ಕೊರೊನಾ; ವಿದೇಶಕ್ಕೆ ಹೋಗಿ ಬಂದವರ ಸನಿಹ ಹೋಗದಿರಲು ಎಚ್ಚರಿಕೆ

ಬೆಂಗಳೂರು, ಮಾರ್ಚ್ 5: ಕರ್ನಾಟಕದಲ್ಲಿ ಕೊರೊನಾ ವೈರಸ್ 695 ಶಂಕಿತ ರೋಗಿಗಳ ತಪಾಸಣೆ ಮಾಡಿದ್ದೇವೆ. 14 ದಿನಗಳ ಕಾಲ ಹೊರ ದೇಶಕ್ಕೆ ಹೋಗಿ ಬಂದವರು ಯಾರ ಸಂಪರ್ಕಕ್ಕೂ ಹೋಗಬಾರದು. ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿದೇಶದಿಂದ ಯಾರೇ ಬಂದರೂ ಅವರ ತಪಾಸಣೆ ಮಾಡುತ್ತಿದ್ದೇವೆ. 28 ದಿನಗಳ ಕಾಲ ನಿಗಾ ಇಟ್ಟಿದ್ದ 225 ಜನ ಅವಧಿ ಮುಗಿದಿದೆ. ಮನೆಯಲ್ಲಿ 53 ಜನರ ಮೇಲೆ ನಿಗಾ ಇದಲಾಗಿದೆ. ಕರ್ನಾಟಕದಲ್ಲಿ 5 ಮಂದಿ ಒಳರೋಗಿಗಳಾಗಿ ಸೇರಿದ್ದಾರೆ. ಇದುವರೆಗೆ 321 ಜನರ ರಕ್ತ ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ 273 ಜನಕ್ಕೆ ನೆಗಟೀವ್ ಬಂದಿದೆ. ಎಲ್ಲಾ ಅಂತರಾಷ್ಟ್ರೀಯ ವಿಮಾನದ ಪ್ರಯಾಣಿಕರನ್ನ ತಪಾಸಣೆ ಮಾಡುತ್ತಿದ್ದೇವೆ' ಎಂದು ತಿಳಿಸಿದರು.

'ತುಂಬಾ ಜನರು ನಮಗೆ ಸೋಂಕು ಇದೆಯಾ ಅಂತಾ ಭಯ ಭೀತರಾಗುತ್ತಿದ್ದಾರೆ. ಆದ್ರೆ ಸೋಂಕು ಹರಡಿರುವ 77 ದೇಶಗಳಿಂದ ಬಂದಿರುವವರು ಹಾಗೂ ಅವರ ಜೊತೆ ಸಂಪರ್ಕವಿರುವವರಷ್ಟೆ ತಪಾಸಣೆಗೆ ಒಳಪಡಬೇಕು. ಜ್ವರ ಕೆಮ್ಮು ಉಸಿರಾತದ ತೊಂದರೆ ಇರುವವರು ಹತ್ತಿರದ ವೈದ್ಯರನ್ನ ಸಂಪರ್ಕಿಸಿ. 104 ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು' ಎಂದರು.

Minister Sudhakar Press Meet About Coronavirus In Karnataka

'14 ದಿನಗಳ ಕಾಲ ಹೊರ ದೇಶಕ್ಕೆ ಹೋಗಿ ಬಂದವರು ಯಾರ ಸಂಪರ್ಕಕ್ಕೂ ಹೋಗಬಾರದು. 14 ದಿನಗಳ ನಂತರ ಯಾವುದೇ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದಿದ್ರೆ ಸಂಪರ್ಕ ಹೊಂದಬಹುದು' ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಪಾಟೀಲ್ ಓಂ ಪ್ರಕಾಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+