Get Updates
Get notified of breaking news, exclusive insights, and must-see stories!

kichcha Sudeep: ಆ ಎರಡು ಪಕ್ಷದಿಂದ ಬಿಗ್‌ ಆಫರ್: ಕಿಚ್ಚ ಸುದೀಪ್‌ ನಡೆ ಯಾವ ಪಾರ್ಟಿ ಕಡೆ?

ಬೆಂಗಳೂರು,ಡಿಸೆಂಬರ್‌ 17: ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ? ಈ ಒಂದು ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸ್ವತಃ ನಟ ಸುದೀಪ್ ಅವರೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದ ಸುದೀಪ್‌ ಅವರು ಯಾವ ಪಕ್ಷವನ್ನ ಸೇರ್ಪಡೆಯಾಗಲಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಪ್ರಶ್ನೆಗೆ ನಟ ಕಿಚ್ಚ ಸುದೀಪ್‌ ಅವರೇ ಉತ್ತರಿಸಿದ್ದಾರೆ.

ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ಒಂದು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವೂ ಕೇಳಿಬಂದಿತ್ತು ಎನ್ನುವ ಕುರಿತು ನಟ ಸುದೀಪ್ ಅವರೇ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಯಾವ ಯಾವ ಪಕ್ಷದಿಂದ ಯಾವ ಆಫರ್‌ ಬಂದಿತ್ತು ಎಂಬ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

Kiccha Sudeep reveals secret with DK Shivakumar about entering politics

ರಾಜಕೀಯದ ಬಗ್ಗೆ ನನಗೆ ಇನ್ನೂ ಆಸಕ್ತಿ ಹುಟ್ಟಿಲ್ಲ. ನಾನು ಬರುವುದೇ ಇಲ್ಲ ಅಂತ ಹೇಳಿದ್ರೆ ಅದು ಬದಲಾವಣೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಭೇಟಿ ಆಗಿದ್ವಿ, ಡಿ ಕೆ ಶಿವಕುಮಾರ್‌ ಅವರು ನನಗೆ ಉತ್ತಮ ಸ್ನೇಹಿತರು. ಇವರು ಬಂದ್ರೆ ಅವರು ಬರ್ತಾರೆ. (ಕಾಂಗ್ರೆಸ್‌ ನವ್ರು ಬಂದ್ರೆ, ಬಿಜೆಪಿಯವರು ಬರ್ತಾರೆ) ಯಾರಾದ್ರೂ ಒಬ್ಬರು ನನ್ನ ಎತ್ಕೊಂಡ್‌ ಹೋಗ್ತಾರೆ. ಇಬ್ಬರು ಸ್ನೇಹಿತರೇ ನನಗೆ ಎಂದು ಸುದೀಪ್‌ ಅವರು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ಕೇಳಿ ಬಂದ ಕುರಿತು ಕಿಚ್ಚ ಸುದೀಪ್‌ ಅವರು ಮಾತನಾಡಿ, ಯಾವ ಊರು, ಆ ಊರು, ಈ ಊರು ಅಂತ ಅಲ್ಲ. ನಿಮಗೆ ಯಾವ ಊರು ಬೇಕು ಹೇಳಿ, ನಾವು ಅದನ್ನ ಬಿಡ್ಸಿ ಮಾಡಿಕೊಡ್ತಿವಿ ಅಂತ ಬಂದಿತ್ತು ಎಂದು ಕೈ ನಾಯಕರು ಕೊಟ್ಟ ಆಫರ್‌ ಬಗ್ಗೆ ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ.

