ಸೆ.14ರಂದು ಕರ್ನಾಟಕ ಬಂದ್ ಇಲ್ಲ : ವಾಟಾಳ್ ನಾಗರಾಜ್
ಬೆಂಗಳೂರು, ಸೆಪ್ಟೆಂಬರ್ 13 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಸೆ.14ರಂದು ಕರ್ನಾಟಕ ಬಂದ್ ಇರುವುದಿಲ್ಲ. ಬುಧವಾರ ಬಂದ್ ನಡೆಯಲಿದೆ ಎಂಬ ಸುದ್ದಿ ಸೋಮವಾರ ಸಂಜೆಯಿಂದ ಹಬ್ಬಿತ್ತು.
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗಾರಾಜ್
ಅವರು
ಈ
ಕುರಿತು
ಮಾಹಿತಿ
ನೀಡಿದ್ದಾರೆ.
'ಸೆ.15ರಂದು
ಕನ್ನಡ
ಒಕ್ಕೂಟದಿಂದ
ರಾಜ್ಯಾದ್ಯಂತ
ರೈಲ್ವೆ
ಬಂದ್ಗೆ
ಕರೆ
ನೀಡಲಾಗಿದೆ.
ಆದರೆ,
ಸೆ.14ರಂದು
ಯಾವುದೇ
ಬಂದ್
ನಡೆಯುವುದಿಲ್ಲ'
ಎಂದು
ಅವರು
ಹೇಳಿದರು.[ಸೆಪ್ಟೆಂಬರ್
15ರಂದು
ರೈಲ್ವೆ
ಬಂದ್]
ಬುಧವಾರ ಯಾವುದೇ ಬಂದ್ ಇರುವುದಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.[ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]
ಸೋಮವಾರ ಸಂಜೆಯಿಂದ ಸೆ.14ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಬಂದ್ ಹಿನ್ನಲೆಯಲ್ಲಿ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಳ್ಳುತ್ತದೆ. 800ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ ಎಂಬ ಸುದ್ದಿ ಹಬ್ಬಿತ್ತು.[ನನ್ನ ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? : ಕೆಪಿಎನ್]
ಆದರೆ, ವಾಟಾಳ್ ನಾಗರಾಜ್ ಅವರು ಬುಧವಾರ ಕರ್ನಾಟಕ ಬಂದ್ ನಡೆಯಲಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಆದರೆ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಸೆ.15ರಂದು ರೈಲ್ವೆ ಬಂದ್ ಕರೆ ನೀಡಲಾಗಿದೆ.