ಗಗನಕ್ಕೇರಿದ ಚಿಕನ್ ದರ: ತರಕಾರಿ, ಹಣ್ಣುಗಳೂ ಕೂಡ ದುಬಾರಿ
ಬೆಂಗಳೂರು, ಜೂನ್ 14: ಬೇಸಿಗೆ ಕಳೆದು ಮಳೆಗಾಲ ಆರಂಭವಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆ ಕಾಲದಲ್ಲಿ ಮಾಂಸಾಹಾರ ಸೇವನೆ ಕಡಿಮೆ ಮಾಡಿದ್ದ ಜನ, ಮಳೆಗಾಲದಲ್ಲಿ ಚಿಕನ್, ಮಟನ್ ತಿನ್ನುವ ಬಗ್ಗೆ ಯೋಚಿಸಿದ್ದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹೌದು, ರಾಜ್ಯಾದ್ಯಂತ ಚಿಕನ್, ಮಟನ್ ದರ ಭಾರಿ ಏರಿಕೆಯಾಗಿದ್ದು, ಮೊಟ್ಟೆ ಕೂಡ ದುಬಾರಿಯಾಗಿದೆ. ಒಂದು ತಿಂಗಳ ಹಿಂದೆ ಒಂದು ಕೆಜಿ ರೆಡಿ ಚಿಕನ್ 160-180 ರೂಪಾಯಿ ಇದ್ದರೆ, ಸದ್ಯ ಒಂದು ಕೆಜಿ ರೆಡಿ ಚಿಕನ್ ದರ 300 ರೂಪಾಯಿ ಆಸುಪಾಸಿಗೆ ಬಂದು ನಿಂತಿದೆ. 500-600 ರೂಪಾಯಿ ಇದ್ದ ಮಟನ್ ಬೆಲೆ ಸದ್ಯ 700-800 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಮೊಟ್ಟೆ ಬೆಲೆ ಕೂಡ 5.5 ರೂಪಾಯಿಗಳಿಂದ ಸದ್ಯ 7-8 ರುಪಾಯಿಗೆ ಹೆಚ್ಚಳವಾಗಿದೆ.

ದರ ಹೆಚ್ಚಳಕ್ಕೆ ಕಾರಣವೇನು?
ಬೇಸಿಗೆ ಕಾಲದಲ್ಲಿ ಚಿಕನ್ಗೆ ಬೇಡಿಕೆ ಕಡಿಮೆಯಾದ ಕಾರಣ ಬೆಲೆ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ಕೋಳಿ ಸಾಕಾಣಿಕೆದಾರರು, ಉದ್ಯಮಿಗಳು ಸಾಕಾಣಿಕೆಯನ್ನು ಕಡಿಮೆ ಮಾಡಿದ್ದರು. ಮೇವಿನ ಕೊರತೆಯಿಂದಾಗಿ ಕುರಿ, ಮೇಕೆ ಸಾಕಾಣಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಆದರೆ, ಈಗ ಮದುವೆ ಸೀಜನ್ ಕೂಡ ಶುರುವಾಗಿದ್ದು, ಜಾತ್ರೆಗಳು ಕೂಡ ನಡೆಯುತ್ತಿರುವ ಕಾರಣ ಚಿಕನ್, ಮಟನ್ಗೆ ಭಾರಿ ಬೇಡಿಕೆ ಉಂಟಾಗಿದೆ.
ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆ ಇದ್ದು ಬೇಡಿಕೆ ದಿಢೀರ್ ಎಂದು ಹೆಚ್ಚಾದ ಕಾರಣ ಮಾಂಸದ ದರ ಭಾರಿ ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ಕೂಡ ನಿಷೇಧ ಇರುವ ಕಾರಣ, ಮೀನು ಪೂರೈಕೆ ಕಡಿಮೆಯಾಗಿದ್ದು, ಮಾಂಸಕ್ಕೆ ಬೇಡಿಕೆ ಹೆಚ್ಚಾಗಲು ಕಾರಣಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ, ಹಣ್ಣು ಬೆಲೆಯೂ ದುಬಾರಿ
ಇನ್ನು ತರಕಾರಿ ಹಣ್ಣುಗಳ ಬೆಲೆಯಲ್ಲೂ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಯಾವುದೇ ತರಕಾರಿ ಬೆಲೆ ಕೇಳಿದರೂ 50-100 ರೂಪಾಯಿ ಆಗಿದೆ. ಸದ್ಯ ಈರುಳ್ಳಿ ಮಾತ್ರ 100 ರೂಪಾಯಿಗೆ 5-6 ಕೆಜಿ ಸಿಗುತ್ತಿದೆ. ತೀವ್ರ ಬಿಸಿಲು ಅದಾದ ನಂತರ ಬಂದ ಮಳೆಯಿಂದಾಗಿ ಸೊಪ್ಪು, ತರಕಾರಿ ಬೆಳೆಗಳು ನಾಶವಾಗಿದೆ, ಮದುವೆ ಸೀಸನ್ ಬೇರೆ ಶುರುವಾಗಿದ್ದು ತರಕಾರಿಗೆ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಒಂದು ಕೆಜಿ ಹುರುಳಿಕಾಯಿ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಮೈಸೂರು ಬದನೆ 60-80 ರೂಪಾಯಿ ಆಗಿದೆ. ಕ್ಯಾರೆಟ್ 60 ರೂಪಾಯಿ, ನುಗ್ಗೆಕಾಯಿ 120 ರೂಪಾಯಿ, ಟೊಮ್ಯಾಟೊ 30-40 ರೂಪಾಯಿ, ಹಸಿರು ಮೆಣಸಿನಕಾಯಿ 40-50 ರುಪಾಯಿ, ಕ್ಯಾಪ್ಸಿಕಂ 50-60 ರೂಪಾಯಿ, ಗೋರಿಕಾಯಿ 45-55 ರೂಪಾಯಿ, ಬೆಂಡೆಕಾಯಿ 45-50 ರುಪಾಯಿಗೆ ಮಾರಾಟವಾಗುತ್ತಿದೆ. ತರಕಾರಿ ಮಾತ್ರವಲ್ಲದೆ ಸೊಪ್ಪುಗಳ ದರ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಕೊತ್ತಮರಿ, ದಂಟು, ಅರಿವೆ, ಪಾಲಕ್, ಮೆಂತ್ಯ ಸೊಪ್ಪಿನ ದರ ಭಾರಿ ಏರಿಕೆಯಾಗಿದೆ.
ಹಣ್ಣಿನ ಬೆಲೆಗಳಲ್ಲಿ ಕೂಡ ಏರಿಕೆ ಕಂಡಿದ್ದು ಗ್ರಾಹಕರಿಗೆ ಹೊರೆಯಾಗಿದೆ. ಸಪೋಟಾ 90 ರೂಪಯಿ, ದಾಳಿಂಬೆ 130, ಅನಾನಸ್ 90 ರು., ಪಪ್ಪಾಯ 60 ರುಪಾಯಿ, ಮೋಸಂಬಿ 60, ದ್ರಾಕ್ಷಿ 80 ರೂಪಾಯಿ, ಸೇಬು 220 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ








Click it and Unblock the Notifications