ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ
ಬೆಂಗಳೂರು, ಸೆ. 16 : ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸೆ.17ರ ಬುಧವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಸೋಮವಾರ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ನಿವಾಸದಲ್ಲಿ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ.
ಹರಪನಹಳ್ಳಿ
ಶಾಸಕ
ಎಂ.ಪಿ.ರವೀಂದ್ರ
ಮತ್ತು
ರಾಮನಗರದ
ಪಿ.ನಾಗರಾಜ್
ಅವರ
ನಡುವೆ
ಕರ್ನಾಟಕ
ಹಾಲು
ಮಹಾ
ಮಂಡಳ
ಅಧ್ಯಕ್ಷ
ಸ್ಥಾನಕ್ಕಾಗಿ
ಪೈಪೋಟಿ
ನಡೆಯುತ್ತಿದೆ.
ಪಿ.ನಾಗರಾಜ್
ಅವರ
ಬೆಂಬಲಕ್ಕೆ
ಇಂಧನ
ಸಚಿವ
ಡಿ.ಕೆ.ಶಿವಕುಮಾರ್
ನಿಂತಿದ್ದು,
ನಾಗರಾಜ್
ಅವರನ್ನು
ಅಧ್ಯಕ್ಷರನ್ನಾಗಿ
ಮಾಡುವಂತೆ
ಒತ್ತಾಯಿಸುತ್ತಿದ್ದಾರೆ.
ಮೊದಲ ಅವಧಿಗೆ ಎಂ.ಪಿ.ರವೀಂದ್ರ ಮತ್ತು ಎರಡನೇ ಅವಧಿಗೆ ಪಿ.ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿರುವ ಕುರಿತು ಸೋಮವಾರ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ಇದಕ್ಕೆ ಒಪ್ಪಿಗೆ ನೀಡಿಲ್ಲ. ಮಂಗಳವಾರ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ನಾಗರಾಜ್ ಅವರು ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. [ದಲಿತರೇತರರ ದನಗಳ ಹಾಲು ಕಪ್ಪಗಿರುತ್ತಾ ಸಿದ್ರಾಮಣ್ಣಾ?]
ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ಅವರು ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು ಅಲ್ಲಿಂದ ಕೆಎಂಎಫ್ಗೆ ನಾಮ ನಿರ್ದೇಶನಗೊಂಡಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಒಕ್ಕೂಟದ ಸದಸ್ಯರಾಗಿರುವ ಪಿ.ನಾಗರಾಜ್ ಬಮೂಲ್ ಪರವಾಗಿ ನಾಮ ನಿರ್ದೇಶಗೊಂಡಿದ್ದಾರೆ. [ಕೆಎಂಎಫ್ ನಿಂದ ಮತ್ತೊಂದು ಜನಸ್ನೇಹಿ ಉತ್ಪನ್ನ]
ಕೆಎಂಎಫ್ ಅಧ್ಯಕ್ಷರಾಗಿದ್ದ ಸೋಮಶೇಖರ ರೆಡ್ಡಿ ಅವರ ಅಧಿಕಾರಾವಧಿ ಜು.25ರಂದು ಅಂತ್ಯಗೊಂಡಿತ್ತು. ಜಿಲ್ಲಾ ಒಕ್ಕೂಟಗಳ ಚುನಾವಣೆ ನಡೆಯುತ್ತಿದ್ದ ಕಾರಣ ಅಧ್ಯಕ್ಷ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಸದ್ಯ ಸೆ.17ರಂದು ಚುನಾವಣೆ ನಡೆಯಲಿದ್ದು ಆಯ್ಕೆಯಾದ ಅಧ್ಯಕ್ಷರ ಅವಧಿ ಐದು ವರ್ಷಗಳಾಗಿವೆ.