ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ದಿನದಲ್ಲಿ 15 ಗಂಟೆ ಅಷ್ಟೆ ನಡೆದಿರುವ ಸದನ: ಸ್ಪೀಕರ್ ಬೇಸರ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಈ ಬಾರಿ ಬಜೆಟ್ ಅಧಿವೇಶನವು ಕೇವಲ ಗೊಂದಲ, ಗದ್ದಲಗಳಲ್ಲಿಯೇ ಕಳೆದು ಹೋಗುತ್ತಿರುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಶಾಸಕ ಪ್ರೀತಂಗೌಡಗೆ ಭದ್ರತೆ ನೀಡಲು ರಮೇಶ್ ಕುಮಾರ್ ಸೂಚನೆ ಶಾಸಕ ಪ್ರೀತಂಗೌಡಗೆ ಭದ್ರತೆ ನೀಡಲು ರಮೇಶ್ ಕುಮಾರ್ ಸೂಚನೆ

ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, 'ಸದನದಲ್ಲಿ ಈ ರೀತಿಯ ಗದ್ದಲದ ವಾತಾವರಣ ನಿರ್ಮಾಣ ಆಗಿರುವುದು ಕಂಡರೆ ನನ್ನ ಹೃದಯ ಕಿತ್ತು ಬರುತ್ತದೆ' ಎಂದು ರಮೇಶ್ ಕುಮಾರ್ ನೊಂದುಕೊಂಡರು.

ರಮೇಶ್ ಕುಮಾರ್ ಅತ್ಯಾಚಾರ ಸಂತ್ರಸ್ತೆ ಹೋಲಿಕೆಗೆ ಖಂಡನೆ ರಮೇಶ್ ಕುಮಾರ್ ಅತ್ಯಾಚಾರ ಸಂತ್ರಸ್ತೆ ಹೋಲಿಕೆಗೆ ಖಂಡನೆ

ಸದನದಲ್ಲಿ ಇಂದು ಮಾತನಾಡಿದ ಅವರು, ಯಾವುದೇ ಚರ್ಚೆಯೇ ಇಲ್ಲದೆ ಬಜೆಟ್ ಅಂಗೀಕಾರವಾಗಿದೆ, ನಾವು ಮನೆಗೆ ವಸ್ತುಗಳನ್ನು ತರಲು ನೂರು ಅಂಗಡಿ ಅಡ್ಡಾಡುತ್ತೇವೆ, ಮನೆಯಲ್ಲಿ ಚರ್ಚೆ ಮಾಡುತ್ತೇವೆ ಆದರೆ ರಾಜ್ಯದ ಭವಿಷ್ಯ ನಿರ್ಧರಿಸುವ ಬಜೆಟ್‌ ಬಗ್ಗೆ ಚರ್ಚೆಯೇ ಆಗದಿರಿವುದು ದುರಾದೃಷ್ಟಕರ ಎಂದರು.

Speaker Ramesh Kumar upset about debate not happening in session

ಸದನದ ಕಾರ್ಯಕಲಾಪದ ವರದಿಗಳನ್ನು ಓದಿ ಹೇಳಿದ ರಮೇಶ್‌ ಕುಮಾರ್, ಏಳು ದಿನದಲ್ಲಿ 15 ಗಂಟೆ 10 ನಿಮಿಷವಷ್ಟೆ ಸದನ ನಡೆದಿದೆ ಎಂದು ಹೇಳಿದರು. ತೆರಿಗೆ ಹಣ ವ್ಯಯ ಮಾಡಿ ಸದನ ನಡೆಸುವಾಗ ಹೀಗೆ ಆಗಬಾರದು, ನಾನು ಯಾರನ್ನೂ ಪರ ಅಥವಾ ವಿರೋಧ ವಹಿಸಿ ಮಾತನಾಡುತ್ತಿಲ್ಲ ಎಂದರು.

ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್

ಬಿಜೆಪಿ ಸದಸ್ಯರು ಗದ್ದಲ ಮುಂದುವರೆಸಿದಾಗ, ಸ್ವಲ್ಪ ಮ್ಯಾನರ್ಸ್‌ ಇರಬೇಕಾಗುತ್ತೆ, ಇವರನ್ನೆಲ್ಲಾ ಯಾರು ಇಲ್ಲಿಗೆ ಆರಿಸಿ ಕಳಿಸುತ್ತಾರೆ' ಎಂದು ಒಮ್ಮೆ ಸಿಟ್ಟಾದರು.

English summary
Speaker Ramesh Kumar upset about BJP debate not happening in assembly session. He said tax payers money is spending to run session we have to justify the tax payers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X