ಮ್ಯಾಟ್ ಬೆಲೆ "ಚೌಕಾಸಿ ವ್ಯಾಪಾರ": ಗರಂ ಆದ ಮಾಲೀಕ ಮಾಡಿದ್ದೇನು
ವ್ಯಾಪಾರ ಮತ್ತು ಚೌಕಾಸಿ ಎರಡಕ್ಕೂ ಒಂದಕ್ಕೊಂದು ಸಂಬಂಧವಿದೆ. ಭಾರತದಲ್ಲಂತೂ ಚೌಕಾಸಿ ಇಲ್ಲದೆ ವ್ಯಾಪಾರ ನಡೆಯುವುದು ತೀರ ವಿರಳ ಎಂದರೆ ವಿರಳ. ಇತ್ತೀಚಿನ ವರ್ಷಗಳಲ್ಲಿ ಮಾಲ್ ಸಂಸ್ಕೃತಿಯನ್ನು ಹೊರತುಪಡಿಸಿದರೆ, ಮಾರುಕಟ್ಟೆ ಹಾಗೂ ವ್ಯಾಪಾರಗಳು ಬಹುತೇಕ ಚೌಕಾಸಿಯಿಂದಲೇ ನಡೆಯುತ್ತವೆ. ಆದರೆ, ಗ್ರಾಹಕರು ಕಡಿಮೆ ಬೆಲೆಗೆ ಕೇಳಿದರು ಎಂದು ಅಂಗಡಿಯವನ್ನು ಚಾಕು ಎತ್ತಿಕೊಂಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ, ಪ್ರಾಣಕ್ಕೆ ಕುತ್ತಾದ ಚೌಕಾಸಿ ಘಟನೆಯ ವಿವಿವರ ಇಲ್ಲಿದೆ.
ಮೈಸೂರು ಜಿಲ್ಲೆಯ ಹುಣಸೂರಿನ ಬೈಪಾಸ್ ರಸ್ತೆಯ ಅಂಗಡಿಯೊಂದರಲ್ಲಿ ಗ್ರಾಹಕನಿಗೆ ಅಂಗಡಿಯ ಮಾಲೀಕ ಚೌಕಾಸಿ ಮಾಡಿದ್ದ ಕಾರಣಕ್ಕೆ ಕತ್ತರಿಯಿಂದ ಗ್ರಾಹಕನಿಗೆ ಇರಿದಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಚೌಕಾಸಿ ಇಲ್ಲದೆ ಬಹುತೇಕ ಭಾಗಗಳಲ್ಲಿ ವ್ಯಾಪಾರಗಳೇ ನಡೆಯುವುದಿಲ್ಲ. ಮಾರುಕಟ್ಟೆಗಳಲ್ಲಿ, ಸಣ್ಣಪುಟ್ಟ ವ್ಯಾಪಾರಗಳಲ್ಲಿ ಅಂಗಡಿಯ ಮಾಲೀಕ ಕೇಳಿದ ದುಡ್ಡನ್ನು ಕೊಟ್ಟು ಬರುವುದು ತೀರ ವಿವರಳ ಎಂದರೆ ವಿರಳ. ಅಂಗಡಿಯ ಮಾಲೀಕರು ಸಹ ಒಂದು ಹಂತದ ಚೌಕಾಸಿಯನ್ನು ಒಪ್ಪಿಕೊಂಡೇ ವ್ಯಾಪಾರ ಮಾಡುತ್ತಾರೆ. ಲಾಭ ಸಿಗುವುದಿಲ್ಲ. ಇಷ್ಟರ ಮೇಲೆ ಕಡಿಮೆ ಅಂದ್ರೆ ಆಗಲ್ಲ ಎಂದು ಹೇಳುತ್ತಾರೆ. ಆದರೆ, ಚೌಕಾಸಿ ಮಾಡಿದರು ಎಂದು ಹಲ್ಲೆ ಮಾಡುವುದು ಎಲ್ಲಿಯಾದರೂ ಕೇಳಿದ್ದೀರಾ. ಹೌದು ಅಂತಹ ಒಂದು ಘಟನೆ ಮೈಸೂರಿನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ ಏನು?
ನಂದೀಶ್ ಎನ್ನುವವರು ಗೂಡ್ಸ್ ಗಾಡಿಗೆ ಮ್ಯಾಟ್ ಖರೀದಿ ಮಾಡುವುದಕ್ಕೆಂದು ಇಲ್ಲಿನ ಕುಶಾಲ ನಗರದಿಂದ ಹುಣಸೂರಿನಲ್ಲಿರುವ ಮುರುಗೇಶ್ ಎನ್ನುವವರ ಅಂಗಡಿಗೆ ಬಂದಿದ್ದಾರೆ. ಅಂಗಡಿಯಲ್ಲಿ ವಿವಿಧ ಮಾದರಿಯ ಮ್ಯಾಟ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಮ್ಯಾಟ್ಗಳನ್ನು ಮುರುಗೇಶ್ ತೋರಿಸಿದ್ದಾರೆ. ಮ್ಯಾಟ್ ವೊಂದು ಇಷ್ಟವಾದ ಮೇಲೆ ಆ ಮ್ಯಾಟ್ ಅನ್ನು ಕಡಿಮೆ ಬೆಲೆಗೆ ನೀಡುವಂತೆ ನಂದೀಶ್ ಚೌಕಾಸಿಗೆ ಮುಂದಾಗಿದ್ದಾರೆ. 2,300 ರೂಪಾಯಿಯ ಬೆಲೆಯ ಮ್ಯಾಟ್ ಅನ್ನು 300 ರೂಪಾಯಿ ಕಡಿಮೆ ಮಾಡಿಕೊಂಡು 2000 ರೌಂಡ್ ಮಾಡಿಕೊಂಡಿ ಎಂದು ನಂದೀಶ್ ಕೇಳಿದ್ದಾನೆ. ಈ ಚೌಕಾಸಿ ವಿಷಯ ಮಾತಿನ ಚಕಮಕಿಗೆ ತಿರುಗಿದೆ. ಆದರೆ, ಮ್ಯಾಟ್ ಅನ್ನು ಕಡಿಮೆ ಬೆಲೆಗೆ ನೀಡುವುದಕ್ಕೆ ಅಂಗಡಿಯ ಮಾಲೀಕ ಒಪ್ಪಿಲ್ಲ.
ಕೊನೆಗೆ ಅಲ್ಲಿಂದ ನಂದೀಶ್ ಹೊರಗೆ ಹೋಗಲು ಮುಂದಾಗಿದ್ದಾನೆ. ಆದರೆ, ನಂದೀಶನ ಮಾತಿನಿಂದ ಕೋಪಗೊಂಡಿರುವ ಮುರುಗೇಶ ಕುಳಿತ ಜಾಗದಿಂದಲೇ ನಂದೀಶನ ಮೇಲೆ ಕತ್ತರಿ ಎಸೆದಿದ್ದಾನೆ. ಅಲ್ಲದೇ ಗ್ರಾಹಕರನ್ನು ಹಿಂಬಾಲಿಸಿ ಮುರುಗೇಶ ಹಾಗೂ ಆತನ ಗೆಳೆಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಲ್ಲಿನ ಹುಣಸೂರು ಪೊಲೀಸ್ ಠಾಣೆಯಲ್ಲಿ ಮೂವರು ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಸ್ಪರ ಬೈಗುಳ ವಿನಿಮಯ?
ಗಲಾಟೆ ನಡೆದ ಸಂದರ್ಭದಲ್ಲಿ ಇಬ್ಬರು ಪರಸ್ಪರ ಬೈದಾಡಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ, ಈ ಗಲಾಟೆ ವಿಕೋಪಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಹಲ್ಲೆಯಲ್ಲಿ ಗಾಯೊಗೊಂಡಿರುವ ನಂದೀಶ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಘಟನೆ ಈ ಹಂತಕ್ಕೆ ಯಾವ ಕಾರಣಕ್ಕೆ ಹೋಗಿದೆ ಎನ್ನುವುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications