ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್

By Manjunatha
|
Google Oneindia Kannada News

ಬೆಂಗಳೂರು, ಜುಲೈ 13: 'ಪಡೆಯ ಕಟ್ಟು ವೀರ ಸಮರ ಕಾದಿದೆ..' ಹಾಡಿನಂತೆ ನೂತನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯೋನ್ಮುಖರಾಗಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಎದಿರೇಟು ನೀಡಲು ಯುವಪಡೆಯನ್ನು ಕಟ್ಟಲು ದಿನೇಶ್ ಗುಂಡೂರವ್ ಅವರು ಯೋಜಿಸಿದ್ದಾರೆ. ಹೈಕಮಾಂಡ್‌ನಿಂದಲೂ ಯುವಕರಿಗೆ ಅವಕಾಶ ನೀಡುವಂತೆ ಸೂಚನೆ ಸಹ ಕೆಪಿಸಿಸಿಗೆ ಬಂದಿದೆ.

ಚಿತ್ರಗಳು : ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕಾರಚಿತ್ರಗಳು : ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕಾರ

ತಾಲ್ಲೂಕು ಮಟ್ಟದಿಂದ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಗೆ ದಿನೇಶ್ ಗುಂಡೂರಾವ್ ಯೋಜಿಸಿದ್ದು, ಹೆಚ್ಚಿನ ಪಾಲು ಯುವಕರಿಗೆ ಆದ್ಯತೆ ನೀಡುವ ಉಮೇದು ಹೊಂದಿದ್ದಾರೆ. ಪದಾಧಿಕಾರಿಗಳ ಬದಲಾವಣೆ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

KPCC president planing to give opportunity to youths

ಜಿ.ಪರಮೇಶ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಗದ್ದುಗೆಯಲ್ಲಿದ್ದರು ಹಾಗಾಗಿ ಪದಾಧಿಕಾರಿಗಳ ಬದಲಾವಣೆಗೆ ದೊಡ್ಡ ಮಟ್ಟದಲ್ಲಿ ಆಗಿಲ್ಲ. ಈಗ ಕೆಪಿಸಿಸಿ ಚುಕ್ಕಾಣಿ ದಿನೇಶ್ ಅವರ ಕೈಗೆ ಬಂದಿದ್ದು ಅವರು ಪದಾಧಿಕಾರಿಗಳ ಬದಲಾವಣೆಗೆ ಮುಂದಡಿ ಇಟ್ಟಿದ್ದಾರೆ.

ಕೆಪಿಸಿಸಿ ಚುಕ್ಕಾಣಿಯನ್ನೂ ನಡುವಯಸ್ಸಿನವರಿಗೇ ನೀಡಿರುವ ಹೈಕಮಾಂಡ್ ಸಹ ಯುವಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ಸೂಚನೆ ನೀಡಿದೆ ಹಾಗಾಗಿ ಪದಾಧಿಕಾರಿಗಳ ಬದಲಾವಣೆ ಹಾಗೂ ಚುನಾವಣಾ ಸಮಿತಿಗಳಲ್ಲಿ ಬಿಳಿ ತಲೆಗಳ ಬದಲಾಗಿ ಕರಿ ತಲೆಗಳನ್ನೇ (ಯುಕವರನ್ನೇ) ಹೆಚ್ಚಾಗಿ ಕಾಣುವ ಸಾಧ್ಯತೆ ದಟ್ಟವಾಗಿದೆ.

ಯುವ ಕಾಂಗ್ರೆಸ್‌ನಿಂದ ಕೆಪಿಸಿಸಿ ತನಕ, ದಿನೇಶ್ ಗುಂಡೂರಾವ್ ಪರಿಚಯಯುವ ಕಾಂಗ್ರೆಸ್‌ನಿಂದ ಕೆಪಿಸಿಸಿ ತನಕ, ದಿನೇಶ್ ಗುಂಡೂರಾವ್ ಪರಿಚಯ

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ.

English summary
KPCC president Dinesh Gundu Rao planing to give opportunity to youths in the congress party. Ahead of Lokasabha elections Dinesh planing to form strong youth based congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X