ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ನಿರ್ಣಯ!
ಬೆಂಗಳೂರು, ಜ. 23 : 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ. 'ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯ' ಎಂಬ ಒಂದೇ ನಿರ್ಣಯವನ್ನು ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗುತ್ತದೆ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ
ಶುಕ್ರವಾರ
ಪತ್ರಿಕಾಗೋಷ್ಠಿ
ನಡೆಸಿದ
ಕನ್ನಡ
ಸಾಹಿತ್ಯ
ಪರಿಷತ್
ಅಧ್ಯಕ್ಷ
ಪುಂಡಲೀಕ
ಹಾಲಂಬಿ
ಅವರು
ಸಮ್ಮೇಳನದ
ಸಿದ್ಧತೆಗಳ
ಬಗ್ಗೆ
ಮಾಹಿತಿ
ನೀಡಿದರು.
81ನೇ
ಅಖಿಲಭಾರತ
ಕನ್ನಡ
ಸಾಹಿತ್ಯ
ಸಮ್ಮೇಳನ
ಜನವರಿ
31,
ಫೆ.1,
2
ಮತ್ತು
3ರಂದು
ಶ್ರವಣಬೆಳಗೊಳದಲ್ಲಿ
ನಡೆಯಲಿದೆ
ಎಂದರು.
[80ನೇ
ಸಮ್ಮೇಳನದ
ನಿರ್ಣಯಗಳು]
ಸಮ್ಮೇಳನದಲ್ಲಿ ಸಾಹಿತ್ಯಪರವಾದ ಸಂವಾದಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ, ಚರ್ಚೆ ನಡೆಯಲಿದೆ ಎಂದು ತಿಳಿಸಿದರು. [ಸಮ್ಮೇಳನ ಮುಖ್ಯ ವೇದಿಕೆಗೆ ಒಡೆಯರ್ ಹೆಸರು]
ಈ ಬಾರಿಯ ಸಮ್ಮೇಳನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಮ್ಮೇಳನವನ್ನು ಸಮರ್ಪಿಸಲಾಗುತ್ತಿದೆ. ದಲಿತ ಸಮುದಾಯಕ್ಕೆ ಸೇರಿದ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ ಎಂದರು. [ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ]
ಜನವರಿ 31ರಂದು ಮೆರವಣಿಗೆ : ಜನವರಿ 31ರ ಸಂಜೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಫೆ.1ರಿಂದ ಮೂರು ದಿನಗಳ ಕಾಲ ಸಮ್ಮೇಳನದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಪುಂಡಲೀಕ ಹಾಲಂಬಿ ಮಾಹಿತಿ ನೀಡಿದರು. [ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ]
ಫೆ. 1ರಂದು ಸಮ್ಮೇಳನದ ಉದ್ಘಾಟನೆಯಾಗಲಿದೆ. ಅಂದು ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು, ವಚನ ಸಂಚಯ ಮತ್ತು ಇತರ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಗೋಷ್ಠಿಗಳು ನಡೆಯಲಿವೆ ಎಂದರು.
ಮಹಿಳೆ ಸಮಾನತೆ ಸವಾಲುಗಳು, ರಂಗಭೂಮಿ ಇತ್ತೀಚಿನ ಸವಾಲುಗಳು, ಸಮಕಾಲೀನ ಸಾಹಿತ್ಯದ ಸೈದ್ಧಾಂತಿಕ ಒಲವು ನಿಲುವುಗಳು, ಕನ್ನಡ ಶಾಸ್ತ್ರೀಯ ಭಾಷೆಯ ಮುಂದಿನ ಹೆಜ್ಜೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಎರಡು ದಿನ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.