ಬಿಗ್ ಬಾಸ್ ನಲ್ಲಿ ಸಮೀರಾಚಾರ್ಯ, ಬ್ರಾಹ್ಮಣ್ಯದ ಬಿಗ್ ಚರ್ಚೆ
ಬಿಗ್ ಬಾಸ್ ನ ಕನ್ನಡ ಸೀಸನ್ ಐದರಲ್ಲಿ ಭಾನುವಾರ ರಾತ್ರಿ ಮನೆಯೊಳಗೆ ಒಬ್ಬೊಬ್ಬರೇ ಹೋಗುವಾಗ, ಪಂಚೆಯುಟ್ಟು, ಶಿಖೆ ಬಿಟ್ಟ, ಚೀಲದಲ್ಲಿ ಅಗ್ಗಿಷ್ಟಿಕೆಯನ್ನು ಇಟ್ಟುಕೊಂಡ ಸಮೀರಾಚಾರ್ಯರನ್ನು ಸ್ಪರ್ಧಿಯಾಗಿ ಕಂಡಾಗ ಅರೆ ಕ್ಷಣ ಗಾಬರಿಯಾಯಿತು. ಏಕೆಂದರೆ ಇವರು ಲೌಕಿಕ ಬ್ರಾಹ್ಮಣರಲ್ಲ, ವೈದಿಕ ಬ್ರಾಹ್ಮಣರು.
ತ್ರಿಕಾಲ ಸಂಧ್ಯಾವಂದನೆ, ವೈಶ್ವದೇವ ಇಲ್ಲದೆ, ದೇವರ ನೈವೇದ್ಯ ಮಾಡದೆ ಸಮೀರಾಚಾರ್ಯ ಭೋಜನ ಸ್ವೀಕಾರ ಮಾಡ್ತಾರಾ? ದೇವರ ಪೂಜೆಗೆ ಬಾವಿಯ ನೀರು ಅಥವಾ ನದಿ ನೀರನ್ನೇ ಬಳಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಯಾವ ಬಾವಿ, ಅದ್ಯಾವ ನದಿ? ಆದರೆ ಕೆಲವರು ಹೇಳುವ ಪ್ರಕಾರ, ನೀರಿಗೆ ದೋಷವಿಲ್ಲ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!
ಇನ್ನು ಮಧ್ವಾಚಾರ್ಯರ ತಂತ್ರಸಾರ ಸಂಗ್ರಹದಲ್ಲಿ, ವಿಷ್ಣು ಸರ್ವೋತ್ತಮತ್ವ ಒಪ್ಪಿಕೊಳ್ಳದವರ ಬಳಿ ಆಹಾರ ಸ್ವೀಕಾರ ಮಾಡಬಾರದು ಎಂದಿದೆ. ಹೆಣ್ಣುಮಕ್ಕಳು ಗಾಯತ್ರಿ ಮಂತ್ರವನ್ನೇ ಕೇಳಿಸಿಕೊಳ್ಳಬಾರದು, ತಿಂಗಳ ಮೂರು ದಿನ ಪ್ರತ್ಯೇಕವಾಗಿ ಕೂರಬೇಕು ಎಂದು ಬಲವಾಗಿ ನಂಬುವ ಪಂಗಡವನ್ನು ಪ್ರತಿನಿಧಿಸುವ ಸಮೀರಾಚಾರ್ಯ ಅಷ್ಟು ಮಹಿಳೆಯರ ಮಧ್ಯೆ ನಿತ್ಯ ಕರ್ಮಗಳನ್ನು ಹೇಗೆ ಮಾಡುತ್ತಾರೆ?

ಧಾರ್ಮಿಕ ಕಾರ್ಯಕ್ಕಾಗಿ ಧರ್ಮಾಚರಣೆಯನ್ನು ಬಿಡಬೇಕೆ?
ಬಿಗ್ ಬಾಸ್ ನಲ್ಲಿ ಅವರು ನೂರು ದಿನ ಇದ್ದರೆ, ಅದರಲ್ಲಿ ಗೆದ್ದರೆ ಆ ಮೊತ್ತವನ್ನು ದೇವಾಲಯ ನಿರ್ಮಾಣಕ್ಕೆ ಬಳಸುವ ಉದ್ದೇಶವಿದೆಯಂತೆ. ಧಾರ್ಮಿಕ ಕಾರ್ಯಕ್ಕಾಗಿ ಧರ್ಮಾಚರಣೆಯನ್ನು ಬಿಡಬೇಕೆ? ದೇವಾಲಯ ನಿರ್ಮಾಣಕ್ಕೆ ಜನರಿಂದಲೇ ನೆರವು ಕೇಳಬಹುದಿತ್ತಲ್ಲವಾ?

