ರಾಜ್ಯದಿಂದ ಪ್ರತ್ಯೇಕವಾಗಲು ಕೊಡವರ ಹೋರಾಟಕ್ಕೆ ವೇದಿಕೆ ಸಜ್ಜು

ತೆಲಂಗಾಣ ಮಾದರಿಯಲ್ಲೇ ಪ್ರತ್ಯೇಕ ರಾಜ್ಯ ರಚನೆಗಾಗಿ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ. ಸಾಮಾಜಿಕವಾಗಿ, ರಾಜಕೀಯ ಮತ್ತು ಭಾಷೆಯ ಆಧಾರದಲ್ಲಿ ಕೊಡಗು ತನ್ನ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಆದರೆ ಸರಕಾರ ನಮ್ಮ ಯಾವುದೇ ಬೇಡಿಕೆಗಳಿಗಾಗಲಿ, ರಾಜ್ಯದ ಅಭಿವೃದ್ದಿಗಾಗಲಿ ಗಮನ ಹರಿಸುತ್ತಿಲ್ಲ ಎಂದು ನಾಚಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ಕೊಡವರನ್ನು ನಾನು ಅಪಮಾನಿಸಿಲ್ಲ : ಕೋ.ಚ)
ತೆಲಂಗಾಣ ಭಾಗಕ್ಕಿಂತಲೂ ಕೊಡಗು ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ. ಲ್ಯಾಂಡ್ ಮಸೂದೆಯ ಅನ್ವಯ ಪ್ರತ್ಯೇಕ ರಾಜ್ಯ ರಚನೆಯ ಬಗ್ಗೆ ನಮ್ಮ ಬೇಡಿಕೆಯನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುತ್ತದೆ ಎನ್ನುವ ನಂಬಿಕೆಯಲ್ಲಿದ್ದೇವೆ, ಪ್ರತ್ಯೇಕ ರಾಜ್ಯ ರಚನೆಯ ಜೊತೆ ನಮ್ಮ ಇತರ ಐದು ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದೇವೆ ಎಂದು ನಾಚಪ್ಪ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ 9 ಗಂಟೆಗೆ ನಗರದ ಪುರಭವನದ ಮುಂದೆ ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಇತರ ಬೇಡಿಕೆಗಳೆಂದರೆ:
> ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನಾಮ ನಿರ್ದೇಶನದ ಪ್ರಾತಿನಿಧ್ಯವನ್ನು ಕೊಡವರಿಗೂ ನೀಡುವುದು.
> ಬಂದೂಕು ಪರವಾನಿಗೆ ವಿನಾಯತಿ ಹಕ್ಕು.
> ಕೊಡವರಿಗೆ ಜಾಗತಿಕ ಮಾನ್ಯತೆ ನೀಡುವುದು.
> ಕೊಡವರನ್ನು ಪ್ರಾಚೀನ ಭಾಷಾ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ ಎಂದು ಪರಿಗಣಿಸುವುದು.
> ಉದ್ಯೋಗ, ಶಿಕ್ಷಣ ಮತ್ತು ಆರ್ಥಿಕ ವಲಯದಲ್ಲಿ ಮೀಸಲಾತಿ ನೀಡುವುದು.












Click it and Unblock the Notifications