ಆಂತರಿಕ ಕಚ್ಚಾಟದಿಂದ ಸಿದ್ದರಾಮಯ್ಯ ಸರ್ಕಾರದ ಅವನತಿ: ಡಿವಿಎಸ್
ಕಲಬುರಗಿ, ಜೂನ್ 26: 'ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಮಿತಿ ಮೀರಿದೆ. ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಸ್ಥಗಿತವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಸಿದ್ದರಾಮಯ್ಯ ಅವರ ಸರ್ಕಾರ ಯಾವುದೇ ಸಮಯದಲ್ಲಿ ಪತನವಾಗಬಹುದು' ಎಂದು ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ಘೋಷಿಸಿದ್ದಾರೆ.
ಸಿದ್ದರಾಮಯ್ಯ ಅವರು ಗುಂಪುಗಾರಿಕೆ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳುವ ಲಕ್ಷಣ ಗಳಿವೆ. ಮುಂದಿನ ಚುನಾವಣೆಗೆ ಸಿದ್ಧತೆ ತ್ವರಿತಗತಿಯಿಂದ ನಡೆಸಬೇಕಿದೆ ಎಂದರು.
ಶಾಸಕರನ್ನು
ಸೆಳೆಯುವುದಿಲ್ಲ:
ಯಾವುದೇ
ಕಾರಣಕ್ಕೂ
ನಾವಾಗಿ
ಯಾವುದೇ
ಭಿನ್ನಮತೀಯ
ಶಾಸಕರನ್ನು
ಸೆಳೆಯುವುದಿಲ್ಲ.
ಕಾಂಗ್ರೆಸ್
ಪಕ್ಷ
ತೊರೆದು
ಬಿಜೆಪಿ
ಬರಲಿಚ್ಛಿಸುವವರಿಗೆ
ಸದಾಕಾಲ
ಸ್ವಾಗತ
ನೀಡುತ್ತೇವೆ.
ಈ
ಬಗ್ಗೆ
ಈಗಾಗಲೇ
ಪಕ್ಷದ
ರಾಜ್ಯಾಧ್ಯಕ್ಷ
ಬಿಎಸ್
ಯಡಿಯೂರಪ್ಪ
ಅವರು
ಸ್ಪಷ್ಟನೆ
ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ಹುಳುಕು ಎತ್ತಿ ತೋರಿಸುತ್ತಿಲ್ಲ. ಅಧಿಕಾರಕ್ಕೆ ಬಂದ ಪಕ್ಷ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಬಿಜೆಪಿಯಲ್ಲಿ ನೂರಕ್ಕೆ ನೂರು ಸರಿಯಿದೆ ಎನ್ನಲಾರೆ, ಆಂತರಿಕ ಭಿನ್ನಾಭಿಪ್ರಾಯ ಇರುತ್ತದೆ ಆದರೆ, ಆಡಳಿತ ಯಂತ್ರ ಕುಸಿತಕ್ಕೆ ಇದು ಕಾರಣವಾಗಬಾರದು ಎಂದು ಡಿವಿ ಸದಾನಂದ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಹಿಂದ ನಾಯಕರಾಗಿ ಗುರುತಿಸಿಕೊಂಡ ಸಿದ್ದರಾಮಯ್ಯ ಅವರು ಇಂದು ತಾವೊಬ್ಬ ಸಿಎಂ ಎಂಬುದನ್ನು ಮರೆತಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರ ಸಮಸ್ಯೆ, ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕಿಂತ ಆಂತರಿಕ ಕಚ್ಚಾಟ ಬಗೆಹರಿಸುವುದರಲ್ಲೇ ಕಾಲ ದೂಡುತ್ತಿದ್ದಾರೆ. ಇದು ಅವರಿಗೆ ಅನಿವಾರ್ಯ ಕೂಡಾ. ಸರ್ಕಾರದ ಜನಪ್ರಿಯ ಯೋಜನೆಗಳು ಎಲ್ಲರನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಸದಾನಂದ ಗೌಡ ಅವರು ಹೇಳಿದರು. (ಒನ್ಇಂಡಿಯಾ ಸುದ್ದಿ)