ಪತ್ರಿಕೆ ಸೋರಿಕೆ, ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ
ಬೆಂಗಳೂರು, ಏಪ್ರಿಲ್ 20 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಂಧಿತರಾದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಿಐಡಿ ಹೇಳಿದೆ. ಇದೇ ಮೊದಲು ಬಾರಿಗೆ ಕೋಕಾ ಕಾಯ್ದೆಯಡಿ ಸಿಐಡಿ ಪ್ರಕರಣ ದಾಖಲು ಮಾಡುತ್ತಿದೆ.
ಬೆಂಗಳೂರಿನಲ್ಲಿ
ಬುಧವಾರ
ಪತ್ರಿಕಾಗೋಷ್ಠಿ
ನಡೆಸಿದ
ಸಿಐಡಿ
ಡಿಜಿಪಿ
ಕಿಶೋರ್
ಚಂದ್ರ
ಮತ್ತು
ಎಡಿಜಿಪಿ
ಪ್ರತಾಪ್
ರೆಡ್ಡಿ
ಅವರು,
ಪ್ರಶ್ನೆ
ಪತ್ರಿಕೆ
ಸೋರಿಕೆ
ಹಗರಣದ
ಬಗ್ಗೆ
ನಡೆಸಿರುವ
ತನಿಖೆಯ
ಮಾಹಿತಿಯನ್ನು
ನೀಡಿದರು.
'ಇದುವರೆಗೂ
ಪ್ರಕರಣಕ್ಕೆ
ಸಂಬಂಧಿಸಿದಂತೆ
10
ಆರೋಪಿಗಳನ್ನು
ಬಂಧಿಸಲಾಗಿದ್ದು,
ಎಲ್ಲರೂ
ನ್ಯಾಯಾಂಗ
ಬಂಧನದಲ್ಲಿದ್ದಾರೆ'
ಎಂದು
ಕಿಶೋರ್
ಚಂದ್ರ
ಹೇಳಿದರು.
[ಪಿಯುಸಿ
ಪತ್ರಿಕೆ
ಉತ್ತರ
ಬರೆದು
ಮಾರುತ್ತಿದ್ದ
ಇಬ್ಬರ
ಬಂಧನ]
'ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸಿಐಡಿ ಇದೇ ಮೊದಲ ಬಾರಿಗೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದೆ' ಎಂದು ಕಿಶೋರ್ ಚಂದ್ರ ತಿಳಿಸಿದರು. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
*
ಕೋಕಾ
ಕಾಯ್ದೆಯಡಿ
ಪ್ರಕರಣ
ದಾಖಲಿಸಿದರೆ
ಆರೋಪಿಗಳಿಗೆ
1
ವರ್ಷಗಳ
ಕಾಲ
ಜಾಮೀನು
ಸಿಗುವುದಿಲ್ಲ
[ಲೀಕಾಗಿದ್ದ
ಕೆಮಿಸ್ಟ್ರಿ
ಪಿಯು
ಪ್ರಶ್ನೆ
ಪತ್ರಿಕೆ
ಬೆಲೆ
10
ಲಕ್ಷ
ರು!]
*
ವಿಶೇಷ
ಕೋರ್ಟ್ನಲ್ಲಿ
ಆರೋಪಿಗಳ
ವಿಚಾರಣೆ
ನಡೆಯಲಿದೆ
*
ಆರೋಪಿಗಳಿಗೆ
ಜಾಮೀನು
ಸಿಗದಿರುವುದರಿಂದ
ತನಿಖಾಧಿಕಾರಿಗಳಿಗೆ
ವಿಚಾರಣೆಗೆ
ಹೆಚ್ಚಿನ
ಸಮಯ
ಸಿಗಲಿದೆ.
ಬಂಧಿತರಾದವರು
*
ಬೆಂಗಳೂರಿನ
ಸದಾಶಿವ
ನಗರದ
ಪೂರ್ಣಪ್ರಜ್ಞಾ
ಕಾಲೇಜಿನ
ದೈಹಿಕ
ಶಿಕ್ಷಕ
ಅನಿಲ್
*
ಬೆಂಗಳೂರಿನ
ಮತ್ತಿಕೆರೆ
ಸರ್ಕಾರಿ
ಪ್ರೌಢ
ಶಾಲೆಯ
ದೈಹಿಕ
ಶಿಕ್ಷಕ
ಸತೀಶ್
*
ಬೆಂಗಳೂರಿನ
ನಾಗರಬಾವಿಯ
ಆದರ್ಶನಗರದ
ಮಂಜುನಾಥ್
*
ಬೆಂಗಳೂರಿನ
ಶ್ರೀರಾಮಪುರದ
ಓಬಳರಾಜು
*
ಬೆಂಗಳೂರಿನ
ಮಲ್ಲೇಶ್ವರದ
ನಿವಾಸಿ
ರುದ್ರಪ್ಪ
*
ಮೈಸೂರಿನ
ಕುವೆಂಪು
ನಗರದ
ಕೆ.ನಾಗೇಂದ್ರ
*
ಮೈಸೂರಿನ
ಶಾರದಾ
ನಗರದ
ತಿಮ್ಮೇಗೌಡ
*
ಲೋಕೊಪಯೋಗಿ
ಇಲಾಖೆ
ಜೆಇ
ಕೆ.ಎಸ್
ರಂಗನಾಥ್
*
ರಿಯಲ್
ಎಸ್ಟೇಟ್
ಉದ್ಯಮಿ
ಬಿ.ಅನಿಲ್
ಕುಮಾರ್
*
ಟ್ಯುಟೋರಿಯಲ್
ಮಾಲೀಕ
ಕೆ.ಎಮ್.ಮುರಳೀಧರ್