Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಶೇ.50ರಷ್ಟು ಮಂದಿಗೆ ಕೊರೊನಾ ಲಸಿಕೆಯ ಮೊದಲ ಡೋಸ್

ಬೆಂಗಳೂರು, ಆಗಸ್ಟ್ 09: ಕರ್ನಾಟಕದಲ್ಲಿ ಶೇ.50ರಷ್ಟು ಮಂದಿ ಭಾನುವಾರ ಮಧ್ಯಾಹ್ನದ ವೇಳೆಗೆ ಕನಿಷ್ಠ 1 ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವರ್ಷದ ಅಂತ್ಯದ ವೇಳೆಗೆ ನಿರೀಕ್ಷೆಯಂತೆ ರಾಜ್ಯವು ತನ್ನ ಲಸಿಕಾ ಕಾರ್ಯಕ್ರಮವನ್ನು ಪೂರ್ಣಗೊಳಿಸುವುದಿಲ್ಲ ಎಂದು ಈಗ ಲಭ್ಯವಾಗಿರುವ ಡೇಟಾಗಳು ಹೇಳುತ್ತವೆ. ಈ ಮೈಲಿಗಲ್ಲು ಸಾಧಿಸಲು ಕರ್ನಾಟಕಕ್ಕೆ ಸರಿಸುಮಾರು ಆರೂವರೆ ತಿಂಗಳು ಬೇಕಾಯಿತು, ಹೆಚ್ಚುವರಿಯಾಗಿ , ಮೊದಲ ಡೋಸ್ ಕವರೇಜ್‌ನ್ನು ಒಂದು ಶೇಕಡಾವಾರು ಪಾಯಿಂಟ್ ಹೆಚ್ಚಿಸಲು ರಾಜ್ಯವು 2-4 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಎಲ್ಲಾ ಕಡೆಯೂ ಲಸಿಕೆ ಸರಬರಾಜು ಕಡಿಮೆ ಇರುವ ಕಾರಣ ಹೆಚ್ಚೆಚ್ಚು ಮಂದಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಭಾನುವಾರದಷ್ಟೊತ್ತಿಗೆ ಕರ್ನಾಟಕದಲ್ಲಿ 3.29 ಕೋಟಿ ಡೋಸ್ ನೀಡಿದೆ, ಅದರಲ್ಲಿ 2.57 ಕೋಟಿ ಡೋಸ್ ಮೊದಲ ಡೋಸ್‌ಗಳಾಗಿವೆ.

 Over 50% Of Karnataka’s Target Population Received At First Dose Of A Covid-19 Vaccine

ಕಲಬುರಗಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮೊದಲ ಹಾಗೂ ಎರಡನೇ ಡೋಸ್ ನೀಡಲಾಗಿದೆ. ಕೇವಲ 19 ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ.9ರಷ್ಟು ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.

ಸುಮಾರು ಶೇ.80ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ನಾವು ಅತ್ಯುತ್ತಮ ಸ್ಥಾನದಲ್ಲಿದ್ದ ಎಂದು ನಾವು ಭಾವಿಸುತ್ತೇವೆ, ಸಧ್ಯ ಶೇ. 21.05 ರಷ್ಟಿರುವ ಎರಡನೇ ಡೋಸ್ ಲಸಿಕೆ ನೀಡುವ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ.40-50ರಷ್ಟಕ್ಕೆ ಹೆಚ್ಚಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗ ಗುಪ್ತಾ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ರೂಪಾಂತರಿಯಿಂದ 20 ಲಕ್ಷ ಪ್ರಕರಣಗಳು ದಾಖಲಾಗಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಸಮಗ್ರ ಮುನ್ಸೂಚನೆಯನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ 972 ಸನ್ನಿವೇಶಗಳನ್ನು ವಿಶ್ಲೇಷಿಸುವ ಮೂಲಕ ಕರ್ನಾಟಕದಲ್ಲಿ ಕೋವಿಡ್ ಮೂರನೇ ತರಂಗವನ್ನು ಊಹಿಸಲು ಗಣಿತದ ಮಾದರಿಯನ್ನು ಬಳಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಳಿತ ಮುಂದುವರಿದಿದೆ. ರಾಜ್ಯದಲ್ಲಿ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡು ಬಂದಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.09ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.25ರಷ್ಟಿದೆ.

ರಾಜ್ಯದಲ್ಲಿ ಒಂದು ದಿನದಲ್ಲಿ 1598 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1914 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 20 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36793 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಲಸಿಕೆ ವಿತರಣೆ ಒಂದೇ ವೇಗದಲ್ಲಿ ಮುಂದುವರಿದರೆ ಮತ್ತು ಒಂದು ಹೊಸ ರೂಪಾಂತರವು ಹೊರಹೊಮ್ಮಿದರೆ, ರಾಜ್ಯವು ಸಡಿಲವಾದ ಸಾಮಾಜಿಕ ಅಂತರ ಪಾಲನೆ ಮಾನದಂಡಗಳೊಂದಿಗೆ 1.44 ಲಕ್ಷದಿಂದ 2.07 ಲಕ್ಷ ಪ್ರಕರಣಗಳನ್ನು ನೋಡಬಹುದು. ಆದಾಗ್ಯೂ, ಸಾಮಾಜಿಕ ದೂರವು ಉತ್ತಮವಾಗಿದ್ದರೆ, ಅಕ್ಟೋಬರ್ 13 ರ ವೇಳೆಗೆ ಕೇವಲ 36,000 ಪ್ರಕರಣಗಳು ಮತ್ತು ಅಕ್ಟೋಬರ್ ಅಂತ್ಯದವರೆಗೆ ಸುಮಾರು 36,000 ರಿಂದ 48,000 ಪ್ರಕರಣಗಳು ಇರುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಅಧ್ಯಯನವು ಆಗಸ್ಟ್‌ನಲ್ಲಿ ಹೊಸ ರೂಪಾಂತರವು ಹೊರಹೊಮ್ಮಿದರೆ, ರಾಜ್ಯದಲ್ಲಿ ಆಗಸ್ಟ್‌ನಲ್ಲಿ 4.51 ಲಕ್ಷ ಪ್ರಕರಣಗಳು ಮತ್ತು ಆಗಸ್ಟ್ 22 ಮತ್ತು ಸೆಪ್ಟೆಂಬರ್ 10 ರ ನಡುವೆ ಸುಮಾರು 20 ಲಕ್ಷ ಪ್ರಕರಣಗಳನ್ನು ನೋಡಬಹುದು.

ದುರ್ಬಲ ಜನಸಂಖ್ಯೆಯಲ್ಲಿ, ವಿಶೇಷವಾಗಿ 0 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕುಗಳು 12 ಪಟ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಮೂರನೆಯ ಅಲೆಯನ್ನು ತಗ್ಗಿಸಲು ಉತ್ತಮ ಸಾಮಾಜಿಕ ದೂರ, ಹೊಸ ರೂಪಾಂತರದ ಉಲ್ಬಣ ಮತ್ತು ಲಸಿಕೆ ಮುಖ್ಯ ಎಂದು ಅಧ್ಯಯನವು ಕಂಡುಹಿಡಿದಿದೆ.
ಮುಂದಿನ 3 ರಿಂದ ಆರು ತಿಂಗಳುಗಳವರೆಗೆ ನಾವು ಜಾಗರೂಕರಾಗಿರಬೇಕು. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಟೆಸ್ಟಿಂಗ್ ಮುಖ್ಯವಾಗಿದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+