Gruha Lakshmi Scheme: 'ನಾವೇ ಕ್ಯಾಲೆಂಡರ್ ತರುತ್ತೇವೆ, ಗೃಹಲಕ್ಷ್ಮಿ ಹಣ ಜಮಾ ದಿನಾಂಕ ನಿಗದಿ ಮಾಡಿ'

ಬೆಂಗಳೂರು,ಫೆಬ್ರವರಿ 28: ಪ್ರತೀ ತಿಂಗಳ ಗ್ಯಾರಂಟಿ ಯೋಜನೆಯ ಹಣವನ್ನು ಕಟಾ ಕಟ್ ಹಾಕುತ್ತೇವೆ ಎಂದವರು ಈಗ ಕಟ್ ಕಟ್ ಮಾಡಿ ಕೊಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರಕಾರವನ್ನು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಗ್ಯಾರಂಟಿ ಹಣವನ್ನು ಕಟಾ ಕಟ್ ಹಾಕುತ್ತೇವೆ ಹೇಳಿದ್ದರು. ಆದರೆ, ಅವರು ಹೇಳಿದಂತೆ ಜನರಿಗೆ ಹಣ ಜಮೆ ಮಾಡುತ್ತಿಲ್ಲ. ನುಡಿದಂತೆ ನಡೆಯುತ್ತಿಲ್ಲ. ಅವರು ಯಾವ ದಿನ ಗೃಹಲಕ್ಷ್ಮೀ ಹಣ ಹಾಕುತ್ತಾರೆ ಎಂದು ಹೇಳಲಿ. ಆಗಲಿಲ್ಲ ಎಂದರೆ ನಾವೇ ಕ್ಯಾಲೆಂಡರ್ ತೆಗೆದುಕೊಂಡು ಹೋಗುತ್ತೇವೆ. ದಿನಾಂಕವನ್ನು ಮಾರ್ಕ್ ಮಾಡಿ ಕೊಡಲಿ ಎಂದು ಹೇಳಿದರು.

ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಆಗದ ಕಾರಣಕ್ಕೆ ನಾಡಿನ ಮಹಿಳೆಯರು ಗೊಂದಲಕ್ಕೆ ತುತ್ತಾಗಿದ್ದಾರೆ. ಮನಸ್ಸಿಗೆ ಬಂದ ಹಾಗೆ ಸರ್ಕಾರ ಹಣವನ್ನು ಜಮೆ ಮಾಡುತ್ತಿದೆ. ಚುನಾವಣೆಗಳು ಬಂದಾಗ ಮೂರ್ನಾಲ್ಕು ತಿಂಗಳ ಹಣವನ್ನು ಒಮ್ಮೆಲೇ ಜಮೆ ಮಾಡುತ್ತಾರೆ. ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಚುನಾವಣೆ ಗೆಲ್ಲಲು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

Kata Kat Guarantee-Transfer the Money Nikhil Kumaraswamy Urges State Government

ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ಸುಲುಭವಾಗಿ ಯಮಾರಿಸುತ್ತಿದೆ. ಅದರ ವಿರುದ್ಧ ನಾವು ವಿಧಾನಮಂಡಲದ ಒಳಗೆ, ಹೊರಗೆ ಹೋರಾಟ ನಡೆಸುತ್ತೇವೆ. ಸರ್ಕಾರ ಯಾವ ರೀತಿ ಮೋಸ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಕೂಡಲೇ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಣ ಜಮೆ ಮಾಡುವ ನಿಖರ ದಿನಾಂಕ ಘೋಷಣೆ ಮಾಡಬೇಕು. ಒಂದು ವೇಳೆ ಸರ್ಕಾರದಲ್ಲಿ ಹಣ ಇಲ್ಲ ಎಂದಾದರೆ ಅದನ್ನಾದರೂ ಹೇಳಬೇಕು. ಒಂದು ಕಡೆ ಗ್ಯಾತಂಟಿ ನೆಪದಲ್ಲಿ ರಾಜ್ಯದ ಜನರ ಮೇಲೆ ತೆರಿಗೆ, ಬೆಲೆ ಏರಿಕೆ ಭಾರ ಹೇರಿ ಸುಲಿಗೆ ಮಾಡುತ್ತಿದೆ. ಇನ್ನೊಂದು ಕಡೆ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದೆ. ಇಂತಹ ದ್ವಿಮುಖ ನೀತಿ ಬೇಡ. ಸಕಾಲಕ್ಕೆ ಗ್ಯಾರಂಟಿ ಹಣ ಜನರಿಗೆ ಮುಟ್ಟಬೇಕು. ಈ ಬಗ್ಗೆ ಜೆಡಿಎಸ್ ಹೋರಾಟ ನಡೆಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವೇ ಕಳೆದಿದೆ. ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ಕಾಂಗ್ರೆಸ್ ಪ್ರಣಾಳಿಕೆ ನೀಡಿದ್ದೀರಿ. ಐದು ಗ್ಯಾರಂಟಿ ಕೊಟ್ಟಿದ್ದೀರಿ. ಅದರೆ ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಸೇರಿ ಹಲವು ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸಲು ವಿಫಕವಾಗಿದ್ದೀರಿ. ನೀವು ನುಡಿದಂತೆ ಜನರ ಹಣವನ್ನು ಯಾವಾಗ ಅವರ ಬ್ಯಾಂಕ್ ಖಾತೆಗೆ ಹಾಕುತ್ತೀರಿ? ನಾನು ಕ್ಯಾಲೆಂಡರ್ ತೆಗೆದುಕೊಂಡು ಬರುತ್ತೇನೆ. ನೀವು ದಿನಾಂಕ ಗುರುತು ಮಾಡಿ ಕೊಡಿ ಎಂದು ಅವರು ಹೇಳಿದರು.

ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ್ ಅವರೇ.. 2000 ಸಾವಿರ ಕೊಟ್ಟು ಮಹಿಳೆಯರ ಸಬಲೀಕರಣ ಮಾಡುತ್ತೇವೆ ಎಂದು ಹೇಳಿದ್ದೀರಿ. ಆದರೆ, ಈಗ ರಾಜ್ಯದ ಮಹಿಳೆಯರು ಕಟಾ ಕಟ್ ಗ್ಯಾರಂಟಿ ಕಟ್ ಕಟ್ ಆಗಿ ಬರುತ್ತಿದೆಯಲ್ಲ ಎಂದು ಚಕಿತರಾಗಿದ್ದಾರೆ. ಇದಕ್ಕೆ ನೀವಿಬ್ಬರೂ ಉತ್ತರ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು. ನಮ್ಮದು ನುಡಿದಂತೆ ನಡೆಯುವ ಸರ್ಕಾರ, ನುಡಿದಂತೆ ನಡೆಯುತ್ತೇವೆ ಅಂತ ಭಾಷಣ ಬಿಡ್ತೀರಾ.? ನೀವು ಪ್ರಣಾಳಿಕೆ ಘೋಷಣೆ ಮಾಡುವಾಗ ನಿಮಗೆ ಅರಿವು ಇರಲಿಲ್ವಾ? ಹಣದ ಬಗ್ಗೆ ಐಡಿಯಾ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ನಾವು ಯಾರು ಏನು ಕೇಳಲ್ಲ. ನೀವೇ ಆಡಳಿತ ನಡೆಸುತ್ತಿರೋದು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವಾಗ ನಡೆಸ್ತೀರೋ ಗೊತ್ತಿಲ್ಲ. ಜನ ಯಾವುದಾದರೂ ಚುನಾವಣೆ ಬರಲಿ ಎಂದು ಕಾಯುವಂತೆ ಆಗಿದೆ. ಆಗಲಾದರೂ ಹಣ ಬರಬಹುದು ಎಂದು ಮೈಂಡ್ ಸೆಟ್ ಮಾಡಿಕೊಂಡಿದ್ದಾರೆ. ಜನ ಗ್ಯಾರಂಟಿ ಹಣ ಬಿಡುಗಡೆ ಮಾಡ್ತಾರೆ ಅಂತ ಚಿಂತನೆ ಮಾಡ್ತಿದ್ದಾರೆ. ಗ್ಯಾರಂಟಿ ಹಣವನ್ನು ಬಿಡುಗಡೆ ಮಾಡ್ತೀರಾ.? ಇಲ್ಲವಾದರೆ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾ? ಪರಿಸ್ಥಿತಿ ಬಂದರೆ ಗ್ಯಾರಂಟಿ ಯೋಜನೆಬಗ್ಗೆ ಹೋರಾಟ ಮಾಡಬೇಕಾಗುತ್ತೆ ಎಂದು ಅವರು ಎಚ್ಚರಿಕೆ ನೀಡಿದರು.

ಗ್ಯಾರಂಟಿಯಿಂದ 25 ಸಾವಿರ ಕೋಟಿ ಹೊರೆ ಆಗುತ್ತೆ ಅಂತ ಅರಿವೇ ಇಲ್ಲದೆ ಯಾಕೇ ಘೋಷಣೆ ಮಾಡಿದ್ರಿ.? ಹಾಲಿನ ದರ, ನೀರಿನ ದರ, ಮೆಟ್ರೋ ದರದ ಬೆಲೆ ಜಾಸ್ತಿ ಮಾಡಿದ್ದೀರಾ.? ಹಾಗೂ ಪ್ರತಿನಿತ್ಯ ಬಳಸುವ ತೈಲದ ಬೆಲೆಯೂ ಜಾಸ್ತಿ ಮಾಡಿದ್ದೀರಾ.? ಗ್ಯಾರಂಟಿಗಳಿಂದ ಜನ ಸಾಮಾನ್ಯರಿಗೆ ಹೊರೆ ಆಗಿದೆ ಎಂದರು. ಈ ಸರ್ಕಾರದಲ್ಲಿ ಗುತ್ತಿಗೆದಾರರ ಪರಿಸ್ಥಿತಿ ಏನಾಗಿದೆ.ಇದೆಲ್ಲವೂ ಆಡಳಿತ ವಿಫಲತೆ. ಗ್ಯಾರಂಟಿ ಯೋಜನೆಗೆ ನಿಮ್ಮ ಹತ್ರ ಹಣ ಇದೀಯೋ ಇಲ್ವೋ ತಿಳಿಸಿ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಅವರ ಕಿಸಾನ್ ಯೋಜನೆ DDT ಮೂಲಕ ನೇರವಾಗಿ ರೈತರಿಗೆ ಖಾತೆಗೆ ಹಣ ತಲುಪುತ್ತಿದೆ. ಅದರಿಂದ ರಾಜ್ಯ ಸರ್ಕಾರ ಕಮಿಷನ್ ಕೈ ತಪ್ಪಿರಬೇಕು ನರೇಂದ್ರ ಮೋದಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಗೆ ಕಮಿಷನ್ ಬರ್ತಾ ಇಲ್ಲ. ನರೇಂದ್ರ ಮೋದಿ ಅವರು ಕೇಂದ್ರದ ಹಣ ರೈತರಿಗೆ ನೇರವಾಗಿ ತಲುಪುತ್ತಿದೆ. ನಿಮ್ಮಗ್ಯಾರಂಟಿ ಹಣ ತಲುಪುತ್ತಿಲ್ಲ ಅಂತ ಹೆಣ್ಣು ಮಕ್ಕಳು ಹೇಳ್ತಾ ಇದ್ದಾರೆ.ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು ಎಂದರು.

ಇತ್ತೀಚೆಗೆ ಉದಯಗಿರಿ ಘಟನೆ ಪೂರ್ವ ನಿಯೋಜಿತ. ಎಲ್ಲ ಸಮುದಾಯ ತಪ್ಪುಮಾಡಿದ ಸಂದರ್ಭದಲ್ಲಿ ಪಾರದರ್ಶಕವಾದ ಆಡಳಿತ ಕೋಡೋದು ಸರ್ಕಾರ ಜವಾಬ್ದಾರಿ.ಪೊಲೀಸರಿಗೆ ರಕ್ಷಣೆ ಕೊಡೋದು ಸರ್ಕಾರದ ಕೆಲಸ. ಮೊದಲೇ ಕಲ್ಲು ಸಂಗ್ರಹ ಮಾಡಿ ದಾಳಿ ಮಾಡ್ತಾರೆ ಅಂದರೆ, ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ. ಪೊಲೀಸರಿಗೆ ರಕ್ಷಣೆ ಇಲ್ಲ ಅಂದರೆ ಜನ ಸಾಮಾನ್ಯರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ಮೂರು ಉಪಚುನಾವಣೆಯ ವೇಳೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದ್ರು. ಲೋಕಸಭಾ ಚುನಾವಣೆ ಸಂದರ್ಭಗಳಲ್ಲಿ ಫಲಾನುಭವಿಗಳ ಸಭೆ ಕರೆದು ನೇರವಾಗಿ ಡಿ.ಸಿಎಂ ಸಹೋದರ ಬೆಂ.ಗ್ರಾಮಾಂತರದ ಅಭ್ಯರ್ಥಿ ರಾಮನಗರದಲ್ಲಿ ಕಾಂಗ್ರೆಸ್ ಮತ ಹಾಕಿಲ್ಲ ಅಂದರೆ ಗ್ಯಾರಂಟಿ ಹಣ ನಿಲ್ಲುತ್ತೆ ಅಂತ ಬೆದರಿಕೆ ಹಾಕಿದ್ರೆ. ರಾಜ್ಯದ ಜನತೆ 19 ಸಂಸದರನ್ನ ಜನ ಆಶೀರ್ವಾದ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರಕ್ಕೆ ಜನತೆಯೇ ಬುದ್ದಿ ಕಳಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರಕ್ಕೆ ಮಾತನಾಡಿದ ಅವರು ಇದು ಏನು ಹೊಸದಲ್ಲ ಹಲವಾರು ಸರ್ಕಾರ ಕುಮಾರಣ್ಣರನ್ನ ಕಟ್ಟಿ ಹಾಕುವುದಕ್ಕೆ ಮಾಡ್ತಿದ್ದಾರೆ.1985 ರಲ್ಲಿ‌ ಈ ಜಮೀನು ಖರೀದಿ ಆಗಿದೆ.
ಜಮೀನಿನ ಮಾಲೀಕರು ಯಾರು ಕೂಡ ಅನ್ಯಾಯ ಆಗಿದೆ ಅಂತ ಹೇಳಿಲ್ಲ. ಕಾಂಗ್ರೆಸ್ ನವರು ಹೊಸದಾಗಿ ಮೊನ್ನೆಯಿಂದ ಪ್ರಾರಂಭ ಮಾಡಿದ್ದಾರೆ. ಅವರೇ ಕೆಲವರನ್ನು ಕಳಿಸಿ ಆರೋಪ ಮಾಡಿದ್ದಾರೆ. 40 ವರ್ಷದಿಂದ ಇಲ್ಲದ್ದೂ ಈಗ ಆರೋಪ‌ ಮಾಡ್ತಿದ್ದಾರೆ. ಎಲ್ಲದಕ್ಕೂ ಕಾಲ ಉತ್ತರ‌ ಕೊಡುತ್ತೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+