ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮತ್ತೆ ಸಂಪುಟ ಸಚಿವರಾದ ಕೆಜೆ ಜಾರ್ಜ್

By Mahesh
|
Google Oneindia Kannada News

ಬೆಂಗಳೂರು, ಸೆ. 24: ಡಿವೈಎಸ್ಪಿ ಎಂಕೆ ಗಣಪತಿ ಸಾವಿನ ಪ್ರಕರಣದ ಆರೋಪದಿಂದ ಮುಕ್ತರಾಗಿರುವ ಕೆಜೆ ಜಾರ್ಜ್ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಸೇರುತ್ತಿದ್ದಾರೆ. ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 26ರಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ.

ಸೋಮವಾರ ಬೆಳಗ್ಗೆ 9.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆರಂಭವಾಗಿದ್ದು, ರಾಜಭವನ ಸುತ್ತಾ ಬಿಗಿಭದ್ರತೆ ಒದಗಿಸಲಾಗಿದೆ.
* ಸಿದ್ದರಾಮಯ್ಯ ಅವರ ಸಂಪುಟದಲ್ಲಿ ರಾಜ್ಯ ಸಚಿವರಾಗಿರುವ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ರುದ್ರಪ್ಪ ಲಮಾಣಿ ಹಾಗೂ ಪ್ರಮೋದ್ ಮಧ್ವರಾಜ್ ಅವರನ್ನು ಸಂಪುಟ ದರ್ಜೆಗೇರಿಸುವ ಸುದ್ದಿ ಬಂದಿದೆ.
* ರಾಜ್ಯಪಾಲ ವಜುಭಾಯಿವಾಲ ಅವರು ಕೆಜೆ ಜಾರ್ಜ್ ಅವರಿಗೆ 10.22ರ ಸುಮಾರಿಗೆ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.
* ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿಕೆ ಶಿವಕುಮಾರ್, ಎಚ್ ಸಿ ಮಹದೇವಪ್ಪ, ರಾಮಲಿಂಗಾರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಜಾರ್ಜ್ ಸಂಪುಟ ಸೇರಿದರೆ, ಕಾಂಗ್ರೆಸ್ ನಾಶ: ಪೂಜಾರಿ]

ಪ್ರತಿಜ್ಞಾವಿಧಿ ಬೋಧಿಸಿದ ವಜುಭಾಯಿ ವಾಲ

ಪ್ರತಿಜ್ಞಾವಿಧಿ ಬೋಧಿಸಿದ ವಜುಭಾಯಿ ವಾಲ

ಡಿವೈಎಸ್ಪಿ ಎಂಕೆ ಗಣಪತಿ ಸಾವಿನ ಪ್ರಕರಣದ ಆರೋಪದಿಂದ ಮುಕ್ತರಾಗಿರುವ ಕೆಜೆ ಜಾರ್ಜ್ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಸೇರಿದ್ದಾರೆ. ಸಿಐಡಿಯಿಂದ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 26ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.

ಸಿಐಡಿಯಿಂದ ಜಾರ್ಜ್ ಗೆ ಕ್ಲೀನ್ ಚಿಟ್

ಸಿಐಡಿಯಿಂದ ಜಾರ್ಜ್ ಗೆ ಕ್ಲೀನ್ ಚಿಟ್

ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರು ಆರೋಪ ಹೊತ್ತಿದ್ದರು. ಆದರೆ, ಸಿಐಡಿಯಿಂದ ಜಾರ್ಜ್ ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಮಡಿಕೇರಿಯ ಜೆಎಂಎಎಫ್ ಸಿ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದರು.

 ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು

ಎಂಕೆ ಗಣಪತಿ ಪ್ರಕರಣದಲ್ಲಿ ಆರೋಪ ಹೊತ್ತುಕೊಂಡಿದ್ದ ಕೆಜೆ ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
* ವಿಪಕ್ಷಗಳ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿದ್ದೇನೆ. ನಾನು ನಿರಪರಾಧಿ ಎಂದು ಜಾರ್ಜ್ ಹೇಳಿದ್ದರು. ಈಗ ಎರಡೂವರೆ ತಿಂಗಳೊಳಗೆ ಮತ್ತೆ ಸಚಿವ ಸಂಪುಟ ಸೇರುತ್ತಿದ್ದಾರೆ.

ಮತ್ತೆ ಬೆಂಗಳೂರು ನಗರಾಭಿವೃದ್ಧಿ ಖಾತೆ

ಮತ್ತೆ ಬೆಂಗಳೂರು ನಗರಾಭಿವೃದ್ಧಿ ಖಾತೆ

ಸದ್ಯ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಳಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಉಳಿಸಿಕೊಂಡಿದ್ದು, ಜಾರ್ಜ್ ಅವರು ಸಂಪುಟ ಸೇರಿದ ಬಳಿಕ ಖಾತೆಯನ್ನು ಹಸ್ತಾಂತರಿಸಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಗಣ್ಯರು

ಪ್ರಮಾಣ ವಚನ ಸಮಾರಂಭದಲ್ಲಿ ಗಣ್ಯರು

ರಾಜ್ಯಪಾಲ ವಜುಭಾಯಿವಾಲ ಅವರು ಕೆಜೆ ಜಾರ್ಜ್ ಅವರಿಗೆ 10.22ರ ಸುಮಾರಿಗೆ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.
* ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿಕೆ ಶಿವಕುಮಾರ್, ಎಚ್ ಸಿ ಮಹದೇವಪ್ಪ, ರಾಮಲಿಂಗಾರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
KJ George to be reinducted in to Siddaramaiah Cabinet on Monday(September 26). KJ George who was Former Minister for Bengaluru Development and Town Planning will take oath as a Minister in Karnataka Government.KJ George was forced to resign from his post by the opposition after he was accused in DYSP, MK Ga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X