ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದಲ್ಲಿ ವೇದಾಂತ ಗ್ರೂಪ್ ಗಣಿಗಾರಿಕೆಗೆ 'ಸುಪ್ರೀಂ' ತಡೆ
ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕದಲ್ಲಿ ಕಬ್ಬಿಣ ಅದಿರಿನ ಗಣಿಗಾರಿಕೆ ನಡೆಸದಂತೆ ವೇದಾಂತ ಸಮೂಹ ಸಂಸ್ಥೆಗೆ ಗುರುವಾರ ಸುಪ್ರೀಂಕೋರ್ಟ್ ಆದೇಶಿಸಿದೆ.
ಆದರೆ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ ಎಂಡಿಸಿ) ಗೆ ಖನಿಜಗಳ ಧಾರಣೆ ಪಟ್ಟಿ ನಿರ್ವಹಣೆ ಮುಂದುವರೆಸಲು ಅನುಮತಿ ನೀಡಿದೆ. ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ವೇದಾಂತ ಸಮೂಹ ಸುಪ್ರೀಂಕೋರ್ಟಿನಲ್ಲಿ ಮಾಡಿಕೊಂಡಿದ್ದ ಮನವಿ ತಿರಸ್ಕರಿಸಲಾಗಿದೆ.
ಆದರೆ, ಎನ್ ಎಂಡಿಸಿಗೆ ಅನುಮತಿ ನೀಡಿರುವುದು ವೇದಾಂತಕ್ಕೆ ಹಿನ್ನಡೆಯಾಗಿದೆ. ಕಬ್ಬಿಣ ಅದಿರುವ ರಫ್ತು ವಿಷಯಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಮಿತಿ ನೇಮಕವನ್ನು ವೇದಾಂತ ಸಂಸ್ಥೆ ಪ್ರಶ್ನಿಸಿತ್ತು. ವೇದಾಂತ ಸಂಸ್ಥೆ ಕಬ್ಬಿಣ ಅದಿರು ರಫ್ತು ಮಾಡಲು ಸಮಿತಿ ಅನುಮತಿ ನೀಡಿರಲಿಲ್ಲ.
ಈಗ ಕಬ್ಬಿಣ ಅದಿರಿಗೆ ಮೂಲ ಬೆಲೆ ನಿಗದಿ, ಎನ್ ಎಂಡಿಸಿಯಿಂದ ಎರಡು ಮಾದರಿ ಬೆಲೆ ನಿಗದಿ ಎಲ್ಲಕ್ಕೂ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಆದರೆ, ಈಗ ಸುಪ್ರೀಂಕೋರ್ಟಿನಿಂದ ಎನ್ ಎಂಡಿಸಿಗೆ ಬೆಲೆ ನಿಗದಿ ಅವಕಾಶ ನೀಡಲಾಗಿದೆ.
Comments
English summary
The Supreme Court on Thursday refused permission to Vedanta Group to export iron ore mined from Karnataka. The court, however, allowed the National Mineral Development Corporation (NMDC) to continue with the dual pricing of the minerals.
Story first published: Thursday, September 1, 2016, 15:20 [IST]