ಕರ್ನಾಟಕ ಹಾಲು ಒಕ್ಕೂಟ ಸಂಗ್ರಹಿಸುವ (KMF) ಹಾಲಿನ ಪ್ರಮಾಣದಲ್ಲಿ ದಶಲಕ್ಷ ಲೀ.ನಷ್ಟು ಇಳಿಕೆ
ಬೆಂಗಳೂರು ಜನವರಿ 17: ರಾಜ್ಯದಲ್ಲಿ ಸರಿ ಸುಮಾರು 26 ಲಕ್ಷಕ್ಕಿಂತಲೂ ಅಧಿಕ ಹಾಲು ಉತ್ಪಾದಕರನ್ನು ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (KMF)ಕ್ಕೆ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಸುಮಾರು 10ಲಕ್ಷ ಲೀಟರ್ ಕಡಿಮೆ ಹಾಲು ಸಂಗ್ರಹವಾಗಿದೆ.
ಕರ್ನಾಟಕ ಹಾಲು ಒಕ್ಕೂಟ (KMF)ಕ್ಕೆ 2021 ಮತ್ತು 2022ರಲ್ಲಿ ಪ್ರತಿನಿತ್ಯ 84.5 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಆದರೆ ಕಳೆದ ವರ್ಷ (2022) ಜುಲೈನಿಂದ ನಿತ್ಯ ಮೊದಲ ಬಾರಿಗೆ ಹಾಲು 75.6 ಲಕ್ಷ ಲೀಟರ್ ಹಾಲನ್ನು ಸಂಗ್ರಹವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಒಟ್ಟು ಸಂಗ್ರಹಣೆ ಹಾಲಿನ ಪೈಕಿ 9-10 ಲಕ್ಷ ಲೀಟರ್ ಹಾಲು ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿದೆ.
ಇಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆ ಇಳಿಕೆ ಆಗಲು ಕಳೆದ ವರ್ಷ ರಾಸುಗಳಿಗೆ ಆವರಿಸಿದ್ದ ಲಂಪಿ ಚರ್ಮ ರೋಗ, ಕಾಲು-ಬಾಯಿ ರೋಗ ಇಷ್ಟೇ ಅಲ್ಲದೇ ಅತಿವೃಷ್ಟಿಯಿಂದ ಕಳಪೆ ಮೇವು ಲಭ್ಯವಾಗಿದ್ದು, ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ರೋಗದಿಂದ ಸಾಕಷ್ಟು ರಾಸುಗಳು ಮೃತಪಟ್ಟಿವೆ. ಇನ್ನೂ ಮಳೆಗಾಲದ ನಂತರ ಹಸಿರು ಮೇವು ಸಿಗುವುದು ವಿರಳ. ಬೇಸಿಗೆಯಲ್ಲಂತೂ ಸಾಮಾನ್ಯವಾಗಿ ಹಸುಗಳ ಹಾಲು ಪೂರೈಕೆ ಕಡಿಮೆ ಇರುತ್ತದೆ.

ಹಾಲಿನ ಉಪ ಉತ್ಪನಗಳ ಬೆಲೆ ಏರಿಕೆ
ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದ್ದರಿಂದಲೇ ಹಾಲಿನ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಮತ್ತಿತರ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ ಎನ್ನಬಹುದು. ತುಪ್ಪ ಹಾಗೂ ಬೆಣ್ಣೆಯು ಕೆಜಿಗೆ 30 ರಿಂದ 40 ರೂ.ನಷ್ಟು ಏರಿಕೆ ಆಗಿದೆ. ಅಲ್ಲದೇ ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಪೂರೈಸುವ ಹಾಲಿನ ಪುಡಿ ಉತ್ಪಾದನೆಯಲ್ಲಿ ಇಳಿಕೆ ಮಾಡಲಾಗಿದೆ. ಶಾಲೆಗಳಿಗೆ ಏಪ್ರಿಲ್ವರೆಗೆ ರಜೆ ಇರುವ ಪರಿಣಾಮ ಹಾಲಿನ ಪುಡಿಯ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಲು ಉತ್ಪನ್ನಗಳ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ
ಉಪ ಉತ್ಪನ್ನಗಳ ಬೆಳೆ ಏರಿಕೆ, ಹಾಲಿನ ಪೂರೈಕೆ ಕಡಿಮೆಯಾಗಿದ್ದರಿಂದ ಚಿಲ್ಲರೆ ಮಳಿಗೆಗಳು ಮಾರುಕಟ್ಟೆ ತೊರೆದಿವೆ.
