ಶ್ರೀ ಕೃಷ್ಣನ ಪರೀಕ್ಷೆ: ಧರ್ಮರಾಯನ ಗುಣಗಳಿಂದ ಕಲಿಯುವ ಜೀವನ ಪಾಠ: ವಿಶ್ವನಾಥ್ ಬಿ ಬರಹ
ಮಾನವನ ದೃಷ್ಟಿಕೋನವೇ ಅವನ ಜಗತ್ತನ್ನು ರೂಪಿಸುತ್ತದೆ ಎಂಬುದನ್ನು ಮಹಾಭಾರತದ ಈ ಪ್ರಸಂಗವು ಸರಳವಾಗಿ ಹೇಳುತ್ತದೆ. ಶ್ರೀ ಕೃಷ್ಣನು ಮಾಡಿದ ಸಣ್ಣ ಪರೀಕ್ಷೆಯ ಮೂಲಕ ದುರ್ಯೋಧನ ಮತ್ತು ಧರ್ಮರಾಯನ ಮನಸ್ಥಿತಿಯ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಒಬ್ಬನು ಜಗತ್ತಿನಲ್ಲೆಲ್ಲ ಕೆಡುಕನ್ನು ಕಂಡರೆ, ಮತ್ತೊಬ್ಬನು ಪ್ರತಿಯೊಬ್ಬರಲ್ಲೂ ಒಳ್ಳೆಯತನವನ್ನು ಕಾಣುತ್ತಾನೆ. ಈ ಕಥೆ ನಮ್ಮ ಮನಸ್ಸಿನ ಶುದ್ಧತೆ ಮತ್ತು ದೃಷ್ಟಿಯ ಮಹತ್ವವನ್ನು ತಿಳಿಸುತ್ತದೆ.(ಬರಹ: ವಿಶ್ವನಾಥ್ ಬಿ.)
ಶ್ರೀ ಕೃಷ್ಣನು ದುರ್ಯೋಧನ ಹಾಗೂ ಧರ್ಮರಾಯನ್ನು ಒಮ್ಮೆ ಪರೀಕ್ಷಿಸಲು ನಿರ್ಧರಿಸಿದ. ಇಬ್ಬರೂ ಒಂದೊಂದು ಟಾಸ್ಕ್ ಕೊಟ್ಟ. ಈ ಜಗತ್ತಿನಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಹುಡುಕಿಕೊಂಡು ಬಾ ಅಂತ ದುರ್ಯೋಧನನಿಗೆ ಹೇಳಿದ. ಅದರಂತೆ, ಈ ಜಗತ್ತಿನಲ್ಲಿ ಒಬ್ಬ ಕೆಟ್ಟ ವ್ಯಕ್ತಿಯನ್ನು ಹುಡುಕಿ ಬಾ ಎಂದು ಧರ್ಮರಾಯನಿಗೆ ಹೇಳಿದ.

ಇಬ್ಬರೂ ಅಲ್ಲಿಂದ ಹೊರಟರು. ತಮಗೆ ನೀಡಿದ ಟಾಸ್ಕ್ ಮುಗಿಸಿಕೊಂಡು ಬಂದು ತಾವು ಕಂಡಿದ್ದನ್ನು ಹೇಳಲು ಮುಂದೆ ಬಂದರು. ಮೊದಲಿಗೆ ದುರ್ಯೋದನನ ಸರದಿ. ಪ್ರಭು ನನಗೆ ಯಾರೂ ಒಳ್ಳೆಯವರು ಕಾಣಲಿಲ್ಲ. ಎಲ್ಲರೂ ಕೆಟ್ಟವರೇ. ಈ ಜಗತ್ತೇ ಕೆಟ್ಟತನದಿಂದ ತುಂಬಿದೆ ಎಂದ. ಅವನು ಎಲ್ಲ ಕಡೆಗೆ ಹುಡುಕಿದರೂ ಒಬ್ಬರೂ ಒಳ್ಳೆಯವರು ಕಾಣಿಸಿರಲಿಲ್ಲ.
ಮುಂದಿನ ಸರದಿ ಧರ್ಮರಾಯನದು. ಕೃಷ್ಣಾ, ಪ್ರತಿಯೊಬ್ಬರಲ್ಲೂ ಯಾವುದೇ ಒಂದು ಒಳ್ಳೆಯ ಗುಣವಿದೆ. ಹೀಗಾಗಿ ನನಗೆ ಯಾರೂ ಸಹ ಕೆಟ್ಟವರಾಗಿ ಕಾಣಿಸಲಿಲ್ಲ ಎಂದನು. ಎಲ್ಲ ಹುಡುಕಿದರೂ ಧರ್ಮರಾಯನಿಗೆ ಒಬ್ಬರೂ ಕೆಟ್ಟವರು ಕಾಣಿಸಲಿಲ್ಲ.

ಶ್ರೀ ಕೃಷ್ಣ ಮುಗುಳುನಗೆ ನಕ್ಕು ಸುಮ್ಮನಾಗುತ್ತಾನೆ.
ಇದರ ತಾತ್ಪರ್ಯವನ್ನು ಈಗಾಗಲೇ ಅನೇಕ ಸಂತರು, ಜ್ಞಾನಿಗಳು ವಿವರಿಸಿದ್ದಾರೆ.
ದುರ್ಯೋಧನನ ಮನಸ್ಸು ದೋಷಗಳಿಂದ ತುಂಬಿತ್ತು. ಹೀಗಾಗಿ ಆತನಿಗೆ ಎಲ್ಲರಲ್ಲೂ ದೋಷಗಳೇ ಕಾಣಿಸಿತು. ಯಾರೂ ಸಹ ಒಳ್ಳೆಯವರು ಕಾಣಿಸಲೇ ಇಲ್ಲ.
ಧರ್ಮರಾಯನ ಮನಸ್ಸು ಸದ್ಗುಣಗಳಿಂದ ತುಂಬಿತ್ತು. ಹೀಗಾಗಿ ಆತನಿಗೆ ಎಲ್ಲರಲ್ಲೂ ಒಳ್ಳೆಯ ಗುಣಗಳೇ ಕಾಣಿಸಿದವು. ಎಲ್ಲರೂ ಒಳ್ಳೆಯವರೇ ಅನಿಸಿದರು.
ನಾವು ಹೇಗಿದ್ದೇವೆಯೋ ಹಾಗೆಯೇ ನಮಗೆ ಜಗತ್ತು ಕಾಣಿಸುತ್ತದೆ. ನಮ್ಮ ಮನಸ್ಸೇ ನಮ್ಮ ಜಗತ್ತನ್ನು ರೂಪಿಸುವುದು. ಇದನ್ನು ಮನಃಶಾಸ್ತ್ರವೂ ಸಹ ಒಪ್ಪಿದೆ.
ನಮ್ಮ ಕಣ್ಣಿಗೆ ಎಲ್ಲರೂ ಕೆಟ್ವವರಾಗಿ ಕಂಡರೆ, ಅದು ಅವರ ತಪ್ಪಲ್ಲ. ನಮ್ಮೊಳಗಿನ ಅಂತಃಕರಣ ಶುದ್ದವಾಗಿಲ್ಲ ಎಂದರ್ಥ. ಮನಸ್ಸಿನ ಶುದ್ದೀಕರಣವೇ ಎಲ್ಲದಕೂ ಪರಿಹಾರ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications