ಮೇಕೆದಾಟು ಯೋಜನೆ ವಿವಾದ ಏಕೆ, ಏನು?
ಬೆಂಗಳೂರು, ನ.21 : ಮೇಕೆದಾಟು ಬಳಿ ಕರ್ನಾಟಕ ನಿರ್ಮಿಸಲು ಹೊರಟಿರುವ ಅಣೆಕಟ್ಟು ವಿವಾದಕ್ಕೆ ಕಾರಣವಾಗಿದೆ. ಕಾವೇರಿಕೊಳ್ಳದಲ್ಲಿ ಕಾಮಗಾರಿ ಕೈಗೊಂಡು ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ತಮಿಳುನಾಡು ದೂರಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕರ್ನಾಟಕ ಸ್ಪಷ್ಟನೆ ಕೊಟ್ಟಿದೆ.
2013ರ
ಸೆಪ್ಟೆಂಬರ್ನಲ್ಲಿ
ಕರ್ನಾಟಕ
ಸರ್ಕಾರ
ಮೊದಲು
ಮೇಕೆದಾಟು
ಬಳಿ
ಅಣೆಕಟ್ಟು
ನಿರ್ಮಾಣ
ಮಾಡುವ
ಪ್ರಸ್ತಾಪವನ್ನು
ಮುಂದಿಟ್ಟಿತು.
ಮಳೆಗಾಲದ
ಸಂದರ್ಭದಲ್ಲಿ
ಹೆಚ್ಚು
ನೀರು
ತಮಿಳುನಾಡಿಗೆ
ಹರಿದು
ಹೋಗುತ್ತದೆ.
ಅಂತಹ
ಸಂದರ್ಭದಲ್ಲಿ
ನೀರನ್ನು
ಸಂಗ್ರಹಿಸಿ,
ಮೈಸೂರು,
ಬೆಂಗಳೂರು
ನಗರಗಳಿಗೆ
ಕುಡಿಯುವ
ನೀರಿಗಾಗಿ
ಉಪಯೋಗಿಸಿಕೊಳ್ಳುವುದು
ಯೋಜನೆ
ಮುಖ್ಯ
ಉದ್ದೇಶವಾಗಿತ್ತು.
ಮೇಕೆದಾಟುವಿನಲ್ಲಿ 22 ಕಡೆ ಅಣೆಕಟ್ಟು ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ಸುಮಾರು 48 ಟಿಎಂಸಿ ನೀರು ಸಂಗ್ರಹಣೆ ಮಾಡಬಹುದಾಗಿದೆ. ಕರ್ನಾಟಕವಿನ್ನೂ ಯೋಜನೆ ಪ್ರಸ್ತಾವನೆ ಮುಂದಿಟ್ಟಿದ್ದು, ಯೋಜನಾ ವರದಿ ತಯಾರಿಸಿ ಕೇಂದ್ರ ಜಲಮಂಡಳಿ ಯೋಜನಾ ಸಮಿತಿಗೆ ಕಳುಹಿಸಿಕೊಟ್ಟು, ಅಲ್ಲಿ ಒಪ್ಪಿಗೆ ಸಿಕ್ಕ ನಂತರ ಯೋಜನೆ ಆರಂಭವಾಗಲಿದೆ.
ಕಾವೇರಿ ಕ್ಯಾತೆ ಆರಂಭ : 2013ರ ಸೆಪ್ಟೆಂಬರ್ನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಅವರು ಮೇಕೆದಾಟುವಿನ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಕಾವೇರಿ ಜಲಾನಯದ ಪ್ರದೇಶದಲ್ಲಿ ಅಣೆಕಟ್ಟು ಕಟ್ಟುವ ಮೂಲಕ ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ, ಇದಕ್ಕೆ ಅವಕಾಶ ನೀಡಬಾರದು ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಕಾವೇರಿ
ಜಲಾನಯನ
ಪ್ರದೇಶದಲ್ಲಿ
ಯಾವುದೇ
ಕಾಮಗಾರಿ
ಕೈಗೊಳ್ಳುವ
ಮುನ್ನ
ಎರಡೂ
ರಾಜ್ಯಗಳ
ಅನುಮತಿ
ಪಡೆಯಬೇಕು.
ಆದರೆ,
ಕರ್ನಾಟಕ
ತಮಿಳುನಾಡಿಗೆ
ಯಾವುದೇ
ಮಾಹಿತಿ
ನೀಡದೆ
ಮೇಕೆದಾಟು
ಯೋಜನೆ
ಆರಂಭಿಸುತ್ತಿದೆ
ಎಂದು
ಪ್ರಧಾನಿ
ಅವರಿಗೆ
ಬರೆದ
ಪತ್ರದಲ್ಲಿ
ಆರೋಪಿಸಿದ್ದರು.
[ಜಯಲಲಿತಾ
ವಿರೋಧ]
ಕರ್ನಾಟಕದ ಸ್ಪಷ್ಟನೆಗಳು : ಮೇಕೆದಾಟು ಯೋಜನೆ ಬಗ್ಗೆ 2014ರ ಏಪ್ರಿಲ್ನಲ್ಲಿ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 13 ಹಾಗೂ ಷೆಡ್ಯೂಲ್ 9 ರಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿ ತಿಂಗಳು ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ತಿಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ, ಯೋಜನೆಗೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಕಾವೇರಿ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿತು. [ಕರ್ನಾಟಕದ ಸ್ಪಷ್ಟನೆಗಳು]
ಕಾನೂನು
ತೊಡಕಿಲ್ಲ
:
ಮೇಕೆದಾಟು
ಕುಡಿಯುವ
ನೀರಿನ
ಯೋಜನೆ
ಅನುಷ್ಠಾನಕ್ಕೆ
ತಮಿಳುನಾಡು
ಆಪೇಕ್ಷಣೆ
ಎತ್ತುವ
ಆತಂಕ
ದೂರವಾಗಿದೆ
ಸುಪ್ರೀಂಕೋರ್ಟಿನಲ್ಲಿ
ರಾಜ್ಯದ
ಪರವಾಗಿ
ವಾದ
ಮಂಡಿಸುತ್ತಿರುವ
ಫಾಲಿ
ನಾರಿಮನ್
ಅವರ
ಸಲಹೆ
ಪಡೆದು
ಯೋಜನೆ
ಆರಂಭಿಸಲು
ಸಿದ್ಧತೆ
ನಡೆಸುತ್ತಿದ್ದೇವೆ
ಎಂದು
ಜಲಸಂಪನ್ಮೂಲ
ಸಚಿವ
ಎಂ.ಬಿ.
ಪಾಟೀಲ
ಅವರು
ಕಳೆದ
ವಾರ
ಹೇಳಿದ್ದರು.
ಪನ್ನೀರ್ ಸೆಲ್ವಂ ತಣ್ಣೀರು : ಸದ್ಯ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪುನಃ ಕರ್ನಾಟಕದ ಆಸೆಗೆ ತಣ್ಣೀರು ಸುರಿಯುತ್ತಿದ್ದಾರೆ. ಯೋಜನೆ ಅವಕಾಶ ನೀಡಬೇಡಿ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಕರ್ನಾಟಕ ಯೋಜನೆ ಜಾರಿಗೊಳಿಸುವುದು ಖಂಡಿತ ಎಂದು ಹೇಳಿದೆ. ನ.22ರ ಶನಿವಾರ ತಮಿಳುನಾಡಿನ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೇಕೆದಾಟು ಯೋಜನೆ ಕೈ ಬಿಡಬೇಕೆಂದು ಒತ್ತಾಯಿಸುತ್ತಿದ್ದಾರೆ.