ಸಂಗ್ರಹಣೆಯ ಆಧಾರದ ಮೇಲೆ ಮಾರಾಟವು ಮೊದಲಿನಂತಿರದೇ ತುಸು ಬಿಗಿಯಾಗಿದೆ. ಏಪ್ರಿಲ್ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ತುಮಕೂರು ಸಹಕಾರಿ ಹಾಲು ಒಕ್ಕೂಟವೊಂದರಲ್ಲೇ ನಿತ್ಯ ಸುಮಾರು 70,000 ಲೀಟರ್ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ.

ಕೆಎಂಎಪ್ನಿಂದ ತುಪ್ಪ ಪೂರೈಕೆಯಲ್ಲಿ ಇಳಿಕೆ
ಕರ್ನಾಟಕ ಹಾಲು ಒಕ್ಕೂಟ (KMF) 2021-22ರಲ್ಲಿ ರಾಜ್ಯದ ಮಾರುಕಟ್ಟೆಗೆ ತಿಂಗಳಿಗೆ ಅಂದಾಜು 2 ಸಾವಿರ ಟನ್ ತುಪ್ಪ ಪೂರೈಸುತ್ತಿತ್ತು, ಸದ್ಯ ಹಾಲಿನ ಕೊರತೆಯಿಂದಾಗಿ ಮಾಸಿಕ 1,700 ಟನ್ ಮಾತ್ರ ಸರಬರಾಜು ಆಗುತ್ತಿದೆ. ಇನ್ನೂ ಮಾಸಿಕ 150 ಟನ್ ಬೆಣ್ಣೆ ಉತ್ಪಾದನೆ ಕುಸಿದಿದೆ. ತುಮಕೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲಾ ಒಕ್ಕೂಟದಿಂದ ಉತ್ಪನ್ನ ವಿದೇಶಕ್ಕೆ ರಫ್ತು
ಇಂತಹ ನಕರಾತ್ಮಕ ಬೆಳವಣಿಗೆ ಮಧ್ಯದಲ್ಲೂ ಹಾಸನ ಜಿಲ್ಲಾ ಹಾಲು ಒಕ್ಕೂಟವು ಹಾಲು ಮತ್ತದರ ಉಪ ಉತ್ಪನ್ನಗಳನ್ನು ಸಿಂಗಾಪುರ ಸೇರಿದಂತೆ ಇನ್ನಿತರ ದೇಶಗಳಿಗೆ ರಫ್ತು ಮಾಡಲು ನಿರ್ಧರಿಸಿದೆ. ಈ ಜಿಲ್ಲಾ ಹಾಲು ಒಕ್ಕೂಟ ಕೆಎಂಎಫ್ ಮೂಲಕ 1.5 ಲಕ್ಷ ಲೀ. ಟೆಟ್ರಾಪಾಕ್ ಹಾಲನ್ನು ಮಾಲ್ಡೀವ್ಸ್ ಪ್ರಯೋಗಾತ್ಮಕವಾಗಿ ರವಾನಿಸಿದೆ. ಉಳಿದಂತೆ ಬೇರೆ ಹಾಲು, ಬೆಣ್ಣೆ ರವಾನೆಗೆ ತಯಾರಿ ಮಾಡಿಕೊಂಡಿದೆ. ಈ ರೀತಿಯ ರಫ್ತಿನಿಂದ ಒಕ್ಕೂಟಕ್ಕೆ ವಾರ್ಷಿಕವಾಗಿ ಸುಮಾರು 500 ಕೋಟಿ ಆದಾಯ ಸಂದಾಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications