Karnataka Weather: ಮಳೆ ಮುನ್ಸೂಚನೆ ಇದ್ಯಾ?-ಇಲ್ಲಿದೆ ಜನವರಿ 28ರ ವರದಿ
ಕರ್ನಾಟಕ, ಜನವರಿ, 28: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣವೇ ಮುಂದುವರೆಯುತ್ತಿದೆ. ಇನ್ನು ಇಂದು (ಜನರಿ 28) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಾತಾವರಣ ಹೇಗಿರಲಿದೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಇಂದು ಮಧ್ಯಾಹ್ನದ ವೇಳಗೆ ಬಿಸಿಲು ಹಾಗೂ ಒಣಹವೆಯ ವಾತಾವರಣ ಇರಲಿದೆ. ಹಾಗೆಯೇ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆ 10 ಗಂಟೆಯಾದರೂ ಚಳಿಯ ವಾತಾವರಣ ಮುಂದುವರೆಯಲಿದೆ. ಹಾಗೆಯೆ ಸಂಜೆಯು ಕೂಎ ಶೀತ ಗಾಳಿ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇದೆ.

ಚಿಕ್ಕಮಗಳೂರು, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಕಡೆಗೆ ಚಳಿಯ ಪ್ರಮಾಣ ಹೆಚ್ಚಿರಲಿದೆ. ಇನ್ನು ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಷ್ಣಾಂಶ ದಾಖಲು ಆಗಲಿದೆ ಎನ್ನುವ ಮಾಹಿತಿಯನ್ನು ನೋಡುವುದಾದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಆಗಲಿದೆ, ಮಂಗಳೂರು ಗರಿಷ್ಠ 32 ಕನಿಷ್ಠ 23, ಶಿವಮೊಗ್ಗ ಗರಿಷ್ಠ 31 ಕನಿಷ್ಠ 18, ಬೆಳಗಾವಿ ಗರಿಷ್ಠ 31 ಕನಿಷ್ಠ 17, ಮೈಸೂರಿನಲ್ಲಿ ಗರಿಷ್ಠ 31 ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಮಂಡ್ಯ ಗರಿಷ್ಠ 32 ಕನಿಷ್ಠ 19, ಮಡಿಕೇರಿ ಗರಿಷ್ಠ 30 ಕನಿಷ್ಠ 16, ರಾಮನಗರ ಗರಿಷ್ಠ 31 ಕನಿಷ್ಠ 18, ಹಾಸನ ಗರಿಷ್ಠ 28 ಕನಿಷ್ಠ 17, ಚಾಮರಾಜನಗರ ಗರಿಷ್ಠ 32 ಕನೊಷ್ಠ 17, ಚಿಕ್ಕಬಳ್ಳಾಪುರ ಗರಿಷ್ಠ 27 ಕನಿಷ್ಠ 17, ಕೋಲಾರ ಗರಿಷ್ಠ 28 ಕನಿಷ್ಠ 17, ತುಮಕೂರು ಗರಿಷ್ಠ 29 ಕನಿಷ್ಠ 17, ಉಡುಪಿ ಗರಿಷ್ಠ 31 ಕನಿಷ್ಠ 22, ಕಾರವಾರ ಗರಿಷ್ಠ 32 ಕನಿಷ್ಠ 21, ಚಿಕ್ಕಮಗಳೂರು ಗರಿಷ್ಠ 31 ಕನಿಷ್ಠ 18, ದಾವಣಗೆರೆಯಲ್ಲಿ ಗರಿಷ್ಠ 31 ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ.
ಹುಬ್ಬಳ್ಳಿ ಗರಿಷ್ಠ 31 ಕನಿಷ್ಠ 18, ಚಿತ್ರದುರ್ಗ ಗರಿಷ್ಠ 29 ಕನಿಷ್ಠ 18, ಹಾವೇರಿ ಗರುಷ್ಠ 32 ಕನಿಷ್ಠ 18, ಬಳ್ಳಾರಿ ಗರಿಷ್ಠ 32 ಕನಿಷ್ಠ 19, ಗದಗ ಗರಿಷ್ಠ 31 ಕನಿಷ್ಠ 19,
ಕೊಪ್ಪಳ ಗರಿಷ್ಠ 32 ಕನಿಷ್ಠ 19, ರಾಯಚೂರು ಗರಿಷ್ಠ 32 ಕನಿಷ್ಠ 20, ಯಾದಗಿರಿ ಗರಿಷ್ಠ 32 ಕನಿಷ್ಠ 19, ವಿಜಯಪುರ ಗರಿಷ್ಠ 32 ಕನಿಷ್ಠ 19, ಬೀದರ್ ಗರಿಷ್ಠ 30 ಕನಿಷ್ಠ 18, ಕಲಬುರಗಿ ಗರಿಷ್ಠ 32 ಕನಿಷ್ಠ 18, ಬಾಗಲಕೋಟೆಯಲ್ಲಿ ಗರಿಷ್ಠ 32 ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎನ್ನುವ ಮಾಹಿತಿ ನೀಡಿದೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications