SWR: ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಗುಂತಕಲ್ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ
ಬೆಂಗಳೂರು, ನವೆಂಬರ್ 06: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ನೈಋತ್ಯ ರೈಲ್ವೆ ಇಲಾಖೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆ ಆರಂಭಿಸಿದೆ. ಈ ರೈಲುಗಳು ಭಕ್ತರಿಗೆ ಅನುಕೂಲವಾಗುವಂತೆ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಗುಂಟಕಲ್ ಮತ್ತು ಗುಂಟಕಲ್ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸೆಂಟ್ರಲ್ ಮಾರ್ಗಗಳಲ್ಲಿ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿವೆ. ಈ ರೈಲುಗಳ ಸಂಚಾರ ದಿನಾಂಕ, ಸಮಯ, ವೇಳಾಪಟ್ಟಿ ಇಲ್ಲಿದೆ.
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಗುಂಟಕಲ್ ವಿಶೇಷ ಎಕ್ಸ್ಪ್ರೆಸ್ ರೈಲು (06091) ಇದೇ ತಿಂಗಳ ನವೆಂಬರ್ 19 ಮತ್ತು 21ರಂದು ರಾತ್ರಿ 11.50ಕ್ಕೆ (ಶುಕ್ರವಾರ ಮತ್ತು ಶನಿವಾರ) ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸಂಚಾರ ಆರಂಭಿಸುತ್ತದೆ. ಮುಂದಿನ ದಿನ ಮಧ್ಯಾಹ್ನ 2.15ಕ್ಕೆ (ಶನಿ ಮತ್ತು ಭಾನುವಾರ) ಗಮ್ಯಸ್ಥಾನ ಗುಂತಕಲ್-ಡಾ ತಲುಪುತ್ತದೆ. ತಲುಪಲಿದೆ.

ಗುಂತಕಲ್-ಡಾ. ಎಂಜಿಆರ್ ಚೇನ್ನೈ ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು (06092) ನವೆಂಬರ್ 20 ಮತ್ತು 22ರಂದು ಸಂಜೆ 5.30ಕ್ಕೆ (ಶನಿವಾರ ಮತ್ತು ಸೋಮವಾರ) ಗುಂತಕಲ್ನಿಂದ ಹೊಡುತ್ತದೆ. ಮರುದಿನ ದಿನ ಬೆಳಗ್ಗೆ 9.45ಕ್ಕೆ (ಭಾನುವಾರ ಮತ್ತು ಮಂಗಳವಾರ) ಡಾ. ಎಂಜಿಆರ್ ಚೇನ್ನೈ ಸೆಂಟ್ರಲ್ ನಿಲ್ದಾಣಕ್ಕೆ ಬಂದು ಸೇರುತ್ತದೆ. ಈ ರೈಲುಗಳಲ್ಲಿ ಎಸಿ ಕೋಚ್, ನಾನ್ ಎಸಿ, ಆರ್ಎಸಿ, ಜನರಲ್ ಬೋಗಿ ಸೇರಿದಂತೆ ಅಗತ್ಯ ಬೋಗಿಗಳನ್ನು ಹೊಂದಿದೆ.
ಪ್ರಯಾಣಿಕರ ಗಮನಿಸಿ ಸಂಚರಿಸಿ
ಈ ವಿಶೇಷ ರೈಲುಗಳು ವಿಜಯಪುರ, ಸೊಲಾಪುರ, ಕಲಬುರ್ಗಿ, ವಾಡಿ, ಯಾದಗಿರಿ, ರಾಯಚೂರು, ಗುಂತಕಲ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಪ್ರಯಾಣಿಕರು ತಮ್ಮ ಟಿಕೆಟ್ಗಳನ್ನು ಅಧಿಕೃತ ವೆಬ್ಸೈಟ್ www.enquiry.indianrail.gov.in ಮೂಲಕ ಅಥವಾ NTES ಆಪ್ ಮೂಲಕ ಬುಕ್ ಮಾಡಬಹುದು. ಐಆರ್ಸಿಟಿ ಮತ್ತು ಒನ್ ರೈಲ್ ಆಫ್ ಸಹ ಬಳಸಬಹುದು. ರೈಲ್ವೆ ಸಹಾಯವಾಣಿ ಸಂಖ್ಯೆ 139 ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಈ ರೈಲುಗಳು ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಈ ರೈಲು ಮಾರ್ಗದ ಅಕ್ಕಪಕ್ಕದ ಪ್ರದೇಶಗಳ ಪ್ರಯಾಣಿಕರಿಗೆ ಅತ್ಯಂತ ಸಹಾಯಕವಾಗಲಿದೆ. ರೈಲು ಸೇವೆಗಳ ಕುರಿತು ಯಾವುದೇ ಬದಲಾವಣೆಗಳಿದ್ದರೆ ಅದನ್ನು ಅಧಿಕೃತ ಮೂಲಗಳ ಮೂಲಕ ಪ್ರಯಾಣಿಕರಿಗೆ ತಿಳಿಸಲಾಗುತ್ತದೆ ಎಂದು ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications