ರಾಜ್ಯೋತ್ಸವ ವಿಶೇಷ: ನುಡಿ ಕನ್ನಡ ಬ್ಲಾಗಿಗೆ ಸ್ವಾಗತ
ಬೆಂಗಳೂರು, ನ.04: ನವೆಂಬರ್ ತಿಂಗಳ ಹೊಸ್ತಿಲಲ್ಲಿ ಎಂದಿನಂತೆ ಮತ್ತೊಂದು ಸಂಭ್ರಮ ಮತ್ತು ಸಡಗರಕ್ಕೆ ಕರ್ನಾಟಕ ಸಜ್ಜಾಗುತ್ತಿದೆ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಇತಿಹಾಸವನ್ನು ಮೆಲುಕು ಹಾಕುತ್ತಾ ಸಂಭ್ರಮದ ಆಚರಣೆಗಳು ಮತ್ತು ಕನ್ನಡವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆಗಳು ಈ ತಿಂಗಳಿನಲ್ಲಿ ಹೆಚ್ಚಾಗಿ ನಡೆಯುತ್ತವೆ. ಈ ಸಂದರ್ಭದಲ್ಲಿ 'ನುಡಿ ಕನ್ನಡ' ಎಂಬ ಹೆಸರಿನ ಮಿಂಬಾಗಿಲ(ಬ್ಲಾಗ್) ಕುರಿತ ಪರಿಚಯಾತ್ಮಕ ಲೇಖನ ಇದಾಗಿದೆ.
ಕನ್ನಡದ ಸುತ್ತ ನಡೆಯುವ ಚರ್ಚೆಗಳನ್ನು ಸಾಹಿತ್ಯ-ಕಲೆ-ಮನೋರಂಜನೆ-ಅಭಿಮಾನ ಎಂಬ ಕೆಲವೇ ಕೆಲವು ವಲಯಗಳಿಗೆ ಸೀಮಿತಗೊಳಿಸದೇ ಮುಂದಿನ ಹಲವಾರು ಸವಾಲುಗಳಿಗೆ ಕನ್ನಡವನ್ನು ಸಜ್ಜುಗೊಳಿಸುವ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.
ಯಾಕೆಂದರೆ ಜಾಗತೀಕರಣದ ಈ ಹೊತ್ತಿನಲ್ಲಿ ನುಡಿಗಳು ಎದುರಿಸುತ್ತಿರುವ ಸವಾಲುಗಳು ಹಿಂದೆಲ್ಲಾ ಎದುರಾಗಿದ್ದ ಸವಾಲುಗಳಿಗಿಂತ ಬೇರೆಯೇ ತೆರನದ್ದಾಗಿವೆ. ಈ ನಿಟ್ಟಿನಲ್ಲಿ, ಇಂತದೇ ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತಿರುವ ಮುಂದುವರೆದ ನುಡಿಸಮುದಾಯಗಳು ಕೈಗೊಂಡಂತಹ ಕೆಲಸಗಳೇನು ಎಂಬ ಬಗ್ಗೆಯೂ ಕನ್ನಡ ಸಮಾಜದಲ್ಲಿ ಚರ್ಚೆ ನಡೆಯಬೇಕಿದೆ.

ನುಡಿಯನ್ನು ಕೇವಲ ಸಂಪರ್ಕ ಮಾಧ್ಯಮವಾಗಿ ನೋಡದೆ ಅದನ್ನು ಜನರ ಏಳಿಗೆಯ ಸಾಧನವನ್ನಾಗಿ ಮಾಡಿ ನುಡಿಯ ಸಾಧ್ಯತೆಗಳನ್ನು ಎಲ್ಲಾ ವಲಯಗಲ್ಲಿ ಹೆಚ್ಚಿಸಿರುವುದರಿಂದಲೇ ಹಲವಾರು ನಾಡುಗಳು ಇಂದು ಜಾಗತೀಕರಣವನ್ನು ಸಮರ್ಥವಾಗಿ ಎದುರಿಸುತ್ತಿವೆ. ತಮ್ಮ ನುಡಿಗೆ ಹೆಚ್ಚು ಬಲವನ್ನು ತುಂಬಿ, ತಮ್ಮ ನುಡಿಯ ಸುತ್ತ ಏಳಿಗೆಗೆ ಬೇಕಾಗಿರುವ ಎಲ್ಲಾ ಏರ್ಪಾಡನ್ನು ಕಟ್ಟಿಕೊಂಡಿರುವುದರಿಂದಲೇ ಆ ನಾಡುಗಳು ಮೇಲುಗೈ ಹೊಂದಲು ಸಾಧ್ಯವಾಗಿದೆ.
ಕನ್ನಡ ಸಮಾಜವೂ ಕೂಡ ಕನ್ನಡವನ್ನು ಆ ಮಟ್ಟಕ್ಕೆ ಎತ್ತರಿಸಲು ಸಾಧ್ಯವಿದೆ. ಆದರೆ ಅದು ಸಾಧ್ಯವಾಗಬೇಕೆಂದರೆ ಕನ್ನಡದ ಕೆಲವು ಮೂಲಭೂತ ವಿಷಯಗಳ ಬಗ್ಗೆ ಚರ್ಚೆ ತುಂಬಾ ಮುಖ್ಯವಾಗಿದೆ. ಕನ್ನಡದ ನಿಜವಾದ ಗುರುತು-ಲಕ್ಷಣಗಳನ್ನು ತಿಳಿಯದೆಯೇ, ಕನ್ನಡವನ್ನು ನಾಳೆಗಳಿಗೆ ಸಜ್ಜುಗೊಳಿಸುವ ಈ ಕೆಲಸ ಗೆಲುವನ್ನು ಕಾಣುವುದಿಲ್ಲ. ಹಲವಾರು ಮುಂದಿವರೆದ ನುಡಿಸಮುದಾಯಗಳಲ್ಲಿ, ತಮ್ಮ ನುಡಿಯ ನಿಜಸ್ವರೂಪದ ಬಗೆಗಿನ ಚರ್ಚೆಗಳು ಮುಖ್ಯವಾಹಿನಿಯ ಚರ್ಚೆಗಳಲ್ಲೊಂದು ಎಂಬುದನ್ನು ನಾವು ಗಮನಿಸಬೇಕಾಗಿದೆ.
ಆ ನಿಟ್ಟಿನಲ್ಲಿ ಒಂದು ಅರಿವಿನ ಕಣಜವನ್ನು ಒದಗಿಸುವ ಪ್ರಯತ್ನವೇ - "ನುಡಿಕನ್ನಡ" ಮಿಂಬಾಗಿಲು (https://nudikannada.wordpress.com).
ಕನ್ನಡದ ನಿಜ ಸ್ವರೂಪದ ಬಗ್ಗೆ, ಕನ್ನಡ ಮತ್ತು ಬೇರೆ ನುಡಿಗಳ ನಡುವಿನ ಸಂಬಂಧದ ಬಗ್ಗೆ, 'ಕನ್ನಡ ನುಡಿ' ಕುರಿತು ಸಂಶೋಧನೆಗಳು ಹೊರಗೆಡವಿರುವ ಸತ್ಯಗಳ ಬಗ್ಗೆ, ಕನ್ನಡದ ಸುತ್ತ ಇರುವ ನಂಬಿಕೆಗಳ ಬಗ್ಗೆ, ಕನ್ನಡ ಎದುರಿಸುತ್ತಿರುವ ತೊಡಕುಗಳ ಬಗ್ಗೆ, ಕನ್ನಡದ ಇತಿಹಾಸದ ಬಗ್ಗೆ, ಮುಂದುವರೆದ ನಾಡುಗಳು ತಮ್ಮ ನುಡಿಗಳಿಗೆ ಹೇಗೆ ಕಸುವನ್ನು ತುಂಬಿದವು ಎಂಬುದರ ಬಗ್ಗೆ, ಜಗತ್ತಿನ ಎಲ್ಲಾ ಕನ್ನಡಿಗರ ಮುಂದಿಡುವ ಉದ್ದೇಶ ಈ ಮಿಂಬಾಗಿಲಿನದು (web portal). ಕನ್ನಡಿಗರ ನಾಳೆಗಳನ್ನು ಕಟ್ಟಲಿಕ್ಕೆ ಬೇಕಾದ ಅಡಿಪಾಯದ ಅರಿಮೆಯನ್ನು ಈ ನುಡಿಕನ್ನಡ ಮಿಂಬಾಗಿಲು ಒದಗಿಸಬೇಕು ಮತ್ತು ಈ ಮಿಂಬಾಗಿಲಿನಲ್ಲಿ ಮೂಡಿಬರುವ ಬರಹಗಳಿಂದ ಹೆಚ್ಚು ಹೆಚ್ಚು ಕನ್ನಡಿಗರು ಕನ್ನಡದ ನಿಜಸ್ವರೂಪದ ಬಗ್ಗೆ ಅರಿವುಹೊಂದುತ್ತಾ ಕನ್ನಡವನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗುವರು ಎಂಬ ಆಶಯ ನಮ್ಮದು.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications