ಮೂರು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು, ಜು. 16 : ಬುಧವಾರ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.
ಬೆಂಗಳೂರು,
ಗುಲ್ಬರ್ಗ,
ದಾವಣಗೆರೆ
ಹಾಗೂ
ಬೀದರ್
ಜಿಲ್ಲೆಗಳಲ್ಲಿ
ಏಕಕಾಲಕ್ಕೆ
ಲೋಕಾಯುಕ್ತರು
ದಾಳಿ
ನಡೆಸಿದ್ದು,
ಬಲೆಗೆ
ಬಿದ್ದ
ಅಧಿಕಾರಿಗಳ
ಮನೆಯಲ್ಲಿ
ದಾಖಲೆಗಳನ್ನು
ಪರಿಶೀಲಿಸುತ್ತಿದ್ದಾರೆ.
ದಾಖಲೆಗಳ
ಪರಿಶೀಲನೆ
ಮುಗಿದ
ಬಳಿಕ
ಲೋಕಾಯುಕ್ತ
ಎಡಿಜಿಪಿ
ಸತ್ಯನಾರಾಯಣರಾವ್
ಪತ್ರಿಕಾಗೋಷ್ಠಿ
ನಡೆಸಿ
ವಿವರಗಳನ್ನು
ನೀಡಲಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿರುವ ರಾಜ್ಯ ತಾಂತ್ರಿಕ ಉನ್ನತೀಕರಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುನಿಯಪ್ಪ, ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಹೇಮಚಂದ್ರ, ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಮುನಿನಾರಾಯಣಪ್ಪ ಅವರ ಮನೆಯ ಮೇಲೆ ಮುಂಜಾನೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. [ಲೋಕಾಯುಕ್ತ ಬಲೆಗೆ ಬಿದ್ದರೆ ತಕ್ಷಣ ಅಮಾನತು]
ಗುಲ್ಬರ್ಗ : ಗುಲ್ಬರ್ಗದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ ಶಿರಸ್ತೇದಾರ್ ಸಯ್ಯದ್ ನಿಸಾರ್ ಅಹಮದ್ ವಜೀರ್ ಅವರ ಮನೆ, ಕಚೇರಿ ಹಾಗೂ ಶಾಲೆಗಳ ಮೇಲೆ ಬುಧವಾರ ಬೆಳಗ್ಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಬೀದರ್ : ಬೀದರ್ ಜಿಲ್ಲಾ ಪಂಚಾಯಿತಿ ಜೆಇ ಹಾವೋಜಿ ರಾವ್ ಅವರ ಔರಾದ್ನಲ್ಲಿರುವ ನಿವಾಸ ಹಾಗೂ ಶಿವನಗರದಲ್ಲಿರುವ ಕಚೇರಿಗಳ ಮೇಲೆ ದಾಳಿ ಇಂದು ಬೆಳಗ್ಗೆ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.