Get Updates
Get notified of breaking news, exclusive insights, and must-see stories!

ರಕ್ತ ಚಂದನ ಅಕ್ರಮ ಸಾಗಣೆ, BIAL ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್

ಬೆಂಗಳೂರು, ಡಿ. 29: ರಕ್ತ ಚಂದನ ಮಾಫಿಯಾ ಕುರಿತು ನಟ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ; ಸಿನಿಮಾ ದಾಖಲೆಗಳನ್ನು ಪುಡಿ ಮಾಡುತ್ತಿದೆ. ರಕ್ತ ಚಂದನವನ್ನು ವಿದೇಶಗಳಿಗೆ ರಫ್ತು ಮಾಡಲು ದಂಧೆಕೋರರ ಜತೆ ಶಾಮೀಲಾಗಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಫಿಯಾ ನಿಯಂತ್ರಣ ಹಾಕಬೇಕಿದ್ದ ಕಸ್ಟಮ್ಸ್ ಅಧಿಕಾರಿಗಳೇ ಇದೀಗ ರಕ್ತ ಚಂದನ ಅಕ್ರಮ ಸಾಗಣೆ ಕೇಸಲ್ಲಿ ಸಿಬಿಐ ತನಿಖೆಗೆ ಒಳಪಟ್ಟಿದ್ದಾರೆ. ಬಹು ಬೇಡಿಕೆ ರಕ್ತ ಚಂದನ ಸಾಗಣೆ ದಂಧೆಯ ಸ್ಟೋರಿ ಇಲ್ಲಿದೆ ನೋಡಿ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶೇಷಾಚಲಂ ಅರಣ್ಯದಲ್ಲಿ ಬಹು ಬೇಡಿಕೆ ರಕ್ತ ಚಂದನ ಮರಗಳಿವೆ. ವೈದ್ಯಕೀಯ ಗುಣವುಳ್ಳ ಈ ಮರಗಳಿಗೆ ಚೀನಾ ಮತ್ತು ಜಪಾನ್‌ನಲ್ಲಿ ಬಹು ಬೇಡಿಕೆ. ಹೀಗಾಗಿ ಈ ಮರಗಳನ್ನು ಕದ್ದು ವಿದೇಶಕ್ಕೆ ಸಾಗಣೆ ಮಾಡುವ ದೊಡ್ಡ ಜಾಲವೇ ಇದೆ. ತಮಿಳುನಾಡು- ಕರ್ನಾಟಕ- ಆಂಧ್ರ ಪ್ರದೇಶ ಮೂರು ರಾಜ್ಯಗಳ ಜನರು ಸೇರಿ ಮಾಡುವ ಈ ದಂಧೆಯ ಸುತ್ತ ಕತೆ ಹೆಣೆದು ಪುಷ್ಪ ಸಿನಿಮಾ ನಿರ್ಮಿಸಲಾಗಿದೆ. ರಕ್ತ ಚಂದನ ದಂಧೆ ಮಾಡಿದವರು ಆಂಧ್ರಪ್ರದೇಶದಲ್ಲಿ ಡಾನ್ ಗಳಾಗಿ ರೂಪಾಂತರಗೊಂಡ ಉದಾರಣೆಗಳಿವೆ. ರಕ್ತ ಚಂದನ ದಂಧೆ ಮಾಡುವರು ಆಂಧ್ರದವರು ಆದ್ರೆ, ಅರಣ್ಯಕ್ಕೆ ಹೋಗಿ ರಕ್ತ ಚಂದನ ಮರಗಳನ್ನು ಕದಿಯುವರು ತಮಿಳುನಾಡು ಮೂಲದವರು. ಹೀಗೆ ಕದ್ದ ಮರಗಳನ್ನು ಗಡಿಗಳನ್ನು ದಾಟಿ ವಿಮಾನ ನಿಲ್ದಾಣಗಳಿಗೆ ಸಾಗಿಸುವ ಜಾಲ ಕರ್ನಾಟಕದ್ದು. ಹೀಗಾಗಿ ಮೂರು ರಾಜ್ಯದ ಜನರು ಸೇರಿ ಹುಟ್ಟಿ ಹಾಕಿರುವ ರಕ್ತ ಚಂದನ ಮಾರಾಟ ದಂಧೆಯ ಹಿನ್ನೆಲೆ. ಈ ದಂಧೆಯ ಹೊಸ ಸಂಗತಿಯನ್ನು ಇದೀಗ ಸಿಬಿಐ ಪೊಲೀಸರು ಹೊರ ಹಾಕಿದ್ದಾರೆ.

