ಸ್ನೇಕ್ ಆರೀಫ್ ಮಾತು ಕೇಳಿ ಮೊಟ್ಟೆ ಹೊರತೆಗೆಯಿತೇ ಹಾವು?
ಚಿಕ್ಕಮಗಳೂರು, ಮಾರ್ಚ್ 12: ಹಾವು ಹಿಡಿಯಲು ಬಂದಾತ ಹಾಕು ಮೊಟ್ಟೆ ಹೊರಕ್ಕೆ ಎಂದಂತೆಲ್ಲಾ ಮೊಟ್ಟೆ ನುಂಗಿದ್ದ ಹಾವು ಒಂದೊಂದಾಗಿ ಮೂರು ಮೊಟ್ಟೆಯನ್ನು ವಾಂತಿ ಮಾಡಿದ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಂದೂರು ಗ್ರಾಮದ ಚಂದ್ರು ಅವರ ಮನೆಗೆ ನಾಗರ ಹಾವೊಂದು ಬಂದು ಅಡಿಗೆಗೆಂದು ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ನುಂಗಿ ಬಿಟ್ಟಿದೆ.
ಮೊಟ್ಟೆ ನುಂಗಿದ ಹಾವು ತೆವಳಲಾರದೆ ಸುಸ್ತಾಗಿ ಅಲ್ಲಿಯೆ ಮಲಗಿ ಬಿಟ್ಟಿತ್ತು, ಇದನ್ನು ಕಂಡ ಮನೆಯವರು ಉರಗ ರಕ್ಷಕ ಸ್ನೇಕ್ ಆರೀಫ್ಗೆ ಕರೆ ಮಾಡಿ ಕರೆಸಿದ್ದಾರೆ. ಆರೀಫ್ ಅವರು ನಾಗರ ಹಾವನ್ನು ಮನೆಯಿಂದ ಹೊರಗೆ ತಂದು ಕೆಲ ಕಾಲ ಆಟವಾಡಿಸಿದ್ದಾರೆ.

ಹೊಟ್ಟೆ ಸೇರಿದ್ದ ಮೊಟ್ಟೆಗಳಿಂದಾಗಿ ಅಲ್ಲಿಂದಲೂ ಕದಲಾಗದ ಹಾವು ಕೊನೆಗೆ ತಿಂದ ಮೊಟ್ಟೆಗಳನ್ನು ಅಲ್ಲಿಯೇ ವಾಂತಿ ಮಾಡಿ ತಪ್ಪಿಕೊಳ್ಳಲು ಪ್ರಯತ್ನಿಸಿದೆ ಆದರೆ ಉರಗ ಪ್ರೇಮಿ ಆರೀಫ್ ಹಾವನ್ನು ಸಂರಕ್ಷಿಸಿ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಸ್ನೇಕ್ ಆರೀಫ್ ಅವರು ಮೊಟ್ಟೆ ಹೊರ ಹಾಕು ಎಂದು ಹೇಳುವುದಕ್ಕೂ ಹಾವು ಮೊಟ್ಟೆಗಳನ್ನು ವಾಂತಿ ಮಾಡುವುದಕ್ಕೂ ಒಂದೇ ಆಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications