Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ
Kalyana Karnataka Train: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ರೈಲುಗಳ ಸಮಸ್ಯೆ ತೀವ್ರವಾಗಿ ಮುಂದುವರಿದಿದೆ. ಕರ್ನಾಟಕದವರೇ ಆಗಿರುವ ವಿ ಸೋಮಣ್ಣ ಅವರು, ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರಾಗಿದ್ದರೂ ಈ ಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಭಾಗದ ರೈಲು ಸಮಸ್ಯೆಯ ಬಗ್ಗೆ ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಎನ್ನುವವರು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು ಹಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಬೇಕಾದಷ್ಟು ರೈಲು ಸೇವೆ ಸಿಗದೆ ಜನ ನಿತ್ಯ ಪರದಾಡುವ ಪರಿಸ್ಥಿತಿ ಇದೆ. ಉಸಿರುಗಟ್ಟಿಸುವಂತಹ, ನರಕದಂತಹ ಜನರಲ್ ಕೋಚ್ ನನಗೆ ಸಹಿಸಲು ಆಗಲೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ತಮಗೂ ಅದೇ ಅನುಭವ ಆಗಿದೆ ಎಂದು ಹಂಚಿಕೊಂಡಿದ್ದಾರೆ.

Opinion: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು
ಶಂಕರ ಪಾಟೀಲ ಎನ್ನುವವರು 67 ವರ್ಷಗಳಿಂದ ಇಲ್ಲೇ ಕಲಬುರಗಿ ಯಾದಗಿರಿ ಜಿಲ್ಲಾ ವಾಸಿಯಾಗಿರುವ, ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿರುವ ನನಗೆ ಇದೇನು ಹೊಸದಲ್ಲ. ಬಡತನ, ಹಸಿವು, ನಿರುದ್ಯೋಗ ಇಲ್ಲಿ ಸಾಮಾನ್ಯ ಸಂಗತಿ. ಇವತ್ತು ಅವರಿಗೆ ವಲಸೆ ಹೋಗುವುದು ಅನಿವಾರ್ಯ. ನಾವೆಲ್ಲಾ ಪ್ರಶ್ನೆ ಕೇಳಬೇಕಾಗಿರುವದು ನಮ್ಮನ್ನು ಆಳುವವರನ್ನು ಮತ್ತು ವಿರೋಧ ಪಕ್ಷದವರನ್ನು. ಸ್ವಾತಂತ್ರ ದೊರಕಿ 78 ವರುಷ ಕಳೆದ ಮೇಲೆ ಕೂಡ ಇವರ ಈ ಸ್ಥಿತಿಗೆ ಕಾರಣ ಯಾರು? ಈ ಭಾಗದ ಬುದ್ಧಿಜೀವಿಗಳಾದ ನಾವು ಏನು ಮಾಡುತ್ತಿದ್ದೇವೆ ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಲ್ಲರೂ ಆತ್ಮವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದಿದ್ದಾರೆ.
ಚಂದ್ರ ಮೌಳಿ ಎಂ ಎನ್ನುವವರು ಕಲಬುರಗಿಗೆ ವಿಪರೀತ ಜನ ಪ್ರಯಾಣಿಕರು ಯಾವಾಗಲೂ ಸೀಟ್ ಸಿಗೋದು ತುಂಬ ಕಷ್ಟ ಎಂದಿದ್ದಾರೆ. ಇದಕ್ಕೆ ರೈಲುಗಳ ಸಂಖ್ಯೆ ಕಡಿಮೆ.. ಪ್ರಯಾಣಿಕರ ಜಾಸ್ತಿ ಎಂದು ಸಿದ್ದು ಅವರು ಹೇಳಿದ್ದಾರೆ.
ಲಕ್ಷ್ಮೀಪುತ್ರ ಕಂಬಾರ ಎನ್ನುವವರು, ಕಲಬುರಗಿ ಸಂಸದರು ಎಚ್ಚರವಾಗಿದ್ದೀರಾ ಅಥವಾ ಕಾಣೆಯಾಗಿದ್ದೀರಾ ನೋಡಿ ಕಲಬುರಗಿ ಜನತೆಯ ಗೋಳು ಕೇಳಿಸಿಕೊಳ್ಳಲಿ ಎಂದಿದ್ದಾರೆ.
ಪ್ರಶಾಂತ್ ಎನ್ನುವವರು ಗುರುವೇ ಅಸಹಾಯಕತೆ ಏನಿಲ್ಲ. ನಮಗೆ ಹೋಗೋಕೆ ಬರೋಕೆ ಟ್ರೈನ್ ಇಲ್ಲ. ಇದನ್ನ ಕೇಳೋರು ಯಾರು ಇಲ್ಲ. ಮತದಾರ ಓಟು ಹಾಕಿ ಬರೋಕೆ ಹೋಗೋದು ಇದೆ ರೀತಿ ನೇ. ನಮಗಾಗಿ ಒಂದ್ ಟ್ರೈನ್ ಬಿಡಿ ನಾವ್ ಜಾಸ್ತಿ ಜನ ಇದ್ದೀವಿ ಅಂತ ಕೇಳೋರು ಯಾರೂ ಇಲ್ಲ.. 18ವರ್ಷದಿಂದ ನಾನು ಇದನ್ನೇ ನೋಡ್ತಿದೀನಿ. ರಾಜಕೀಯದಲ್ಲಿ ಇರೋರು ಯಾವೊಬ್ಬ ನಾಯಕನೂ ಇದರ ಬಗ್ಗೆ ಮಾತಾಡೋಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ವಿಜಯ್ ಹೆಮ್ಮಿಗೆ ಎನ್ನುವವರು, ಸರ್ಕಾರಗಳು ಅಭಿವೃದ್ಧಿ ಮಾಡಬೇಕೆಂದರೆ, ಉತ್ತಮರನ್ನು ಆರಿಸಬೇಕು. ಭ್ರಷ್ಟಾಚಾರ ಇರಬಾರದು, ವೇಗದಲ್ಲಿ ಕೆಲಸವಾಗಬೇಕು. ಮುಖ್ಯ ಜನ ಸುಶಿಕ್ಷಿತರಾಗಬೇಕು, ಪ್ರಶ್ನೆ ಮಾಡುವಂತಿರಬೇಕು. ಆದರೆ ಸೂರ್ಯ ಚಂದ್ರ ಇರುವವರೆಗೂ ಎಲ್ಲವೂ ಅಸಾಧ್ಯ ಎಂದು ಹೇಳಿದ್ದಾರೆ.
-
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ













Click it and Unblock the Notifications