ಭೂ ಸ್ವಾಧೀನ ಕಾಯ್ದೆ : ತಿರುಗೇಟು ಕೊಡಲು ಬಿಜೆಪಿ ಸಿದ್ಧ
ಬೆಂಗಳೂರು, ಏ.4 : 2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿರುವ ಕಾಂಗ್ರೆಸ್ಗೆ ತಿರುಗೇಟು ನೀಡಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಯಕರ್ತರು ಮತ್ತು ನಾಯಕರು ಗ್ರಾಮಗಳಿಗೆ ಭೇಟಿ ನೀಡಿ ಈ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿ
ನಡೆಯುತ್ತಿರುವ
ಕಾರ್ಯಕಾರಿಣಿ
ಸಭೆಯ
ಎರಡನೇ
ದಿನವಾದ
ಶನಿವಾರ
ಕೇಂದ್ರ
ಸಚಿವ
ನಿತಿನ್
ಗಡ್ಕರಿ
ಈ
ಕುರಿತು
ಸಭೆಯಲ್ಲಿ
ಮಾತನಾಡಿದರು.
ಕಾಯ್ದೆ
ಬಗ್ಗೆ
ಜನರಿಗೆ
ಮಾಹಿತಿ
ನೀಡಿ
ಪ್ರತಿಪಕ್ಷ
ಕಾಂಗ್ರೆಸ್
ಈ
ಬಗ್ಗೆ
ಅಪಪ್ರಚಾರ
ಮಾಡದಂತೆ
ತಡೆಯಬೇಕು
ಎಂದರು.
[ಭೂ
ಸ್ವಾಧೀನ
ಕಾಯ್ದೆ
ವಿರುದ್ಧ
ಹೋರಾಟ]
ಪಕ್ಷ ಭೂ ಸ್ವಾಧೀನ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಕಾರ್ಯಕರ್ತರು ಮತ್ತು ರಾಜ್ಯ ಮಟ್ಟದ ನಾಯಕರು ಪ್ರತಿ ಗ್ರಾಮಗಳಿಗೂ ಹೋಗಿ ಜನರಿಗೆ ಕಾಯ್ದೆ ಬಗ್ಗೆ ಮಾಹಿತಿ ನೀಡಲಿದ್ದಾರೆ. [ಮೋದಿಗೆ ಸದ್ಯದಲ್ಲೇ ಜನ ಪಾಠ ಕಲಿಸಲಿದ್ದಾರೆ]
ಪ್ರತಿಪಕ್ಷ ಕಾಂಗ್ರೆಸ್ ಭೂ ಸ್ವಾಧೀನ ಕಾಯ್ದೆಯ ಬಗ್ಗೆ ಅಪಪ್ರಚಾರವನ್ನು ಮಾಡುತ್ತಾ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಆದ್ದರಿಂದ ತಕ್ಷಣ ಕಾರ್ಯಕರ್ತರು ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸಬೇಕು ಎಂದು ಗಡ್ಕರಿ ಹೇಳಿದರು. ['ಬಿಜೆಪಿ ತಪ್ಪು ಹುಡುಕುವ ಬದಲು ರಾಹುಲ್ ಗಾಂಧಿ ಹುಡುಕಿ']
ರೈತ ವಿರೋಧಿಯಲ್ಲ : ಭೂ ಸ್ವಾಧೀನ ಕಾಯ್ದೆ ಉದ್ಯಮಿಗಳ ಪರವಾಗಿದೆ. ಇದು ರೈತ ವಿರೋಧಿಯಾಗಿದೆ ಎಂಬ ತಪ್ಪು ಸಂದೇಶವನ್ನು ಪ್ರತಿಪಕ್ಷ ಜನರಿಗೆ ತಲುಪಿಸುತ್ತಿದೆ. ಆದ್ದರಿಂದ ರೈತರಿಗೆ ಈ ಕಾಯ್ದೆ ಹೇಗೆ ಸಹಾಯಕವಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ದೇಶಾದ್ಯಂತ ಸಮಾವೇಶಗಳು : ಪ್ರತಿರಾಜ್ಯ ಘಟಕಗಳು ಸಮಾವೇಶಗಳನ್ನು ಆಯೋಜಿಸುವ ಮೂಲಕ ಜನರಿಗೆ ಭೂ ಸ್ವಾಧ್ವೀನ ಕಾಯ್ದೆಯ ಬಗ್ಗೆ ಮಾಹಿತಿ ತಲುಪಿಸಲಿವೆ. ಏ.6ರಂದು ಮೊದಲ ಸಮಾವೇಶ ರಾಂಚಿಯಲ್ಲಿ ನಡೆಯಲಿದ್ದು, ನಂತರ ಪ್ರತಿ ರಾಜ್ಯದಲ್ಲಿ ಸಮಾವೇಶ ಆಯೋಜನೆ ಮಾಡಲಾಗುತ್ತದೆ.