ಗೋವಾ ಹೆಸರಲ್ಲಿ ಏನಿದೆಯೋ ಅದು ಕಾರ್ಯರೂಪಕ್ಕೂ ಬರಲಿ
ಗೋವಾ ರಾಜ್ಯವೊಂದರ ಹೆಸರಲ್ಲಿ ಮಾತ್ರ ಗೋ ಎನ್ನುವ ಶಬ್ದವಿದೆ, ಗೋವಾ ನಾಮದಲ್ಲೇನಿದೆಯೋ ಅದು ಕಾರ್ಯರೂಪಕ್ಕೆ ಬರಲಿ.
ಪಣಜಿ, ಜ 16: ಗೋಸೇವೆ ಮಾಡಿದರೆ ದುರ್ಗೆ ಶಾಂತದುರ್ಗೆಯಾಗಿ ನೆಲೆ ನಿಲ್ಲುತ್ತಾಳೆ. ಅದೇ ಗೋವಿನ ಹಿಂಸೆಗೆ ತೊಡಗಿದರೆ ಚಾಮುಂಡೇಶ್ವರಿಯಾಗಿ ಸಂಹಾರ ಶಕ್ತಿಯಾಗಿ ನಿಲ್ಲುತ್ತಾಳೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಅಂಗವಾಗಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ (ಜ 16) ಮಾತನಾಡಿದ ರಾಘವೇಶ್ವರ ಶ್ರೀಗಳು, ಭಾರತದಲ್ಲಿ ಗೋವಾ ರಾಜ್ಯವೊಂದರ ಹೆಸರಲ್ಲಿ ಮಾತ್ರ ಗೋ ಎನ್ನುವ ಶಬ್ದವಿದೆ. (ರಾಘವೇಶ್ವರ ಶ್ರೀಗಳ ಅಭಿಲಾಷೆಗೆ ಗೋಕರ್ಣದಲ್ಲಿ ಮುನ್ನುಡಿ)
ಇಲ್ಲಿ ಹೆಸರಿನ ಅರ್ಧಭಾಗವೇ ಗೋವು. ಹೇಗೆ ಗೋವಾ ಶಬ್ದವು ಗೋವಿನಿಂದ ಆರಂಭವಾಗಿದೆಯೋ, ಹಾಗೆಯೇ ಜೀವನವೂ ಗೋವಿನಿಂದಲೇ ಆರಂಭವಾಗಿದೆ. ಹಾಗಾಗಿ ಗೋವಾ ನಾಮದಲ್ಲೇನಿದೆಯೋ ಅದು ಕಾರ್ಯರೂಪಕ್ಕೆ ಬರಲಿ, ಗೋವಾ ಗೋಮಾತೆಯ ನೆಲೆಯಾಗಲಿ ಎಂದು ಶ್ರೀಗಳು ಆಶಿಸಿದ್ದಾರೆ.

ಮಂಗಲ ಗೋಯಾತ್ರೆ ಎನ್ನುವುದು ಕೇವಲ ಯಾತ್ರೆಯಲ್ಲ, ಇದು ಚರಿತ್ರೆ. ಮಂಗಲಗೋಯಾತ್ರೆ ಒಂದು ದಿನದ ಉತ್ಸವ ಅಲ್ಲ, ಅನುದಿನದ ಆಂದೋಲನ. ಇದು ಸಂಕ್ರಾಂತಿಯ ಬದಲು ಗೋಕ್ರಾಂತಿಯನ್ನು ಬಯಸುವ ಯಾತ್ರೆ ಎಂದು ಶ್ರೀಗಳು ಹೇಳಿದರು.
ಭೂಮಾತೆ, ಗೋಮಾತೆ ಹಾಗೂ ಜನ್ಮ ನೀಡಿದ ಮಾತೆಯರ ತ್ರಿಕೋನ ಬಂಧ ಎಂದಿಗೂ ಮುರಿಯದಿರಲಿ. ಗೋಮಾತೆಯ ತ್ಯಾಜ್ಯ ಭೂಮಾತೆಗೆ ಪೂಜ್ಯವೇ ಆಗಿದೆ. ಅಂದು ಈ ತ್ರಿಕೋನ ಬಂಧದಲ್ಲಿ ನಮ್ಮ ದೇಶ ಸುರಕ್ಷಿತವಾಗಿತ್ತು. ಇಂದು ಆ ಬಗೆಯ ತ್ರಿಕೋನ ಬಂಧ ಸಡಿಲವಾಗುತ್ತಿದೆ.
ಗೋವನ್ನು ಭೂಮಾತೆಯಿಂದ ಟ್ರಾಕ್ಟರ್ ಎಂಬ ಯಾಂತ್ರಿಕತೆಯ ಹೆಸರಿನಲ್ಲಿ ದೂರಮಾಡಲಾಯಿತು, ಟ್ರಾಕ್ಟರ್ ನಿಂದ ಭೂಮಿ ಬಂಜರಾಯಿತು. ಗೋಮಾತೆಯ ವಧೆ ಹಾಗೂ ಭೂಮಾತೆಗೆ ವಿಷದಾನವನ್ನು ಮಾಡುತ್ತಿರುವ ನಾವು ವಿಷವನ್ನೇ ಉಣ್ಣುತ್ತಿದ್ದೇವೆ.
ಭೂಮಾತೆ, ಗೋಮಾತೆ ಹಾಗೂ ಹೆತ್ತಮಾತೆಯ ತ್ರಿಕೋನ ಬಂಧವನ್ನು ಸುರಕ್ಷಿತವಾಗಿ ಇರಿಸಲು ಈ 'ಮಂಗಲ ಗೋಯಾತ್ರೆ'ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ












Click it and Unblock the Notifications