ಅಯೋಧ್ಯೆ ಭೂಮಿಪೂಜೆ: ಅನಾಶ್ಯಕವಾಗಿ ವಿವಾದ ಮೈಗೆಳೆದುಕೊಂಡ ಶೋಭಾ ಕರಂದ್ಲಾಜೆ
ಬೆಂಗಳೂರು, ಆ 6: ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ, ಆಗಸ್ಟ್ ಐದರ ಅಭಿಜಿನ್ ಮಹೂರ್ತದಲ್ಲಿ ಶಾಸ್ತೋಕ್ತವಾಗಿ ಮುಕ್ತಾಯಗೊಂಡಿದೆ.
Recommended Video
ಭೂಮಿಪೂಜೆ ನಡೆಸಿದ ಪ್ರಧಾನಿ ಮೋದಿ, ಅಯೋಧ್ಯ ಚಳುವಳಿಯನ್ನು ಸ್ವಾತಂತ್ರ್ಯ ಚಳುವಳಿಗೆ ಹೋಲಿಸಿ, "ರಾಮ ಜನ್ಮಭೂಮಿಗೆ ದೊರೆತ ಸ್ವಾತಂತ್ರ್ಯ ಇದು" ಎಂದು ಬಣ್ಣಿಸಿದ್ದಾರೆ.
ಈ ನಡುವೆ, ಅಯೋಧ್ಯ ಭೂಮಿಪೂಜೆಯನ್ನು ಉಲ್ಲೇಖಿಸಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ಟ್ವೀಟ್ ಒಂದು ಭಾರೀ ಸಂಚಲನ ಮೂಡಿಸಿದೆ.
ಟ್ವೀಟ್ ನಲ್ಲಿ ಪ್ರಧಾನಿ ಮೋದಿ, ಪ್ರಭು ಶ್ರೀರಾಮಚಂದ್ರನ ಕೈಹಿಡಿದು, ರಾಮ ಮಂದಿರದ ಕಡೆಗೆ ಕರೆದುಕೊಂಡು ಹೋಗುವಂತೆ ಬಿಂಬಿಸುವ ಫೋಟೋಗೆ ಒಕ್ಕಣೆಯೊಂದನ್ನು ಬರೆದು ಶೋಭಾ ಟ್ವೀಟ್ ಮಾಡಿದ್ದರು.
|
ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ
"ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ" ಎನ್ನುವ ಒಕ್ಕಣೆಯನ್ನು ಬರೆದು, ಮೋದಿ, ರಾಮನ ಕೈಹಿಡಿದು ದೇವಾಲಯದ ಕಡೆಗೆ ಹೋಗುವ ಚಿತ್ರವನ್ನು ಶೋಭಾ ಬಳಸಿಕೊಂಡಿದ್ದರು. ಚಿತ್ರದಲ್ಲಿ ರಾಮನನ್ನು ಬಾಲಕನನ್ನಾಗಿ, ಮೋದಿಯನ್ನು ಹಿರಿಯರಂತೆ ತೋರಿಸಲಾಗಿದೆ.

ಹಿಂದುತ್ವದ ಪ್ರಕಾರ, ಮೋದಿ, ರಾಮನನ್ನು ಮುನ್ನಡೆಸುತ್ತಾರೆ
ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಟ್ವೀಟ್ ನಲ್ಲಿ, "ಪ್ರಧಾನಿ ಮೋದಿ, ಪ್ರಭು ರಾಮನಿಗಿಂತ ದೊಡ್ಡವರೇ" ಎಂದು ನೂರಾರು ಜನ ಪ್ರಶ್ನಿಸಿದ್ದಾರೆ. "ನಿಮ್ಮ ಹಿಂದುತ್ವದ ಪ್ರಕಾರ, ಮೋದಿ, ರಾಮನನ್ನು ಮುನ್ನಡೆಸುತ್ತಾರೆ. ರಾಮ, ಮೋದಿಯನ್ನು ಮುನ್ನಡೆಸುವುದಲ್ಲ. ರಾಜ ಯಾವತ್ತೂ ಮುಂದೆ ಸಾಗುತ್ತಾನೆ", "ಬಾಲಾವತರಾದ ರಾಮನನ್ನು ಬಿಂಬಿಸಿದ್ದರೂ, ಮೋದಿ, ರಾಮನ ಕೈಹಿಡಿದುಕೊಂಡು ಹೋಗುವಂತಹ ಫೋಟೋ ಹಾಕಿದ್ದು ತಪ್ಪು. ತಾಯಿ ಕೌಶಲ್ಯ, ತಂದೆ ದಶರಥ, ಗುರುಗಳಾದ ವಿಶ್ವಾಮಿತ್ರ/ವಶಿಷ್ಠರು ಮಾತ್ರ ರಾಮನನ್ನು ಮುನ್ನಡೆಸಬಹುದು" ಈ ರೀತಿಯ ಪ್ರತ್ಯುತ್ತರಗಳು, ಶೋಭಾ ಟ್ವೀಟಿಗೆ ಬಂದಿದೆ.

ಶ್ರೀರಾಮಚರಿತ ಮಾನಸದ ಯಾವ ಭಾಗವನ್ನು ಕಲಿತಿರುವಿರಿ
ಶೋಭಾ ಕರಂದ್ಲಾಜೆ ಟ್ವೀಟಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, "ಪ್ರೀತಿಯನ್ನು ಕಲಿತಿಲ್ಲ, ತ್ಯಾಗವನ್ನೂ ಕಲಿತಿಲ್ಲ, ಕರುಣೆ, ಪ್ರೀತಿ ಎನ್ನುವುದನ್ನೂ ಕಲಿತಿಲ್ಲ, ರಾಮನಿಗಿಂತಲೂ ನಾನೇ ಶ್ರೇಷ್ಠ ಎಂದು ತೋರಿಸಿ ಖುಷಿ ಪಡುವ ನೀವು, ಶ್ರೀರಾಮಚರಿತ ಮಾನಸದ ಯಾವ ಭಾಗವನ್ನು ಕಲಿತಿರುವಿರಿ"ಎಂದು ತರೂರ್ ಪ್ರಶ್ನಿಸಿದ್ದಾರೆ.

ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
ಶಶಿ ತರೂರ್ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಶೋಭಾ, "ಭಾರತೀಯ ಸಂಸ್ಕೃತಿ, ಮೌಲ್ಯದ ಅರಿವಿಲ್ಲದವರು ಇಂತಹ ಮಹತ್ವದ ಈ ಸಂದರ್ಭದಲ್ಲಿ ಈ ರೀತಿ ಬರೆಯುತ್ತಾರೆ. ರಾಮ್ ಲಲ್ಲಾ, ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಬಾಲಾವತಾರವನ್ನು ಪೂಜಿಸುತ್ತೇವೆ. ಈ ವಿಚಾರವನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ವಿನಿಯೋಗಿಸಿ" ಎಂದು ತಿರುಗೇಟು ನೀಡಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications