ಡಿ.22ರಂದು ಕರ್ನಾಟಕಕ್ಕೆ ಪ್ರಣಬ್ ಮುಖರ್ಜಿ ಆಗಮನ
ಬೆಂಗಳೂರು, ಡಿಸೆಂಬರ್ 17 : ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 22ರಂದು ರಾಜ್ಯಕ್ಕೆ ಆಗಮಿಸುವ ಅವರು ಕಲಬುರಗಿ ಮತ್ತು ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಣಬ್
ಮುಖರ್ಜಿ
ಅವರ
ಪ್ರವಾಸದ
ವೇಳಾಪಟ್ಟಿಯನ್ನು
ರಾಷ್ಟ್ರಪತಿ
ಭವನ
ಬುಧವಾರ
ಬಿಡುಗಡೆ
ಮಾಡಿದೆ.
ಡಿಸೆಂಬರ್
22ರಂದು
ಬೆಳಗ್ಗೆ
ಬೀದರ್ಗೆ
ಆಗಮಿಸುವ
ರಾಷ್ಟ್ರಪತಿಗಳು
ಅಲ್ಲಿಂದ
ಕಲಬುರಗಿಗೆ
ತೆರಳಿ,
ಕೇಂದ್ರೀಯ
ವಿಶ್ವವಿದ್ಯಾಲಯದ
ಎರಡನೇ
ಘಟಿಕೋತ್ಸವದಲ್ಲಿ
ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 22ರ ಮಂಗಳವಾರ ಸಂಜೆ ಬೀದರ್ನಿಂದ ಬೆಂಗಳೂರಿಗೆ ಆಗಮಿಸುವ ಪ್ರಣಬ್ ಮುಖರ್ಜಿ ಅವರು, ನಿಮ್ಹಾನ್ಸ್ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಡಿಸೆಂಬರ್ 23ರ ಬುಧವಾರ ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯ 150ನೇ ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಮಧ್ಯಾಹ್ನ ಕಿದ್ವಾಯಿ ಸಂಸ್ಥೆಯಲ್ಲಿ ಕ್ಯಾನ್ಸರ್ ಸಂಸ್ಥೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಬಳಿಕ ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್ಗೆ ತೆರಳಲಿದ್ದಾರೆ.
ಜನವರಿ 3ರಂದು ಮೋದಿ ಭೇಟಿ : ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3ರಂದು ಕರ್ನಾಟಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ನಲ್ಲಿನ 610 ಎಕರೆ ಪ್ರದೇಶದಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಹೆಲಿಕಾಪ್ಟರ್ ಘಟಕ ನಿರ್ಮಾಣ ಮಾಡಲಿದ್ದು, ಇದರ ಶಂಕುಸ್ಥಾಪನೆಗೆ ಮೋದಿ ಆಗಮಿಸುವ ಸಾಧ್ಯತೆ ಇದೆ. [ಗುಬ್ಬಿಯಲ್ಲಿ ಹೆಲಿಕಾಪ್ಟರ್ ಘಟಕ ನಿರ್ಮಾಣ]