ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 3: ಸಿಡಿ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಆರೋಪದಿಂದ ಮುಕ್ತರಾಗಿ ಬಂದಮೇಲೆ ಸಚಿವ ಸ್ಥಾನ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ಯಡಿಯೂರಪ್ಪ ಅವರು ಅಂಗೀಕರಿಸಿದ್ದು, ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಪತ್ರ ರವಾನೆಯಾಗಿದೆ.
ಹಲವು ರಾಜ್ಯಗಳ ಚುನಾವಣೆ, ವಿಧಾನಸಭೆ ಅಧಿವೇಶನ ಹಿನ್ನೆಲೆ ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ಪಡೆಯುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು.
ಇದೀಗ ರಾಷ್ಟ್ರಪತಿ ಅಂಗಳಕ್ಕೆ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ!
ರಾಜ್ಯದ
ಜಲಸಂಪನ್ಮೂಲ
ಸಚಿವ
ರಮೇಶ್
ಜಾರಕಿಹೊಳಿಯವರು
ಯುವತಿಯೊಬ್ಬರಿಗೆ
ಕೆಪಿಟಿಸಿಎಲ್ನಲ್ಲಿ
ಉದ್ಯೋಗ
ಕೊಡಿಸುವುದಾಗಿ
ನಂಬಿಸಿ
ಅಕೆ
ಜೊತೆ
ಲೈಂಗಿಕ
ಸಂಪರ್ಕ
ಹೊಂದಿದ್ದಾರೆ.
ನಂತರ
ತಮ್ಮ
ಸಂಬಂಧದ
ಬಗ್ಗೆ
ಯಾರಿಗೂ
ತಿಳಿಸದಂತೆ
ಬೆದರಿಕೆ
ಹಾಕಿದ್ದಾರೆ
ಎಂದು
ನಾಗರಿಕ
ಹಕ್ಕುಗಳ
ಹೋರಾಟ
ಸಮಿತಿ
ಅಧ್ಯಕ್ಷ
ದಿನೇಶ್
ಕಲ್ಲಹಳ್ಳಿ
ಅವರು
ಬೆಂಗಳೂರಿನ
ಕಬ್ಬನ್
ಪಾರ್ಕ್
ಪೊಲೀಸ್
ಠಾಣೆಗೆ
ದೂರು
ನೀಡಿದ್ದರು.
ಆರೋಪಕ್ಕೆ
ಸಂಬಂಧಿಸಿದ
ರಾಸಲೀಲೆಯ
ವಿಡಿಯೋವನ್ನು
ಬಿಡುಗಡೆಗೊಳಿಸಿದ್ದು,
ರಾಜ್ಯ
ರಾಜಕಾರಣದಲ್ಲಿ
ಭಾರಿ
ಸದ್ದು
ಮಾಡುತ್ತಿದೆ.
ಪ್ರಕರಣ ಕುರಿತು ಸಮಗ್ರ ತನಿಖೆಯಾಗಲಿ ಎಂದು ಸಚಿವ ರಮೇಶ್ ಜಾರಕಿಹೊಳಿಯೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಒದಗಿಸಲು ವಿಚಾರಣೆಗೆ ಹಾಜರಾಗಲು ದಿನೇಶ್ ಕಲ್ಲಹಳ್ಳಿಗೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೋಟಿಸ್ ನೀಡಿದ್ದಾರೆ.
ಸಿಡಿ ಪ್ರಕರಣ ಹೊರಬರುತ್ತಿದ್ದಂತೆ ವಿರೋಧ ಪಕ್ಷ ಕಾಂಗ್ರೆಸ್, ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿತ್ತು.
"ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸತ್ಯಕ್ಕೆ ದೂರ"
ಆದರೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವ ಜಾರಕಿಹೊಳಿ, "ಸಿ.ಡಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಆ ಯುವತಿ ಯಾರೆಂದು ನನಗೆ ಗೊತ್ತಿಲ್ಲ. ದಿನೇಶ ಕಲ್ಲಹಳ್ಳಿ ಯಾರೋ ಗೊತ್ತಿಲ್ಲ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ರಾಜೀನಾಮೆ ಕೊಡುತ್ತೇನೆ" ಎಂದಿದ್ದರು.
Recommended Video
ಇದೀಗ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.