ಬಿಗ್ ಬಾಸ್ ಟಾಸ್ಕ್ ಗಳಲ್ಲಿ ಪಾಲ್ಗೊಳ್ಳುವುದಾ ಸಲೀಸಾ?
ಇನ್ನು ಅಲ್ಲಿ ನೀಡುವ ಚಟುವಟಿಕೆಗಳಲ್ಲಿ ಖಂಡಿತಾ ಪಾಲ್ಗೊಳ್ಳಲೇ ಬೇಕು. ಅದು ಯಾವ ಬಗೆಯ ಚಟುವಟಿಕೆಗಳಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಟಿವಿಯಲ್ಲಿ ಸಮೀರಾಚಾರ್ಯರು ಮಾತನಾಡುವ ಹಲವು ಕಾರ್ಯಕ್ರಮಗಳನ್ನು ನೋಡಿದವರಿಗೆ ಸ್ಪಷ್ಟವಾಗುತ್ತದೆ: ಅವರು ವೈದಿಕ ಬ್ರಾಹ್ಮಣರು. ಅಂಥ ಯಾವ ಕಟ್ಟುಪಾಡನ್ನೂ ಬಿಗ್ ಬಾಸ್ ಮನೆಯಲ್ಲಿ ಪಾಲಿಸಲು ಸಾಧ್ಯವಿಲ್ಲ.

ಗೃಹಸ್ಥರ ಕರ್ತವ್ಯ ಪಾಲನೆ ಸಾಧ್ಯವೆ?
ಅಧ್ಯಯನ, ಅಧ್ಯಾಪನ, ಯಜನ (ಯಾಗ ಮಾಡುವುದು), ಯಾಜನ (ಯಾಗ ಮಾಡಿಸುವುದು), ದಾನ, ಪ್ರತಿಗ್ರಹದ (ದಕ್ಷಿಣೆ ಸ್ವೀಕರಿಸುವುದು) ಗೃಹಸ್ಥರ ಕರ್ತವ್ಯ ಎನ್ನಲಾಗಿದೆ. ಈ ಪೈಕಿ ಯಾವುದನ್ನು ಅಲ್ಲಿದ್ದು ಮಾಡಲು ಸಾಧ್ಯ?

ಆಪತ್ತಿನ ಸಂದರ್ಭದಲ್ಲಿ ಧರ್ಮಾಚರಣೆಯಿಂದ ವಿನಾಯಿತಿ
ಆಪತ್ತಿನಲ್ಲಿ ಧರ್ಮಾಚರಣೆಯಿಂದ ವಿನಾಯಿತಿ ಇದೆ. ಅದೆಂಥ ಆಪತ್ತು? ಅದಾಗಿಯೇ ಸೃಷ್ಟಿಯಾದದ್ದೋ ಅಥವಾ ನಾವೇ ಸೃಷ್ಟಿಸಿಕೊಂಡಿದ್ದೋ? ಸನ್ಯಾಸ ಸ್ವೀಕರಿಸಿದವರಿಗೆ ಇರುವಂಥ ಕಟ್ಟುಪಾಡುಗಳು ಗೃಹಸ್ಥರಿಗೆ ಇಲ್ಲದಿರಬಹುದು. ಆದರೆ ಗೃಹಸ್ಥರು ಆಚರಿಸುವ ಕಟ್ಟುಪಾಡನ್ನಾದರೂ ಪಾಲಿಸುವಂಥ ಸನ್ನಿವೇಶ ಇರಬೇಕಲ್ಲವೆ?

ಮಾತನಾಡುವುದಕ್ಕೆ ಅವಕಾಶ ಸಿಕ್ಕಂತಾಯಿತು
"ಬ್ರಾಹ್ಮಣರ ಬುದ್ಧಿಯೇ ಇಷ್ಟು. ತಮಗೆ ಅನ್ವಯ ಆಗುವ ಶಾಸ್ತ್ರವೇ ಬೇರೆ. ಇನ್ನೊಬ್ಬರಿಗೆ ಹೇಳುವಾಗಿನ ಕಟ್ಟುಪಾಡೇ ಬೇರೆ" ಎಂದು ಮಾತನಾಡಿಕೊಳ್ಳಲು ಸಮೀರಾಚಾರ್ಯರೇ ಅವಕಾಶ ಮಾಡಿಕೊಟ್ಟಂತಾಗಿದೆ. ಬಿಗ್ ಬಾಸ್ ಅಥವಾ ಬಿಗ್ ಬ್ರದರ್ ಯಾವುದಕ್ಕಾದರೂ ಹೋಗುವುದು ವೈಯಕ್ತಿಕ ವಿಚಾರ. ಆದರೆ ಧಾರ್ಮಿಕ ಪ್ರತಿನಿಧಿಯಂತೆ ಸಮಾಜದಲ್ಲಿ ಗುರುತಿಸಿಕೊಂಡು, ಶಾಸ್ತ್ರ- ಧರ್ಮ ನಿರ್ಣಯದ ಮಾತನಾಡಿ, ಈ ರೀತಿ ಮಾಡುವುದಕ್ಕೆ ನೀವೇನಂತೀರಿ?
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications