ಚೇರ್ಕಾರ್ ಪ್ರಯಾಣ ಉತ್ತೇಜನಕ್ಕೆ ನೈಋತ್ಯ ರೈಲ್ವೆ ಕ್ರಮ: ದರವೂ ಕಡಿತ
ಬೆಂಗಳೂರು, ಆಗಸ್ಟ್ 11: ನೈಋತ್ಯ ರೈಲ್ವೆಯು ಚೇರ್ಕಾರ್ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಎಸಿ-3 ಟಯರ್ನಿಂದ ಎಸಿ ಚೇರ್ ಕಾರ್ಗಳಾಗಿ ಪರಿವರ್ತಿಸಿ ಪಿಆರ್ಎಸ್ ದರ ಕಡಿಮೆ ಗೊಳಿಸಲು ನಿರ್ಧರಿಸಿದೆ.
ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಸಿ-3 ಟಯರ್ನಿಂದ ಎಸಿ ಚೇರ್ ಕಾರ್ಗಳಾಗಿ ಪರವರ್ತಿಸಿ ಪಿಆರ್ಎಸ್ ದರ ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ರೈಲಿನ ಸಂಖ್ಯೆ 165440 ಎರಡು ಬೋಗಿಗಳನ್ನು 3 ಎಸಿ ಯಿಂದ ಎಸಿ ಚೇರ್ ಕಾರ್ಗಳಾಗಿ ಬದಲಾಯಿಸಲಾಗಿದೆ.
ಅಲ್ಲದೆ, ಪ್ರಯಾಣ ದರವನ್ನು ಆ.4ರಿಂದ 735 ರೂ,ನಿಂದ 590 ರೂ.ಗೆ ಇಳಿಸಿದೆ. ಅದರಂತೆ ಗದಗ-ಸೊಲ್ಲಾಪುರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಎಕ್ಸ್ಪ್ರೆಸ್ ರೈಲಿನ ಸಂಖ್ಯೆ 11140 ಒಂದು ಬೋಗಿಯನ್ನು ಎಸಿ ಕಾರ್ಚೇರ್ ಆಗಿ ಬದಲಿಸಿ, ಪ್ರಯಾಣದರವನ್ನು 495ರಿಂದ 435ರೂ.ಗೆ ಇಳಿಸಿದೆ. ಅದು ಆಗಸ್ಟ್ 28ರಿಂದ ಜಾರಿಗೆ ಬರಲಿದೆ.

ಮೈಸೂರು-ಬೆಂಗಳೂರು ನಡುವಿನ ಮೈಸೂರು-ಸಾಯಿನಗರ ಶಿರಡಿ ವೀಕ್ಲಿ ಎಕ್ಸ್ಪ್ರೆಸ್ ರೈಲಿನ ಸಂಖ್ಯೆ 16217 ಒಂದು ಬೋಗಿಯನ್ನು ಎಸಿ ಚೇರ್ಕಾರ್ಗೆ ಬದಲಿಸಿ ಪ್ರಯಾಣದರವನ್ನು 495ರಿಂದ 260 ರೂಗಳಿಗೆ ಇಳಿಸಿದೆ. ಅದು ಡಿಸೆಂಬರ್ 3ರಿಂದ ಅನುಷ್ಠಾನಕ್ಕೆ ಬರಲಿದೆ.
ಯಶವಂತಪುರ-ಹಬ್ಬಳ್ಳಿ ಬಿಕಾನೇರ್ ಎಕ್ಸ್ಪ್ರೆಸ್ನ ಸಂಖ್ಯೆ 16587 ಒಂದು ಬೋಗಿಯನ್ನು ಬದಲಾಯಿಸಿ ದರವನ್ನು 735ರಿಂದ 590ರೂ.ಗೆ ಇಳಿಸಿದೆ. ಅದು ನವೆಂಬರ್ 30ರಿಂದ ಪ್ರಾರಂಭಗೊಳ್ಳಲಿದೆ. ಯಶವಂತಪುರ-ಧರ್ಮಾವರಂ ಸಿಕಂದರಾಬಾದ್ ಎಕ್ಸ್ಪ್ರೆಸ್ನ ಸಂಖ್ಯೆ 12736 ಒಂದು ಬೋಗಿಯನ್ನು ಬದಲಿಸಿ 345ರಿಂದ 305ಕ್ಕೆ ಸರ ಇಳಿಸಲಾಗಿದ್ದು ನವೆಂಬರ್ 22ರಿಂದ ಚಾಲನೆಗೆ ಬರಲಿದೆ.
-
ಹುಬ್ಬಳ್ಳಿ-ಗದಗ ಮಧ್ಯೆ ತಡೆರಹಿತ 'ರಾಜಹಂಸ' ಬಸ್ ಸೇವೆ ಆರಂಭ, ಟಿಕೆಟ್ ದರವೆಷ್ಟು-ವೇಳಾಪಟ್ಟಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ











Click it and Unblock the Notifications