ರೈಲಿನಲ್ಲಿ ತೊಂದರೆಯಾದರೆ 182 ಸಂಖ್ಯೆಗೆ ಕರೆ ಮಾಡಿ
ಉಡುಪಿ, ಜೂನ್ 30 : ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ? ಹಾಗಾದರೆ ಸಹಾಯವಾಣಿ ನಂ 182 ಅನ್ನು ಮೊಬೈಲ್ನಲ್ಲಿ ಫೀಡ್ ಮಾಡಿಕೊಳ್ಳಿ, ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ರೈಲ್ವೆ ಇಲಾಖೆ ಈ ಸಹಾಯವಾಣಿಯನ್ನು ಆರಂಭಿಸಿದೆ.
ಉಡುಪಿಯ
ಇಂದ್ರಾಳಿ
ರೈಲು
ನಿಲ್ದಾಣದಲ್ಲಿ
ಬುಧವಾರ
ಎಲ್ಲಾ
ರೈಲು
ಪ್ರಯಾಣಿಕರಿಗೆ
ಸಹಾಯವಾಣಿ
ಬಗ್ಗೆ
ಮಾಹಿತಿ
ನೀಡಲಾಯಿತು.
ಭಿತ್ತಿಪತ್ರ
ವಿತರಣೆ
ಮಾಡುವ
ಆರಂಭವಾದ
ಕಾರ್ಯಕ್ರಮದಲ್ಲಿ
ಪ್ರಾದೇಶಿಕ
ರೈಲ್ವೆ
ಪ್ರಬಂಧಕ
ಮಹಮ್ಮದ್
ಆಸೀಮ್
ಸುಲೈಮಾನ್
ಪಾಲ್ಗೊಂಡಿದ್ದರು.
[ರೈಲ್ವೆ
ಶೌಚಾಲಯ
ವಿನ್ಯಾಸಕ್ಕೆ
ಪ್ರಶಸ್ತಿ
ಪಡೆದ
ಮಣಿಪಾಲ
ವಿದ್ಯಾರ್ಥಿ]
ರೈಲು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ, ಅಪರಾಧ ಕೃತ್ಯಗಳು ಕಂಡಲ್ಲಿ, ಕಿರುಕುಳವಾದಲ್ಲಿ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. [ಪ್ರಯಾಣಿಕರೆ ಗಮನಿಸಿ : ಮಂಗಳೂರು-ಮುಂಬೈ ವಿಶೇಷ ಎಸಿ ರೈಲು]
ಕಾರ್ಯಾಚರಣೆ ಹೇಗೆ? : ಸಹಾಯವಾಣಿ 182ಗೆ ಕರೆ ಮಾಡಿದರೆ ಆರ್ ಪಿಎಫ್ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ. ಸಮಸ್ಯೆ ಏನಾಗಿದೆ? ಎನ್ನುವುದನ್ನು ಸಹಾಯವಾಣಿ ನಿಯಂತ್ರಕರಿಗೆ ತಿಳಿಸಬೇಕು. ಆ ಕೂಡಲೇ ಕಾರ್ಯ ಪ್ರವೃತ್ತರಾಗುವ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಅಗತ್ಯವಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಯಲ್ಲಿ ಕರೆ ಮಾಡಿದವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸುವರು. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]
ಪ್ರಯಾಣಿಕರು ಜಾಗೃತರಾಗಿರಿ : ರೈಲು ಪ್ರಯಾಣಿಕರಿಗೆ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಈ ಕೆಳಗಿನ ಜಾಗೃತಿ ಮಾಹಿತಿಗಳನ್ನು ನೀಡಿದ್ದಾರೆ.
*
ಅಪರಿಚಿತರಿಂದ
ಯಾವುದೇ
ತಿಂಡಿ,
ಜ್ಯೂಸ್
ಇನ್ನಿತರ
ಆಹಾರ
ಪದಾರ್ಥಗಳನ್ನು
ಪಡೆಯಬಾರದು
*
ಚಿನ್ನಾಭರಣ
ಧರಿಸಿ
ಕಿಟಕಿ
ಬಳಿ
ಕುಳಿತುಕೊಳ್ಳಬಾರದು
*
ರೈಲು
ನಿಲ್ದಾಣದಿಂದ
ಹೊರಡುವ
ಮತ್ತು
ನಿಲ್ಲುವ
ಸಮಯದಲ್ಲಿ
ಜಾಗರೂಕರಾಗಿರಬೇಕು
*
ವ್ಯಾನಿಟಿ
ಬ್ಯಾಗಿನಲ್ಲಿ
ಬೆಲೆಬಾಳುವ
ಸೊತ್ತು
ಇದ್ದರೆ
ಇತರರಿಗೆ
ಅನುಮಾನ
ಬಾರದಂತೆ
ನೋಡಿಕೊಳ್ಳಿ
*
ಲಗೇಜುಗಳನ್ನು
ಸೀಟಿನ
ಅಡಿಯಲ್ಲಿ
ಅಳವಡಿಸಲಾಗಿರುವ
ಸೇಫ್ಟಿ
ಚೈನಿನಿಂದ
ಭದ್ರಪಡಿಸಿಕೊಳ್ಳಬೇಕು