ಅಕ್ರಮವಾಗಿ ವಿದೇಶಗಳಿಗೆ ರಕ್ತ ಚಂದನ ಸಾಗಣೆ ಮಾಡುವ ದಂಧೆಕೋರರ ಜತೆ ಶಾಮೀಲಾದ ಆರೋಪ ಸಂಬಂಧ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಖಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಳೆದ ಜೂನ್ ಮತ್ತು ಜುಲೈನಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಣೆಗೆ ಕಸ್ಟಮ್ಸ್ ಅಧಿಕಾರಿಗಳು ಸಹಕಾರ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮಾಹಿತಿ ಬೆನ್ನಲ್ಲೇ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿ, 3293 ಕೆ.ಜಿ. ತೂಕದ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದರು. ಪರವಾನಗಿ ಇಲ್ಲದೇ ಅಕ್ರಮ ಸಾಗಣೆ ಪತ್ತೆ ಮಾಡಿದ್ದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿದ್ದಾರೆ.

Red sandalwood smuggling: CBI Registered FIR Against BIAL Customs officials

ಈ ಹಿನ್ನೆಲೆಯಲ್ಲಿ ಸಿಬಿಐ ಎಸಿಬಿ ಘಟಕದ ಅಧಿಕಾರಿಗಳು ತನಿಖೆ ನಡೆಸಿದಾಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಏರ್ ಕಾರ್ಗೋ ಕಸ್ಟಮ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧೀಕ್ಷಕರು ಮತ್ತು ಇನ್‌ಸ್ಪೆಕ್ಟರ್ ಹಣ ಪಡೆದು ರಕ್ತ ಚಂದನ ಅಕ್ರಮ ಸಾಗಣೆಗೆ ಅವಕಾಶ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಕಸ್ಟಮ್ಸ್ ಅಧೀಕ್ಷಕರು ಮತ್ತು ಇನ್‌ಸ್ಪೆಕ್ಟರ್ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

Red sandalwood smuggling: CBI Registered FIR Against BIAL Customs officials

ಕಸ್ಟಮ್ಸ್ ಸೂಪರಿಡೆಂಟ್ ವೆಂಕಟೇಶ್, ಅನಂತಪದ್ಮನಾಭ ಹಾಗೂ ಇನ್‌ಸ್ಪೆಕ್ಟರ್ ಅರವಿಂದ ಪವಾರ್ ವಿರುದ್ಧ ರಕ್ತ ಚಂದನ ಕಳ್ಳ ಸಾಗಣೆಗೆ ಅವಕಾಶ ಕೊಟ್ಟು ಲಂಚ ಪಡೆದ ಅರೋಪ ಹೊರಿಸಲಾಗಿದೆ. ಈ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಅಕ್ರಮ ಜಾಲ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಕಳ್ಳ ಸಾಗಣೆಗೆ ಸಹಕರಿಸುತ್ತಿದ್ದ ಅಧಿಕಾರಿಗಳ ಪಾಲಿಗೆ ಮುಳುವಾಗಲಿದೆ.

Recommended Video

      Team Indiaದಲ್ಲಿ ಗುರು-ಶಿಷ್ಯರ ಮೋಡಿ ನೋಡಿ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+