿ ಮೌಲ್ಯದ ಭೂ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.

ದಾಳಿಯ ನಂತರ ಲೋಕಾಯುಕ್ತ ಪೊಲೀಸರು ಅಜಿತ್ ರೈ ಅವರನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬೆಂಗಳೂರು ನ್ಯಾಯಾಲಯ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಕಾರುಗಳ ಕ್ರೇಜ್ ಹೊಂದಿದ್ದ ಅಜಿತ್ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಕುತೂಹಲಕಾರಿಯಾಗಿ, ಅವರ ಎಲ್ಲಾ ವಾಹನಗಳು 1368 ನೋಂದಣಿ ಸಂಖ್ಯೆಗಳನ್ನು ಹೊಂದಿದ್ದಾರೆ.
ಟಿವಿ 9 ಕನ್ನಡದ ಪ್ರಕಾರ, ಅಜಿತ್ ರೈ ಅವರು ದೊಡ್ಡಬಳ್ಳಾಪುರದ ಬಳಿ ಫಾರ್ಮುಲಾ 1 ರೇಸಿಂಗ್ ಟ್ರ್ಯಾಕ್ ಅನ್ನು ಸ್ಥಾಪಿಸಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತದ ಹಲವಾರು ಟ್ರ್ಯಾಕ್ಗಳಿಗೆ ಭೇಟಿ ನೀಡಿದರು.
ದಾಳಿ ವೇಳೆ ಲೋಕಾಯುಕ್ತರು ಹಲವರ ಹೆಸರಿನಲ್ಲಿ 100 ಎಕರೆಗೂ ಹೆಚ್ಚು ಜಮೀನಿನ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.
ವರದಿಗಳ ಪ್ರಕಾರ, ಅಜಿತ್ ರೈ 500 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಲೋಕಾಯುಕ್ತ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದು, ಮುಂದಿನ ತನಿಖೆಗಾಗಿ ಹುಟ್ಟೂರು ಪುತ್ತೂರಿಗೆ ಕರೆದುಕೊಂಡು ಹೋಗಲಿದ್ದಾರೆ.












Click it and Unblock the Notifications