'ಗೃಹ ಲಕ್ಷ್ಮೀ' ಯೋಜನೆ 2000 ರೂಪಾಯಿ ಜಮೆ ಬೆನ್ನಲ್ಲೆ ಭಾರೀ ಗೊಂದಲ..!
ಬೆಂಗಳೂರು, ಮೇ 20: ಕರ್ನಾಟಕದಾದ್ಯಂತ ಪಂಚ ಗ್ಯಾರಂಟಿ ಪೈಕಿ ಯೋಜನೆ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ ಯೋಜನೆಗಳ ವಿಚಾರದಲ್ಲಿ ಆಗಾಗ ನೀಡುತ್ತಿರುವ ಹೇಳಿಕೆ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಸರ್ಕಾರದ ಬಳಿ ಯೋಜನೆಗಳಿಗೆ ಭರಿಸಲು ಹಣವಿಲ್ಲ ಅಂತಲೂ ದೂರಲಾಗುತ್ತಿದೆ. ಈ ಮಧ್ಯೆ ಸರ್ಕಾರ ಬೆಲೆ ಏರಿಕೆ ಮಾಡುವ ಕಾಯಕ ಮುಂದುವರಿಸಿದೆ. ಒಟ್ಟು ಸುಮಾರು ಮೂರು ತಿಂಗಳು ಗೃಹ ಲಕ್ಷ್ಮೀ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ ಒಂದು ಕಂತನ್ನು ಪಾವತಿಸಿದರೂ ಗೊಂದಲ ತಪ್ಪುತ್ತಿಲ್ಲ ಎಂಬುದು ಫಲಾನುಭವಿಗಳ ಅಳಲು.
ಹೌದು, ನೆನ್ನೆ ಸೋಮವಾರ (ಮೇ 19) ರಾಜ್ಯದ ಕೋಟ್ಯಾಂತರ ಮಹಿಳೆಯರಿಗೆ 'ಗೃಹ ಲಕ್ಷ್ಮೀ' ಯೋಜನೆ 2000 ರೂಪಾಯಿ ಒಂದು ಕಂತಿನ ಹಣ ಬಂದಿದೆ. ಬಾಕಿ ಇರುವ ಇತರ ಕಂತುಗಳ ಹಣಕ್ಕೆ ಕಾಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ಸರ್ಕಾರ ಹಣ ಜಮೆ ಮಾಡಿ ನುಡಿದಂತೆ ನಡೆದುಕೊಳ್ಳುತ್ತಿಲ್ಲ ಎಂದು ಫಲಾನುಭವ ಮಹಿಳೆಯರು ದೂರುತ್ತಿದ್ದಾರೆ. ಇನ್ನೂ ಕೆಲವರು ಹಣ ಬಂದಾಗ ಬರಲಿ, ಒಟ್ಟಿನಲ್ಲಿ ಜಮೆ ಆದರೆ ಸಾಕು ಎಂದು ಹೇಳುತ್ತಿದ್ದಾರೆ.

ಕರ್ನಾಟಕದಾದ್ಯಂತ ಒಟ್ಟು 1.25 ಕೋಟಿ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮಾಸಿಕ 2000 ರೂಪಾಯಿ ಹಣ ವಿತರಿಸುತ್ತಿದೆ. ಈ ಹಣವನ್ನು ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ, ಹಬ್ಬಕ್ಕೆ, ಪತಿಗೆ ಉಡುಗೊರೆ ಸೇರಿದಂತೆ ಮನೆ ಖರ್ಚು ನಿರ್ವಹಿಸಲು ಬಳಸುತ್ತಿದ್ದಾರೆ. ಹಣಕಾಸಿನ ಅಗತ್ಯತೆ ಮಹಿಳೆಗೆ ತಿಳಿದಿರುತ್ತದೆ. ಮನೆ ನಿರ್ವಹಣೆ ಜವಾಬ್ದಾರಿಯೇ ಆಕೆಯದ್ದಾಗಿರುತ್ತದೆ. ಹೀಗಾಗಿಯೇ ಈ ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ.
ಫಲಾನುಭವಿಗಳಲ್ಲಿ ಗೊಂದಲವೇನು?
ಕೆಲವು ತಿಂಗಳ ಬಾಕಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ನೆನ್ನೆ ಸೋಮವಾರ ಸರ್ಕಾರ 2000 ರೂಪಾಯಿ ಜಮೆ ಮಾಡಿ ಗುಡ್ ನ್ಯೂಸ್ ನೀಡಿದೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾವು ತಿಂಗಳು ತಿಂಗಳು ಹಣ ಹಾಕುತ್ತೇವೆ ಎಂದು ಹೇಳಿಲ್ಲ. ಆದಾಗ ಕೊಡುತ್ತೇವೆ. ಹಣ ಬಿಡುಗಡೆ ಆದಾಗ ಖಾತೆ ಜಮೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಫಲಾನುಭವಿ ಮಹಿಳೆಯರ ಗೊಂದಲಕ್ಕೆ ಕಾರಣವಾಗಿದೆ.
ಇದು ವಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ಹೇಳುವುದು ಒಂದು ಅಧಿಕಾರಕ್ಕೆ ಬಂದ ಮೇಲೆ ಮಾಡುವುದು ಒಂದು ಎಂದು ದೂರುತ್ತಿದ್ದಾರೆ. ಅಲ್ಲದೇ ಡಿಸಿಂ ಡಿಕೆ ಶಿವಕುಮಾರ್ ಅವರ ಹೇಳಿಕೆ ಕಂಡು ಒಂದು ಕೋಟಿಗೂ ಹೆಚ್ಚು ಮಹಿಳೆಯರು ಗೊಂದಲಕ್ಕೀಡಾಗಿದ್ದಾರೆ. ಮುಂದೆ ನಮಗೆ ಹಣ ಸಿಗುವುದಿಲ್ಲವಾ? ಎಂದು ಆಲೋಚಿಸುತ್ತಿದ್ದಾರೆ. ಸರ್ಕಾರ ಹೀಗೆ ಹೇಳುತ್ತಲೇ ಯೋಜನೆ ನಿಲ್ಲಿಸುತ್ತದಾ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉಳಿದ ಕಂತು ಆಗುವುದು ಯಾವಾಗ?
ಈ ಹಿಂದೆ ತಾಂತ್ರಿಕ ಸಮಸ್ಯೆ ಕಾರಣವೊಡ್ಡಿ ಮಹಿಳೆಯರಿಗೆ ಮಾಸಿಕ ಹಣ ಹಾಕುವುದು ತಡವಾಗಿತ್ತು. ಅಲ್ಲಿಂದ ಎರಡು, ಮೂರು ತಿಂಗಳ ಕಂತು ಬಾಕಿ ಉಳಿಯುತ್ತಲೇ ಬಂತು. ಸರ್ಕಾರ ಆ ಕಂತುಗಳನ್ನು ಒಮ್ಮೆ ಹಾಕುವುದಾಗಿ ತಿಳಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಒಮ್ಮೆಲೆ ಹಣ ಜಮೆ ಆಗುತ್ತದೆ ಎಂದಿದ್ದರು. ಆದರೆ ಒಂದೊಂದೆ ತಿಂಗಳು ಹಣ ಜಮೆ ಆಗುತ್ತಿರುವುದಕ್ಕೆ ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಉಳಿದ ಕಂತು ಜಮೆ ಆಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
-
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications