ಶಿಂಷಾ ಉಪವಾಸ 6ನೇ ದಿನಕ್ಕೆ:ಮಾತುಕತೆ ವಿಫಲ, ಮುಂದೇನೋ?
ಚನ್ನಪಟ್ಟಣ, ಜ.25: ಇಗ್ಗಲೂರು ಬಳಿಯ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಪ್ರತಿಭಟಿಸಿ ಸಿದ್ದರಾಮ ಹೆಗ್ಗಡೆ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶನಿವಾರಕ್ಕೆ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ನಿನ್ನೆ ತಾಲೂಕು ಕಂದಾಯಾಧಿಕಾರಿ ಮತ್ತಿತರ ಅಧಿಕಾರಿಗಳು ಸಿದ್ದರಾಮ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಉಪವಾಸ ನಿಲ್ಲಿಸುವಂತೆ ಕೋರಿದರು. ಆದರೆ ಮಾತುಕತೆ ವಿಫಲವಾಗಿದ್ದು, ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿದ್ದರಾಮ ಹೆಗ್ಗಡೆ, ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ಅಕ್ರಮ ಮರಳುಗಾರಿಕೆಗೆ ತಡೆ ಹಾಕುವವರೆಗೂ ಸತ್ಯಾಗ್ರಹ ನಿಲ್ಲುವಿಸುವುದಿಲ್ಲ ಎಂದಿದ್ದಾರೆ.
ಹಿಂದಿನ ಸುದ್ದಿ: ತಾಲೂಕಿನ ಗಡಿ ಭಾಗದ ಇಗ್ಗಲೂರು ಬಳಿಯ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ತಾಲೂಕು ಕಂದಾಯಾಧಿಕಾರಿಗಳು ಮರಳು ತೆಗೆಯುವ ಕಬ್ಬಿಣದ ಕೊಪ್ಪರಿಕೆಯನ್ನು ಪತ್ತೆ ಮಾಡುವ ಬದಲು, ಮೀನು ಹಿಡಿಯುವ ಬಿದರಿನ ತೆಪ್ಪವನ್ನು ಸುಟ್ಟು ಸಂತೋಷ ಪಡುತ್ತಿದ್ದಾರೆ!
ಹೌದು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಸಿದ್ದರಾಮ ಹೆಗ್ಗಡೆ ಇಲ್ಲಿನ ತಾಲೂಕು ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಕುಳಿತು ಇಂದಿಗೆ 5 ದಿನಗಳಾಗಿವೆ. ಸತ್ಯಾಗ್ರಹಕ್ಕೆ ಭಂಗ ತರಲೋ ಎಂಬಂತೆ ತಾಲೂಕು ಆಡಳಿತವು ಸತ್ಯಾಗ್ರಹ ಮಾಡುತ್ತಿರುವ ಸಿದ್ದರಾಮಯ್ಯ ಹೆಗ್ಗಡೆ (ಕೆಳಗಿನ ಚಿತ್ರದಲ್ಲಿ ಮಧ್ಯದಲ್ಲಿರುವವರು) ಹಾಗೂ ಅವರಿಗೆ ಬಂಬಲ ನೀಡುತ್ತಿರುವ ರೈತ ಸಂಘ ಹಾಗೂ ಇತರೆ ಜನಪರ ಘಟನೆಗಳ ಮುಖಂಡರ ಕಣ್ಣೊರೆಸುವ ತಂತ್ರ ಮಾಡುತ್ತಿದೆ.

ಕಳೆದ 2-3 ವರ್ಷಗಳಿಂದ ಮರಳು ದಂಧೆಕೋರರು ಶಿಂಷಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಗ್ಗಡೆ ಮರಳು ಗಣಿಗಾರಿಕೆ ನಿಲ್ಲಿಸಿ, ಇಗ್ಗಲೂರು ಡ್ಯಾಂ ಉಳಿಸಿ ಎಂದು ಕಳೆದ ಒಂದೂವರೆ ವರ್ಷದಿಂದಲೂ ಹೋರಾಟ ಮಾಡುತ್ತಾ, ವಿನೂತನ ಚಳುವಳಿ ಮಾಡಿದ್ದಾರೆ.
ಚಳವಳಿ ನಡೆಸುವ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ ತಾಲೂಕು ಮತ್ತು ಜಿಲ್ಲಾಡಳಿತ ಮರಳು ಮಾಫಿಯಾದ ಜತೆ ಕೈ ಜೋಡಿಸಿದೆ ಎಂದು ಸಿಟ್ಟಿಗೆದ್ದ ಹೆಗ್ಗಡೆ ಅವರು ಕಳೆದ 5 ದಿನದಿಂದ ಇಲ್ಲಿನ ತಾಲೂಕು ಕಚೇರಿ ಮುಂದೆ ಗಾಂಧಿ ಮಾರ್ಗದಲ್ಲಿ ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಬಿದಿರಿನ ತೆಪ್ಪವನ್ನು ಸುಟ್ಟು ನಾಟಕವಾಡುತ್ತಿದೆ ಎನ್ನುವ ಕೂಗು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಶಿಂಷಾ ನದಿ ಪಾತ್ರದ ಅಕ್ರಮ ಮರಳು ದಂಧೆಗೆ ಚನ್ನಪಟ್ಟಣ ತಾಲೂಕು ಆಡಳಿತದ್ದೇ ಕುಮ್ಮಕ್ಕಿದೆ ಎನ್ನುವ ಟೀಕೆ ವ್ಯಾಪಕವಾಗಿದ್ದು,. ಈಚೆಗೆ ನಡೆದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲೂ ಮದ್ದೂರು ಅಧಿಕಾರಿಗಳ ತಂಡಕ್ಕೆ ಚನ್ನಪಟ್ಟಣ ತಾಲೂಕು ಆಡಳಿತ ಸಾಥ್ ನೀಡಿರಲಿಲ್ಲ ಎನ್ನುವ ದೂರು ಸ್ವತಃ ಮದ್ದೂರು ತಾಲೂಕು ಆಡಳಿತದ ಆರೋಪವಾಗಿತ್ತು.
ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ಪರಿಸರವಾದಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಡಿಎಸ್ ವಿಶ್ವನಾಥ್ ಗುರುವಾರ ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಧೀನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲಾಧಿಕಾರಿ ಗರಂ ಆಗಿದ್ದರಿಂದ ಕೊಂಚ ಬೆಚ್ಚಿದ್ದ ಚನ್ನಪಟ್ಟಣದ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ವಿರುದ್ಧ ನಡೆಸಿದ ಕಾಟಾಚಾರದ ಕಾರ್ಯಾಚರಣೆ ನಡೆಸಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿವೆ.
ಮೇಲಧಿಕಾರಿ ಆದೇಶ ಪಾಲಿಸಬೇಕೆನ್ನುವ ಕಾರಣಕ್ಕೆ ತಂಡದಲ್ಲಿದ್ದ ಬಹುತೇಕ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ನದಿ ಪಾತ್ರದಲ್ಲಿ ಅಡ್ಡಾಡಿದರು. ಮರಳು ಹೇರಿಕೊಂಡು ದಡ ಮುಟ್ಟಲು ಬಳಸುತ್ತಿದ್ದ ಹಾಗೂ ಮೀನು ಹಿಡಿಯಲು ಅಲ್ಲೇ ಹಾಕಿದ್ದ ಬಿದಿರು ಬಂಬಿನ ನಾಲ್ಕೈದು ತೆಪ್ಪಗಳನ್ನಷ್ಟೇ ಸುಟ್ಟು ಹಾಕಲಾಯಿತು ಎನ್ನುವುದು ಪ್ರತ್ಯಕ್ಷದರ್ಶಿಗಳ ಆರೋಪವಾಗಿದೆ.
ಕಳೆದ ನಾಲ್ಕು ದಿನಗಳಿಂದ ಸಿದ್ದರಾಮ ಹೆಗ್ಗಡೆ ಮರಳು ಗಣಿಗಾರಿಕೆಗೆ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಧರಣಿ ನಿರತರ ಹೆಗ್ಗಡೆ ಆರೋಗ್ಯ ತಪಾಸಣೆಯನ್ನು ಸರ್ಕಾರಿ ವೈದ್ಯರಿಂದ ನಡೆಸುವ ಕನಿಷ್ಠ ಕಾಳಜಿಯನ್ನೂ ಅಧಿಕಾರಿಗಳು ತೋರಿಲ್ಲ. ಅವರ ಸಮಸ್ಯೆ, ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಯೂ ಇಲ್ಲ.
ಮರಳು ಮಾಫಿಯಾದಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಮಾಹಿತಿಯನ್ನು ಸಿದ್ದರಾಮ ಹೆಗ್ಗಡೆ ಹೊರಗೆಡವಿದ ನಂತರವೂ ಅವರಿಗೆ ಸೂಕ್ತ ರಕ್ಷಣೆಯನ್ನೂ ಒದಗಿಸಿಲ್ಲ. ಅವರ ಪ್ರಾಣ ಹಾನಿಯಾದರೆ ಹೊಣೆ ಯಾರೆನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಶಿಂಷಾ ನದಿ ಪಾತ್ರದಲ್ಲಿ ಮರಳುಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಚನ್ನಪಟ್ಟಣದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನ 5ನೇ ದಿನವು ಮುಂದುವರೆದಿದೆ.
ತಾಲೂಕಿನಲ್ಲಿ ಕಳೆದ 14 ವರ್ಷದಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ, ಲೋಕಾಯುಕ್ತ ಇಲ್ಲವೇ ಉನ್ನತ ಸಂಸ್ಥೆಯಿಂದ ತನಿಖೆ ನಡೆಸುವವರೆಗೆ ಹೋರಾಟ ಅಂತ್ಯಗೊಳಿಸುವುದಿಲ್ಲ ಎಂದು ಮುಷ್ಕರನಿರತ ಹೆಗ್ಗಡೆ ಪಟ್ಟು ಹಿಡಿದಿದ್ದಾರೆ.
ಆಗ್ರಹ: ಅಕ್ರಮ ಮರಳುಗಾರಿಕೆಯಿಂದ ಈ ಭಾಗದ ಜನ ಜೀವನ ಬಲಿಯಾಗಿದೆ. ಬೆರಳೆಣಿಕೆ ಮಂದಿಯನ್ನು ಶ್ರೀಮಂತರನ್ನಾಗಿಸಲು ಲಕ್ಷಾಂತರ ಜನರ ಹಿತವನ್ನು ಬಲಿ ತೆಗೆದುಕೊಳ್ಳುವುದು ನಿಲ್ಲಬೇಕು. ಮರಳು ಮಾಫಿಯಾವನ್ನು ಮಟ್ಟ ಹಾಕಲು ಜಿಲ್ಲಾಡಳಿತ ಸ್ಪಷ್ಟ ನೀತಿ ರೂಪಿಸಬೇಕು ರಾಜ್ಯ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.
ಈ ತಾಲೂಕಿನ ಪರಿಸರದ ಬಗ್ಗೆ ಪ್ರತಿಯೊಬ್ಬರು ಆಲೋಚಿಸಬೇಕಿದೆ. ಮರಳು ಗಣಿಗಾರಿಕೆಯಿಂದ ತಾಲೂಕಿಗೆ ಈಗಾಗಲೇ ಗಂಡಾಂತರ ಎದುರಾಗಿದೆ. ಮತ್ತಷ್ಟು ಅನಾಹುತ ಸಂಭವಿಸದಿರಲು ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಹೋರಾಟಕ್ಕೆ ವಿಷಾಯಾಧರಿತ ಬೆಂಬಲ ನೀಡಲಾಗಿದೆ ಇದಕ್ಕೆ ತಾಲೂಕಿನ ಪ್ರಜ್ಞಾವಂತರು ಬೆಂಬಲ ನೀಡಬೇಕಿದೆ ಎಂದರು..
ರೈತ ಸಂಘದ ವಿಭಾಗೀಯ ಅಧ್ಯಕ್ಷ ಎಂ. ರಾಮು, ಮುಖಂಡರಾದ ಗೌಡಗೆರೆ ದೊಡ್ಡಣ್ಣ, ನಾಗೇಶ್ ಮುಂತಾದವರು ಕೂಡ ಬೆಂಬಲ ಸೂಚಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications