'KSRTC' ಇನ್ಮುಂದೆ ಕರ್ನಾಟಕದ್ದೇ ಸ್ವತ್ತು!
ಕೊಚ್ಚಿ/ಬೆಂಗಳೂರು, ನ.26: ಕರ್ನಾಟಕ ಹಾಗೂ ತೆಲಂಗಾಣ ಒಂದೇ ರಾಜ್ಯಪಕ್ಷಿ ಹೊಂದಿರುವುದರ ಬಗ್ಗೆ ನಿಮಗೆ ತಿಳಿದಿದೆ. ಅದೇ ರೀತಿ ಕೇರಳ ಹಾಗೂ ಕರ್ನಾಟಕದ ಸಾರಿಗೆ ಸಂಸ್ಥೆಗಳನ್ನು 'KSRTC' ಎಂದೇ ಕರೆಯಲಾಗುತ್ತದೆ. ಆದರೆ 'KSRTC' ಎಂಬ ಪದ ಯಾರ ಸ್ವತ್ತು ಎಂಬುದು ಈಗ ಚರ್ಚಾರ್ಹ ವಿಷಯವಾಗಿದೆ.
ಮೊದಲೇ ಆರ್ಥಿಕ ದುಃಸ್ಥಿತಿಯಲ್ಲಿರುವ ಕೇರಳದ ರಾಜ್ಯ ಸಾರಿಗೆ ಸಂಸ್ಥೆ ಈಗ 'KSRTC' ಪದ ಸಂಪತ್ತನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. KSRTC ಎಂಬ ಟ್ರೇಡ್ ಮಾರ್ಕ್ ನಮ್ಮ ಸ್ವತ್ತು. ಗಂಡಬೇರುಂಢ ಲಾಂಛನದೊಂದಿಗೆ KSRTC ಪದ ಬಳಕೆ ಮಾಡುತ್ತಾ ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾದಿಸಿದೆ. ಈ ಬಗ್ಗೆ ಕೈಗಾರಿಕಾ ಸಚಿವಾಲಯದ ಅಡಿ ಬರುವ ಟ್ರೇಡ್ ಮಾರ್ಕ್ಸ್ ನೋಂದಣಿ ವಿಭಾಗಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಟ್ರೇಡ್ ಮಾರ್ಕ್ಸ್ ನೋಂದಣಿ ಪುರಸ್ಕರಿಸಿದೆ.

ಆದರೆ, ಕೇರಳ ಆರ್ ಟಿಸಿ ತನ್ನ ಪಟ್ಟು ಬಿಡದೆ KSRTC ಮಾರ್ಕ್ ಪಡೆಯಲು ಕೊನೆಯ ಯತ್ನ ನಡೆಸಿದೆ. 2013ರಲ್ಲೇ ಕರ್ನಾಟಕ KSRTC ಟ್ರೇಡ್ ಮಾರ್ಕ್ ನೋಂದಣಿ ಮಾಡಿಸಿದೆ. ಅದರೆ, ಇದಕ್ಕೆ ಆಕ್ಷೇಪಣೆ ಸಲ್ಲಿಸಿ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಕೇರಳ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಚಾಕೋ ಹೇಳಿದ್ದಾರೆ. [ಸೋಷಿಯಲ್ ವಾರ್; ಕೆಎಸ್ಆರ್ಟಿಸಿ ಫೇಸ್ಬುಕ್ ಪುಟದಲ್ಲಿ 'ಮಲ್ಲು' ದಾಂಧಲೆ]
ಇದೇ ರೀತಿ ಸಮಸ್ಯೆ ಆಂಧ್ರಪ್ರದೇಶ ಬಸ್ ಗಳ ನಡುವೆಯೂ ಇದೆ. 'ಗರುಡ' ಸಾರಿಗೆ ಸೇವೆ ಬಸ್ ಗಳನ್ನು ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ಬಳಸುತ್ತಿದ್ದು, ಗರುಡ ಪದ ಬಳಕೆ ಇನ್ನೂ ಕೆಲವು ರಾಜ್ಯಗಳಲ್ಲಿವೆ.
Association of State Road Transport Undertakings (ASRTU) ಮುಂತಾದ ಸಾರಿಗೆ ಉನ್ನತ ಸಂಸ್ಥೆಗಳು ಕೂಡಾ KSRTC ಎಂದರೆ ಕರ್ನಾಟಕ ಸಾರಿಗೆ ಸಂಸ್ಥೆ ಎಂದೇ ಪರಿಗಣಿಸಿರುವುದು ಕೇರಳಕ್ಕೆ ಮುಳುವಾಗಿದೆ. ನಾವು KSRTC ಹಾಗೂ ಕೇರಳ ಆರ್ ಟಿಸಿ ಎಂದು ಬಳಸಲು ಅನುಮತಿ ನೀಡುವಂತೆ ಕೋರುತ್ತೇವೆ ಎಂದು ಅಂಟೋನಿ ಚಾಕೋ ಹೇಳಿದ್ದಾರೆ.
-
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು












Click it and Unblock the Notifications