Get Updates
Get notified of breaking news, exclusive insights, and must-see stories!

ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್

ಬೆಂಗಳೂರು, ಜುಲೈ 13: 'ಪಡೆಯ ಕಟ್ಟು ವೀರ ಸಮರ ಕಾದಿದೆ..' ಹಾಡಿನಂತೆ ನೂತನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರ್ಯೋನ್ಮುಖರಾಗಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಎದಿರೇಟು ನೀಡಲು ಯುವಪಡೆಯನ್ನು ಕಟ್ಟಲು ದಿನೇಶ್ ಗುಂಡೂರವ್ ಅವರು ಯೋಜಿಸಿದ್ದಾರೆ. ಹೈಕಮಾಂಡ್‌ನಿಂದಲೂ ಯುವಕರಿಗೆ ಅವಕಾಶ ನೀಡುವಂತೆ ಸೂಚನೆ ಸಹ ಕೆಪಿಸಿಸಿಗೆ ಬಂದಿದೆ.

ತಾಲ್ಲೂಕು ಮಟ್ಟದಿಂದ ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಗೆ ದಿನೇಶ್ ಗುಂಡೂರಾವ್ ಯೋಜಿಸಿದ್ದು, ಹೆಚ್ಚಿನ ಪಾಲು ಯುವಕರಿಗೆ ಆದ್ಯತೆ ನೀಡುವ ಉಮೇದು ಹೊಂದಿದ್ದಾರೆ. ಪದಾಧಿಕಾರಿಗಳ ಬದಲಾವಣೆ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

KPCC president planing to give opportunity to youths

ಜಿ.ಪರಮೇಶ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಗದ್ದುಗೆಯಲ್ಲಿದ್ದರು ಹಾಗಾಗಿ ಪದಾಧಿಕಾರಿಗಳ ಬದಲಾವಣೆಗೆ ದೊಡ್ಡ ಮಟ್ಟದಲ್ಲಿ ಆಗಿಲ್ಲ. ಈಗ ಕೆಪಿಸಿಸಿ ಚುಕ್ಕಾಣಿ ದಿನೇಶ್ ಅವರ ಕೈಗೆ ಬಂದಿದ್ದು ಅವರು ಪದಾಧಿಕಾರಿಗಳ ಬದಲಾವಣೆಗೆ ಮುಂದಡಿ ಇಟ್ಟಿದ್ದಾರೆ.

ಕೆಪಿಸಿಸಿ ಚುಕ್ಕಾಣಿಯನ್ನೂ ನಡುವಯಸ್ಸಿನವರಿಗೇ ನೀಡಿರುವ ಹೈಕಮಾಂಡ್ ಸಹ ಯುವಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ಸೂಚನೆ ನೀಡಿದೆ ಹಾಗಾಗಿ ಪದಾಧಿಕಾರಿಗಳ ಬದಲಾವಣೆ ಹಾಗೂ ಚುನಾವಣಾ ಸಮಿತಿಗಳಲ್ಲಿ ಬಿಳಿ ತಲೆಗಳ ಬದಲಾಗಿ ಕರಿ ತಲೆಗಳನ್ನೇ (ಯುಕವರನ್ನೇ) ಹೆಚ್ಚಾಗಿ ಕಾಣುವ ಸಾಧ್ಯತೆ ದಟ್ಟವಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರು ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+