ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ
ಬೆಂಗಳೂರು, ಜುಲೈ17 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆಗೆ ಕರ್ನಾಟಕ ಸರ್ಕಾರವು ಸೋಮವಾರ ಮಧ್ಯಾಹ್ನ ಆದೇಶ ನೀಡಿದೆ. ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್ ಇಲಾಖೆ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಭ್ರಷ್ಟಾಚಾರ, ಅಕ್ರಮದ ಬಗ್ಗೆ ಎರಡು ವರದಿ ನೀಡಿ ಡಿಜಿ ಹಾಗೂ ಐಜಿ ಸತ್ಯನಾರಾಯಣ ರಾವ್ ಅವರ ಮೇಲೆ ಆರೋಪ ಹೊರೆಸಿದ್ದ ಡಿ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ಲಭಿಸಿದೆ. ಟ್ರಾಫಿಕ್, ರಸ್ತೆ ಸುರಕ್ಷತೆ ವಿಭಾಗದ ಡಿಜಿಪಿಯಾಗಿ ನೇಮಿಸಲಾಗಿದೆ.

* ಎಂಎನ್ ರೆಡ್ಡಿ- ಗುಪ್ತಚರ ಇಲಾಖೆ ಡಿಜಿಪಿಯಿಂದ ಭ್ರಷ್ಟಾಚಾರ ನಿಗ್ರಹದಳ ಡಿಜಿಪಿಯಾಗಿ ವರ್ಗಾವಣೆ
* ಎನ್ ಎಸ್ ಮೇಘರಿಕ್- ಭ್ರಷ್ಟಾಚಾರ ನಿಗ್ರಹದಳ ಎಡಿಜಿಪಿ ಹುದ್ದೆಯಿಂದ ಕಾರಾಗೃಹ ಇಲಾಖೆ ಎಡಿಜಿಪಿಯಾಗಿ ವರ್ಗಾವಣೆ.
* ಅಮೃತ್ ಪಾಲ್- ಗುಪ್ತಚರ ಇಲಾಖೆ ಐಜಿಪಿ ಸ್ಥಾನದಿಂದ ಗುಪ್ತಚರ ಇಲಾಖೆ ಡಿಜಿಪಿ ಸ್ಥಾನಕ್ಕೆ ವರ್ಗ.
* ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್, ರಸ್ತೆ ಸುರಕ್ಷತೆ ವಿಭಾಗದ ಡಿಐಜಿ ಹಾಗೂ ಆಯುಕ್ತರಾಗಿ ನೇಮಕ.

* ಕಾರಾಗೃಹದ ಡಿಜಿ ಹಾಗೂ ಐಜಿಯಾಗಿದ್ದ ಸತ್ಯನಾರಾಯಣರಾವ್ ಅವರು ಸದ್ಯ ರಜೆ ಮೇಲಿದ್ದು, ಅವರಿಗೂ ವರ್ಗಾವಣೆ ಭಾಗ್ಯ ಸಿಗಲಿದೆ.












Click it and Unblock the Notifications