ಅಕ್ಟೋಬರ್ ತಿಂಗಳ ಕ್ಯಾಲೆಂಡರ್ ನೋಡಿದ್ರಾ, ರಜೆಗಳ ಸುಗ್ಗಿ!
ಗೌರಿಗಣೇಶ ಹಬ್ಬ ಮುಗಿದಿದೆ, ಮಕ್ಕಳಿಗೆ ಮಿಡ್ ಟರ್ಮ್ ಪರೀಕ್ಷೆ ಆರಂಭವಾಗಿದೆ. ಇದಾದ ನಂತರ ಪಿತೃಪಕ್ಷ, ನಂತರ ದಸರಾ.
ಅಕ್ಟೋಬರ್ 2015ರ ತಿಂಗಳ ಕ್ಯಾಲೆಂಡರ್ ಒಮ್ಮೆ ತಿರುವಿದರೆ ಅಂಕಿಗಳೆಲ್ಲಾ ಕೆಂಪುಮಯ, ಅರ್ಥಾತ್ ಸಾಲು ಸಾಲು ರಜೆಗಳ ಸುಗ್ಗಿ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪ್ರಳಯ ಆಗುತ್ತಂತೆ ಎನ್ನುವ ಸುದ್ದಿಯ ನಡುವೆಯೂ, ಬರುವ ತಿಂಗಳು ಬರುವ ರಜೆಗಳ ಝಲಕ್ ಈ ರೀತಿಯಿದೆ ನೋಡಿ. (ಸೆಪ್ಟೆಂಬರ್ 28ಕ್ಕೆ ಜಗತ್ ಪ್ರಳಯ)
ಅಕ್ಟೋಬರ್ 2 ಶುಕ್ರವಾರ, ಗಾಂಧಿ ಜಯಂತಿ. ಇಲ್ಲಿ (ಟೆಕ್ಕಿಗಳೇತರರು) ಒಂದು ದಿನ ರಜೆ ಹಾಕಿದರೆ ಮೂರು ದಿನಗಳ ಸಾಲು ರಜಾ.
ಇನ್ನು ಅಕ್ಟೋಬರ್ 12 ಸೋಮವಾರ, ಮಹಾಲಯ ಅಮವಾಸ್ಯೆ. ಬ್ಯಾಂಕ್ ಮತ್ತು ಸರಕಾರಿ ನೌಕರರಿಗೆ ಹೇಗೂ ಎರಡನೇ ಶನಿವಾರ (ಅ 10) ರಜಾ, ಇಲ್ಲಿ ಮತ್ತೆ ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನಗಳ ರಜಾ ಸಂಭ್ರಮ.

ಅಕ್ಟೋಬರ್ ತಿಂಗಳಲ್ಲಿ ರಜೆಗಳ ಸಂಪದ್ಭರಿತ ವಾರ ಎಂದರೆ ನಾಲ್ಕನೇ ವಾರ. ಅಕ್ಟೋಬರ್ 22 (ಗುರುವಾರ, ಆಯುಧಪೂಜೆ) 23 (ಶುಕ್ರವಾರ, ವಿಜಯದಶಮಿ), 24 (ಶನಿವಾರ, ಮೊಹರಂ) 25 (ಭಾನುವಾರ), 27 (ಮಂಗಳವಾರ, ವಾಲ್ಮೀಕಿ ಜಯಂತಿ).
ಇಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿಗಳಿಗೆ ಆಯುಧಪೂಜೆ ಮತ್ತು ವಿಜಯದಶಮಿಗೆ ರಜೆ ಇದ್ದೇ ಇರುತ್ತೆ. ಹಾಗಾಗಿ ಒಟ್ಟು ನಾಲ್ಕು ದಿನಗಳ ರಜೆಗಳ ಸಾಲು. (2015ರಲ್ಲಿ ಬರುವ ಸುದೀರ್ಘ ರಜೆಗಳ ಪಟ್ಟಿ)
ಇನ್ನು ಬ್ಯಾಂಕ್ ಮತ್ತು ಸರಕಾರಿ ಉದ್ಯೋಗಿಗಳಿಗೆ ಸೋಮವಾರ (ಅಕ್ಟೋಬರ್ 26) ಒಂದು ದಿನ ರಜೆ ಹಾಕಿದರೆ ಆರು ದಿನಗಳ ಸುದೀರ್ಥ ರಜೆಗಳ ಗೊಂಚಲು. ಅಬ್ಬಬ್ಬಾ...
ಸ್ವಕುಟುಂಬ ಸಮೇತ ಊರಿಗೆ, ಟ್ರಿಪ್ಪಿಗೆ ತೆರಳಲು ಪ್ಲಾನ್ ಮಾಡಿಕೊಂಡಿರುವವರು ಈಗಲೇ ಸಿದ್ಧತೆ ನಡೆಸುವುದು ಒಳ್ಳೆಯದು. ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ ಪ್ರವಾಸಿ ಸ್ಥಳಗಳು, ದೇವಾಲಯಗಳು ಪ್ರವಾಸಿಗರಿಂದ ತುಂಬಿ ತುಳುಕುವುದು ಗ್ಯಾರಂಟಿ.
ಹಾಗಾಗಿ ಲಾಡ್ಜುಗಳು, ಪ್ರವಾಸಿ ಮಂದಿರಗಳು, ವಸತಿಗೃಹಗಳು, ರೆಸಾರ್ಟುಗಳನ್ನು ಮುಂಗಡವಾಗಿಯೇ ಬುಕ್ ಮಾಡಿ ಅನ್ನೋದು ನಮ್ಮ ಕಡೆಯಿಂದ ನಿಮಗೆ ಪುಗ್ಸಟೆ ಸಲಹೆ. (ಹಬ್ಬ, ರಜಾದಿನಗಳ ಪಟ್ಟಿ)
ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಸರಕಾರಿ ಆಡಳಿತಯಂತ್ರ ಬಹುತೇಕ ಸ್ಥಗಿತಗೊಳ್ಳುವುದು ಗ್ಯಾರಂಟಿ. ಇನ್ನು ಬ್ಯಾಂಕುಗಳೂ ಕ್ಲೋಸ್ ಆಗುವುದರಿಂದ ಎಟಿಎಂಗಳಲ್ಲಿ ಹಣ ಖಾಲಿಯಾಗಬಹುದು.
ಸಾಲು ಸಾಲು ರಜೆಗಳು ಬಂದಾಗ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್ ಸಿಬ್ಬಂದಿ ಕ್ರಮ ತೆಗೆದುಕೊಳ್ಳಬೇಕು. ಎಟಿಎಂಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಹಣದ ವ್ಯವಸ್ಥೆಯನ್ನು ಮಾಡಿರಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ನೋಡೋಣ.. ಈ ಬಾರಿಯ ರಜೆಯಲ್ಲಿ ಏನಾಗುತ್ತದೆಯೆಂದು.
ಇನ್ನು ರಜೆಯ ಸಂದರ್ಭದಲ್ಲಿ ಖಾಸಗಿ ಬಸ್ ನವರಿಗಂತೂ ಶುಕ್ರದೆಸೆ. ರಜೆಯ ಲಾಭ ಪಡೆದು, ಹಣ ಮಾಡಿಕೊಳ್ಳಲು ಟಿಕೆಟ್ ಶುಲ್ಕವನ್ನು ಮನಬಂದಂತೆ ಏರಿಕೆ ಮಾಡುತ್ತಾರೆ. ಅದಕ್ಕೂ ಸಿದ್ದರಾಗಿ. ಈ ಬಗ್ಗೆ ಸಾರಿಗೆ ಸಚಿವರಿಗೆ ದೂರು ನೀಡೋಣ ಅಂದ್ರೆ ಕೆಎಸ್ಆರ್ಟಿಸಿಯವರೂ ಬಸ್ ದರ ಜಾಸ್ತಿ ಮಾಡ್ತಾರೆ..
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ












Click it and Unblock the Notifications