ಸಿನಿಮಾದಲ್ಲಿ ಇನ್ನೂ ಕೆಲಸ ಮಾಡ್ಬೇಕು. ಕೆಲವು ಕೆಲಸಗಳಿವೆ, ಇನ್ನೂ ಏನೇನೋ ಮಾಡ್ಬೇಕು. ರಾಜಕೀಯ ಎನ್ನುವುದು ತುಂಬಾ ದೊಡ್ಡ ಜವಾಬ್ದಾರಿ. ಅದು ಹಸಿವಲ್ಲ, ಅದು ಜವಾಬ್ದಾರಿ. ನೀವು ಬೆಳಗ್ಗೆ ನಿಮಗೋಸ್ಕರ ಎದ್ದೇಳೋಕೆ ಆಗಲ್ಲ, ಬೇರೆಯವರಿಗೊಸ್ಕರ ಏಳ್ಬೇಕು.‌ ಎಲ್ಲಾರು ತೃಪ್ತಿಯಾದಮೇಲೆ ಮಲ್ಕೊಬೇಕು. ಅದಕ್ಕೆ ರೆಡಿ ಇದ್ದಾಗ ಬರ್ತಿನಿ . ನನಗೆ ಎರಡು ಕಡೆ ಕಾಲಿಡೋಕೆ ಇಷ್ಟ ಇಲ್ಲ. ರಾಜಕೀಯಕ್ಕೆ ಹೋದಾಗ ಎರಡು ಕಡೆ ಕಾಲಿಡಬಾರದು. ಸಿನಿಮಾರಂಗದಲ್ಲಿಯೇ ಕೆಲಸ ಇದೆ. ತುಂಬಾನೆ ಕೆಲಸ ಮಾಡೋದಿದೆ. ಸಿನಿರಂಗದಲ್ಲಿಯೇ ಇನ್ನು ದುಡಿಯೋದು ಇದೆ. ಹಾಗಾಗಿಯೇ ಸದ್ಯಕ್ಕೆ ರಾಜಕೀಯ ಯೋಚನೆ ಇಲ್ಲ ಅನ್ನುವ ಅರ್ಥದಲ್ಲಿಯೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ರಾಜಕೀಯ ಬೇಡ ಅಂತಲೂ ಹೇಳಲಿಲ್ಲ.

ನಾನು ಕಳೆದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರ ಮಾಡಿದ್ದೆ. ನಾನು ಬಸವರಾಜ ಬೊಮ್ಮಾಯಿ ಅವರಿಗೊಸ್ಕರ ಪ್ರಚಾರ ಮಾಡಿದ್ದು, ಅವರು ನನಗೆ ತುಂಬಾ ಆತ್ಮೀಯರು ಹೀಗಾಗಿ ನಾನು ಪ್ರಚಾರಕ್ಕೆ ಹೋಗಿದ್ದೆ ಎಂದು ನಟ ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ.

ನನಗೆ ಸಿನಿಮಾವೇ ದೊಡ್ಡ ವೇದಿಕೆ. ಈ ದೊಡ್ಡ ವೇದಿಕೆಯಿಂದಲೇ ನನ್ನ ರಾಜಕೀಯಕ್ಕೆ ಕರೆಯುತ್ತಿರುವುದು. ಸಿನಿಯಾ ಕ್ಷೇತ್ರ ದೊಡ್ಡ ವೇದಿಕೆ. ಇದಕ್ಕಿಂತ ದೊಡ್ಡ ವೇದಿಕೆ ಬರುವುದೇ ಇಲ್ಲ . ನನಗೆ ಹೆಸರು ಕೊಟ್ಟಿದ್ದು ಹಾಗೂ ಕೋಟಿ ಕೋಟಿ ಜನ ಪ್ರೀತಿ ಗಳಿಸಿದ್ದೇನೆ. ಸಿನಿಮಾ ಕ್ಷೇತ್ರವೇ ನನಗೆ ದೊಡ್ಡ ವೇದಿಕೆ, ಇದಕ್ಕಿಂತ ದೊಡ್ಡ ವೇದಿಕೆ ಯಾವುದು ಇಲ್ಲ ಎಂದು ಸುದೀಪ್‌ ಅವರು ರಾಜಕೀಯದ ಕುರಿತು ಮಾತನಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+